Kadaba: ಹಾಲಿನ ಟ್ಯಾಂಕರ್ ಪಲ್ಟಿ
Team Udayavani, Apr 15, 2023, 5:09 AM IST
ಕಡಬ: ಕೆಎಂಎಫ್ಗೆ ಹಾಲು ಸರಬರಾಜು ಮಾಡುವ ಟ್ಯಾಂಕರ್ ಒಂದು ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ಧಾರಿಯ ಕುಂತೂರು ಗ್ರಾಮದ ಮುರಚೆಡವು ಎಂಬಲ್ಲಿ ಶುಕ್ರವಾರ ಸಂಜೆ ಪಲ್ಟಿಯಾಗಿ ಸಾವಿರಾರು ಲೀಟರ್ ಹಾಲು ನಷ್ಟವಾಗಿದೆ.
ಮುರಚೆಡವು ತಿರುವಿನಲ್ಲಿ ಚಾಲಕ ಶಶಿಧರ ಎಂಬವರ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಟ್ಯಾಂಕರ್ ಚರಂಡಿಗೆ ಬಿದ್ದಿದೆ. ಪಲ್ಟಿಯಾದ ರಭಸಕ್ಕೆ ಹಾಲು ಚರಂಡಿಗೆ ಚೆಲ್ಲಿದ್ದು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ಧಾರೆ. ಉದನೆಯಿಂದ ಕಲ್ಲುಗುಡ್ಡೆ, ಕಡಬ ಮುಖಾಂತರ ಪದವು ಹಾಲಿನ ಸೊಸೈಟಿಯ ಹಾಲನ್ನು ಸಂಗ್ರಹಿಸಿ ಮಂಗಳೂರಿನ ಕೆಎಂಎಫ್ಗೆ ಹೋಗಬೇಕಾಗಿದ್ದ ಟ್ಯಾಂಕರ್ ದಾರಿ ಮಧ್ಯದಲ್ಲೇ ಚರಂಡಿಗೆ ಬಿದ್ದಿದೆ. ಸುಮಾರು ಹನ್ನೆರಡು ಸಾವಿರ ಲೀಟರ್ ಹಾಲು ಚರಂಡಿ ಪಾಲಾಗಿದೆ. ರಾತ್ರಿ ಹೊತ್ತಿಗೆ ಟ್ಯಾಂಕರನ್ನು ಕ್ರೇನ್ ಮೂಲಕ ಮೇಲೆತ್ತಲಾಗಿದೆ. ಸ್ಥಳಕ್ಕೆ ಕಡಬ ಪೋಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ಧಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ