ಮೇ 6: ಯೋಗಿ ಆದಿತ್ಯನಾಥ್ ದ.ಕ, ಉಡುಪಿ ಜಿಲ್ಲೆಗೆ ಭೇಟಿ
Team Udayavani, Apr 29, 2023, 7:20 AM IST
ಉಡುಪಿ: ಮೇ 6ಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಮೇ 6 ರಂದು ಬೆಳಗ್ಗೆ ಶೃಂಗೇರಿಯಲ್ಲಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಪುತ್ತೂರಿಗೆ 12.30ಕ್ಕೆ ಆಗಮಿಸಲಿದ್ದಾರೆ. ಅನಂತರ ಮಧ್ಯಾಹ್ನ 2 ಗಂಟೆಗೆ ಬಂಟ್ವಾಳ, ಮಧ್ಯಾಹ್ನ 3.30ಕ್ಕೆ ಕಾರ್ಕಳ, 5 ಗಂಟೆಗೆ ಹೊನ್ನಾವರಕ್ಕೆ ಭೇಟಿ ನೀಡಲಿದ್ದು, ಮುರುಡೇಶ್ವರದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಮಂಗಳೂರು ವಿಭಾಗ ಉಸ್ತುವಾರಿ ಉದಯಕುಮಾರ್ ಶೆಟ್ಟಿ ಕಿದಿಯೂರು ತಿಳಿಸಿದ್ದಾರೆ.
ಮಂಗಳೂರು: ಜಿಲ್ಲೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಕೂಡ ಆಗಮಿಸುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮೇ 3ರಂದು ಸಮಾವೇಶ ನಡೆಸುವ ಮೂಲ್ಕಿಯಲ್ಲೇ ಮೇ 7ರಂದು ಪ್ರಿಯಾಂಕಾ ಗಾಂಧಿ ಅವ ರು ರೋಡ್ ಶೋ ನಡೆಸುವ ಬಗ್ಗೆ ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸಿದ್ದಾರೆ.
ರಾಹುಲ್ ಗಾಂಧಿ ನಗರದಲ್ಲಿ ಸಮಾವೇಶ ನಡೆಸಿರುವ ಕಾರಣ ಮತ್ತೆ ಪ್ರಿಯಾಂಕಾ ಗಾಂಧಿಯವರ ಕಾರ್ಯಕ್ರಮದ ಬದಲು ರೋಡ್ ಶೋಗೆ ಪ್ರಾಮುಖ್ಯ ನೀಡಲು ಯೋಚಿಸಲಾಗುತ್ತಿದೆ.
ಎ. 27ರಂದು ನಗರದಲ್ಲಿ ಕಾರ್ಯಕ್ರಮ ನಡೆಸಿದ ಬಳಿಕ ನಗರದಲ್ಲಿ ಸೀಫುಡ್ ಸೇವಿಸಿ, ಗಡ್ಬಡ್, ತಿರಮಿಸು ಐಸ್ಕ್ರೀಂ ಕೂಡ ಸವಿದ ರಾಹುಲ್ ಗಾಂಧಿ ಅವರು ನಗರದ ಖಾಸಗಿ ಹೊಟೇಲ್ನಲ್ಲಿ ತಂಗಿದ್ದರು. ಯಾವುದೇ ಅಧಿಕೃತ ಸಭೆ, ಸಮಾಲೋಚನೆ ಇರಲಿಲ್ಲ. ಶುಕ್ರವಾರ ಬೆಳಗ್ಗೆ ಅವರು
ಕಲಬುರಗಿಗೆ ತೆರಳಿದರು.
ಮೇ 7: ಮೂಲ್ಕಿಯಲ್ಲಿ ಪ್ರಿಯಾಂಕಾ ಪ್ರಚಾರ?
ಮಂಗಳೂರು: ಜಿಲ್ಲೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಕೂಡ ಆಗಮಿಸುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮೇ 3ರಂದು ಸಮಾವೇಶ ನಡೆಸುವ ಮೂಲ್ಕಿಯಲ್ಲೇ ಮೇ 7ರಂದು ಪ್ರಿಯಾಂಕಾ ಗಾಂಧಿ ಅವ ರು ರೋಡ್ ಶೋ ನಡೆಸುವ ಬಗ್ಗೆ ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸಿದ್ದಾರೆ.
ರಾಹುಲ್ ಗಾಂಧಿ ನಗರದಲ್ಲಿ ಸಮಾವೇಶ ನಡೆಸಿರುವ ಕಾರಣ ಮತ್ತೆ ಪ್ರಿಯಾಂಕಾ ಗಾಂಧಿಯವರ ಕಾರ್ಯಕ್ರಮದ ಬದಲು ರೋಡ್ ಶೋಗೆ ಪ್ರಾಮುಖ್ಯ ನೀಡಲು ಯೋಚಿಸಲಾಗುತ್ತಿದೆ.
ಎ. 27ರಂದು ನಗರದಲ್ಲಿ ಕಾರ್ಯಕ್ರಮ ನಡೆಸಿದ ಬಳಿಕ ನಗರದಲ್ಲಿ ಸೀಫುಡ್ ಸೇವಿಸಿ, ಗಡ್ಬಡ್, ತಿರಮಿಸು ಐಸ್ಕ್ರೀಂ ಕೂಡ ಸವಿದ ರಾಹುಲ್ ಗಾಂಧಿ ಅವರು ನಗರದ ಖಾಸಗಿ ಹೊಟೇಲ್ನಲ್ಲಿ ತಂಗಿದ್ದರು. ಯಾವುದೇ ಅಧಿಕೃತ ಸಭೆ, ಸಮಾಲೋಚನೆ ಇರಲಿಲ್ಲ. ಶುಕ್ರವಾರ ಬೆಳಗ್ಗೆ ಅವರು
ಕಲಬುರಗಿಗೆ ತೆರಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್