ಶಿರೂರು ಮನೆಗೆ ನುಗ್ಗಿದ ಕಳ್ಳರು, 30 ಲಕ್ಷ ನಗ -ನಗದು ಕಳ್ಳತನ
Team Udayavani, Apr 11, 2023, 5:40 AM IST
ಬೈಂದೂರು: ಇಲ್ಲಿನ ಮಾರ್ಕೆಟ್ ಬಳಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು 18 ಲಕ್ಷ ರುಪಾಯಿ ಚಿನ್ನ ಹಾಗೂ 12 ಲಕ್ಷ ನಗದು ಕದ್ದೊಯ್ದಿದ್ದಾರೆ.ಶಿರೂರು ಮಾರ್ಕೆಟ್ ಬಳಿ ಹಾರ್ಡ್ವೇರ್ ಉದ್ಯಮ ನಡೆಸುತ್ತಿರುವ ಅಜೀಮ್ ಎನ್ನುವವರ ಮನೆಯಲ್ಲಿ ಕಳ್ಳತನ ನಡೆದಿದೆ.ರಾತ್ರಿ ಊಟ ಮಾಡಿ ಮಸೀದಿಗೆ ಪ್ರಾರ್ಥನೆಗೆ ತೆರಳಿ ವಾಪಾಸ್ಸು ಬರುವ ವೇಳೆ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ.ಸರಣಿ ರಜೆ ಇರುವ ಕಾರಣ ವ್ಯಾಪಾರದ ಹಣವನ್ನು ಬ್ಯಾಂಕಿಗೆ ಹಾಕಲಾಗದೆ ಮನೆಯಲ್ಲಿಟ್ಟಿದ್ದರು.ಈ ಕುರಿತು ಮಾಹಿತಿ ಇರುವವರೆ ಕಳ್ಳತನ ನಡೆಸಿರುವ ಸಾಧ್ಯತೆ ಕೂಡ ಇದೆ.
ರಾತ್ರಿಯಿಡೀ ತೆರೆದಿರುವ ಅನಧೀಕ್ರತ ಅಂಗಡಿಗಳು,ಗಾಂಜಾ ಅಕ್ರಮ ಚಟುವಟಿಕೆಯ ತಾಣವಾದ ಹೆದ್ದಾರಿ ಬದಿ ಅಂಗಡಿಗಳು. ಗಂಭೀರವಾಗಿ ಪರಿಗಣಿಸದ ಇಲಾಖೆ;ಶಿರೂರು ಟೋಲ್ ಗೇಟ್ ಸಮೀಪದಿಂದ ಸೇರಿ ಬೈಂದೂರು ಮರವಂತೆಯವರಗೆ ಹೆದ್ದಾರಿ ಪಕ್ಕದಲ್ಲಿ ಅನಧೀಕೃತ ಅಂಗಡಿಗಳು ದಿನಕ್ಕೊಂದರಂತೆ ತಲೆ ಎತ್ತುತ್ತಿದೆ.ಮಾತ್ರವಲ್ಲದೆ ಯಾವುದೆ ಅನುಮತಿ ದಾಖಲೆ ಇಲ್ಲದಿದ್ದರು ಕೂಡ ರಾತ್ರಿ ಇಡಿ ತೆರೆದಿರುವುದರ ಜೊತೆಗೆ ಮದ್ಯ ಮಾರಾಟ ನಡೆಯುತ್ತಿರುವುದು ಕುರಿತು ಸಾರ್ವಜನಿಕರು ಹಲವು ಬಾರಿ ದೂರು ನೀಡಿದ್ದರು.ಶಿರೂರು ಟೋಲ್ಗೇಟ್ ಪರಿಸರದಲ್ಲಿ ಇದುವರಗೂ ಹಲವು ಗಾಂಜಾ ಪ್ರಕರಣಗಳು ಪತ್ತೆಯಾಗಿದೆ.ಈ ಭಾಗದಲ್ಲಿ ಅನೇಕ ಅಪರಿಚಿತ ವಾಹನಗಳು ರಾತ್ರಿ ವೇಳೆ ಬರುತ್ತಿವೆ.ಮದ್ಯ ಮಾರಾಟ,ಗೋ
ಕಳ್ಳತನ,ಸಾಗಾಟ,ಗಾಂಜಾ ವ್ಯವಹಾರ ಕೂಡ ನಡೆಯುತ್ತಿರುವ ಮಾಹಿತಿಗಳಿವೆ.ಕಳೆದ ವಾರ ಧಾರ್ಮಿಕ ಕಾರ್ಯಕ್ರಮದ ಬ್ಯಾನರ್ ಕೂಡ ಕಿಡಿಗೇಡಿಗಳು ಹರಿದು ಹಾಕಿದ್ದರು.ಇಲ್ಲಿನ ಅಂಗಡಿಗಳು ರಾತ್ರಿಯಿಡಿ ತೆರೆದಿರುವುದೆ ಇದಕ್ಕೆ ಕಾರಣವಾಗಿರುವ ಸಾಧ್ಯತೆಗಳಿವೆ.ಕನಿಷ್ಟ ಪಕ್ಷ ರಾತ್ರಿ ಹನ್ನೆರಡು ಗಂಟೆಯ ಬಳಿಕ ಇಂತಹ ಅನಧೀಕ್ರತ ಅಂಗಡಿಗಳು ಮುಚ್ಚಿದರೆ ಅಪರಾಧ ಪ್ರಕರಣ ಕಡಿಮೆಯಾಗುತ್ತದೆ ಅನೋ°ದು ಸಾರ್ವಜನಿಕ ವಿಚಾರ. ಹೀಗಾಗಿ ಇಲಾಖೆ ಸಾರ್ವಜನಿಕರ ಹಿತದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಬೇಕಿದೆ.ಚುನಾವಣೆ ಹಿನ್ನೆಲೆಯಲ್ಲಿ ವಿಶೇಷ ಚೆಕ್ ಪೋಸ್ಟ್ ,ಗಸ್ತುವಾಹನ,ತಪಾಸಣೆ ಇದ್ದರು ಕೂಡ ಇಷ್ಟು ದೊಡ್ಡ ಕಳ್ಳತನ ನಡೆದಿರುವುದು ಆತಂಕ ಉಂಟು ಮಾಡಿದೆ.ಶಿರೂರು ಪರಿಸರದಲ್ಲಿ ಸಣ್ಣಪುಟ್ಟ ಕಳ್ಳತನ ನಿರಂತರವಾಗಿ ನಡೆಯುತ್ತಿದೆ.ಹೀಗಾಗಿ ಇಲಾಖೆ ಕಾನೂನು ಸುರಕ್ಷತೆ ದೃಷ್ಟಿಯಿಂದ ಒಂದಿಷ್ಟು ಬಿಗಿ ಕ್ರಮಕೈಗೊಳ್ಳಬೇಕಿದೆ.ಕಳ್ಳತನ ನಡೆದಿರುವ ಸ್ಥಳಕ್ಕೆ ಬೆ„ಂದೂರು ಆರಕ್ಷಕ ತಂಡ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್