ಅಲ್ ನಾಸರ್ ಗೆ ವಿದಾಯ? ಕ್ರಿಸ್ಟಿಯಾನೊ ರೊನಾಲ್ಡೊ ಕ್ಲಬ್‌ ಆಟ ಮುಕ್ತಾಯ?


Team Udayavani, May 4, 2023, 12:54 PM IST

cristiano ronaldo al nassr

ರಿಯಾಧ್‌: ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡವನ್ನು ತ್ಯಜಿಸಿ ಸೌದಿ ಅರೇಬಿಯದ ಅಲ್‌ ನಾಸ್ರ್ ತಂಡವನ್ನು ಕೂಡಿಕೊಂಡ ಫ‌ುಟ್‌ಬಾಲ್‌ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ಅಲ್ಲಿಂದಲೂ ಹೊರಬೀಳಲಿದ್ದಾರಾ? ಹೌದು ಎನ್ನುತ್ತವೆ ಮೂಲಗಳು.

ಒಂದು ಕಾಲದಲ್ಲಿ ರಿಯಲ್‌ ಮ್ಯಾಡ್ರಿಡ್‌ ತಂಡದ ಪರ ಆಡಿ ಅದನ್ನು ಆಳಿದ್ದ ಕ್ರಿಸ್ಟಿಯಾನೊ ರೊನಾಲ್ಡೊ, ಈಗ ಮತ್ತೆ ಅದೇ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ. ಆದರೆ ಆಟಗಾರನಾಗಿಯಲ್ಲ, ರಾಯಭಾರಿಯಾಗಿ! ಹೀಗೆ ನೋಡಿದರೆ ರೊನಾಲ್ಡೊ ಫುಟ್‌ ಬಾಲ್‌ ಆಟ ಅಧಿಕೃತವಾಗಿ ಮುಕ್ತಾಯದ ಹಂತಕ್ಕೆ ಬಂದಿದೆ ಎಂದೇ ಹೇಳಬಹುದು.

ಅಲ್‌ ನಾಸ್ರ್ ಪರ 12 ಗೋಲು ಬಾರಿಸಿ ಸೌದಿ ಅರೇಬಿಯ ಲೀಗ್‌ನಲ್ಲಿ ತಂಡವನ್ನು 2ನೇ ಸ್ಥಾನಕ್ಕೆ ರೊನಾಲ್ಡೊ ಒಯ್ದಿದ್ದಾರೆ. ಈಗವರಿಗೆ ರಿಯಲ್‌ ಮ್ಯಾಡ್ರಿಡ್‌ನಿಂದ ಕರೆ ಬಂದಿದೆ, ರಾಯಭಾರಿಯಾಗುವ ಅವಕಾಶ ನೀಡಲಾಗಿದೆ. ಇದನ್ನು ರೊನಾಲ್ಡೊ ಕೂಡ ಒಪ್ಪಿಕೊಳ್ಳುವ ನಿರೀಕ್ಷೆಯಿದೆ. ಅದಾಗಿದ್ದೇ ಆದರೆ ಅಲ್‌ ನಾಸ್ರ್ಗೆ ಅವಧಿಗೆ ಮುನ್ನವೇ ಅವರು ವಿದಾಯ ಹೇಳುತ್ತಾರೆ. ಜೊತೆಗೆ ಲೀಗ್‌ ಮಾದರಿಯ ಫ‌ುಟ್‌ಬಾಲ್‌ನಲ್ಲೂ ಅವರ ಆಟ ಮುಗಿಯಬಹುದು.

ಇನ್ನು ಮುಂದಿನ ವರ್ಷ ಜೂನ್‌, ಜುಲೈನಲ್ಲಿ ನಡೆಯುವ ಯೂರೊ ಕಪ್‌ನಲ್ಲಿ ಪೋರ್ಚುಗಲ್‌ ಪರ ಆಡಲು ಅವರು ಬಯಸಿದ್ದಾರೆ. ಅಂತಾರಾಷ್ಟ್ರೀಯವಾಗಿ ಅದೇ ಅವರ ಕಡೆಯ ಕೂಟವಾಗುವುದು ನಿಶ್ಚಿತ. ಆದರೆ ಈ ತಂಡಕ್ಕೆ ಅವರು ಆಯ್ಕೆಯಾಗುತ್ತಾರಾ ಎನ್ನುವುದೇ ಪ್ರಶ್ನೆ. ಆ ಹೊತ್ತಿಗೆ 39 ವರ್ಷವಾಗಿರುವುದರಿಂದ, ಇದೇ ಅವರ ಆಯ್ಕೆಗೆ ಸಮಸ್ಯೆಯಾಗಬಹುದು.

ರಿಯಲ್‌ ಮ್ಯಾಡ್ರಿಡ್‌ನ‌ಲ್ಲಿ: ಹಿಂದೆ ಸ್ಪೇನಿನ ಈ ಖ್ಯಾತ ತಂಡದ ಪರ 438 ಪಂದ್ಯವಾಡಿದ್ದ ಅವರು 451 ಗೋಲುಗಳನ್ನು ಬಾರಿಸಿದ್ದರು. ಅನಂತರ ಜ್ಯೂವೆಂಟಸ್‌ಗೆ ತೆರಳಿದ್ದರು. ಅದನ್ನೂ ತ್ಯಜಿಸಿ ಮ್ಯಾಂಚೆಸ್ಟರ್‌ ಯುನೈಟೆಡ್‌ಗೆ ಕಾಲಿಟ್ಟಿದ್ದರು. ಕಳೆದ ವರ್ಷದ ಕೊನೆಗೆ ಆ ತಂಡದ ಸಂಬಂಧ ಕಡಿದುಕೊಂಡು ಈ ವರ್ಷಾರಂಭದಲ್ಲಿ ಅಲ್‌ ನಾಸ್ರ್ ಗೆ ಸೇರಿದ್ದರು. ಆದರೆ ಕೆಲವೇ ತಿಂಗಳಲ್ಲಿ ಈ ತಂಡದೊಂದಿಗೆ ಅವರ ಬಾಂಧವ್ಯ ಮುಗಿಯುವ ಹಂತಕ್ಕೆ ಬಂದಿದೆ.

ಟಾಪ್ ನ್ಯೂಸ್

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

accident

Koppal; ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಢಿಕ್ಕಿ: ಸ್ಥಳದಲ್ಲೇ ನಾಲ್ವರ ಸಾವು

ಅಂಜಲಿ ಕೊಲೆಯಲ್ಲಿ ಪೊಲೀಸರ ಲೋಪ: ಡಾ| ಜಿ. ಪರಮೇಶ್ವರ್‌

ಅಂಜಲಿ ಕೊಲೆಯಲ್ಲಿ ಪೊಲೀಸರ ಲೋಪ: ಡಾ| ಜಿ. ಪರಮೇಶ್ವರ್‌

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

1-qweqwew

Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ

Rain 2

Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ICC T20 world cup 2024 warm up match schedule

T20 World Cup: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಒಂದೇ ಪಂದ್ಯ

IPL 2024: ಅಂತಿಮ ಪಂದ್ಯದಲ್ಲಿ ಮುಂಬೈಗೆ ಲಕ್ನೋ ಎದುರಾಳಿ

IPL 2024: ಅಂತಿಮ ಪಂದ್ಯದಲ್ಲಿ ಮುಂಬೈಗೆ ಲಕ್ನೋ ಎದುರಾಳಿ

32

Match fixing: ಭಾರತದ ಪ್ರಜೆಗಳಿಬ್ಬರ ಪಾಸ್‌ಪೋರ್ಟ್‌ ವಶಕ್ಕೆ ಆದೇಶ

30

ICC T20 Rankings : ಭಾರತ, ಸೂರ್ಯಕುಮಾರ್‌ ನಂ.1

Paris Olympics: ಟೇಬಲ್‌ ಟೆನಿಸ್‌; ಶರತ್‌, ಮಣಿಕಾ ನೇತೃತ್ವ

Paris Olympics: ಟೇಬಲ್‌ ಟೆನಿಸ್‌; ಶರತ್‌, ಮಣಿಕಾ ನೇತೃತ್ವ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

accident

Koppal; ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಢಿಕ್ಕಿ: ಸ್ಥಳದಲ್ಲೇ ನಾಲ್ವರ ಸಾವು

ಅಂಜಲಿ ಕೊಲೆಯಲ್ಲಿ ಪೊಲೀಸರ ಲೋಪ: ಡಾ| ಜಿ. ಪರಮೇಶ್ವರ್‌

ಅಂಜಲಿ ಕೊಲೆಯಲ್ಲಿ ಪೊಲೀಸರ ಲೋಪ: ಡಾ| ಜಿ. ಪರಮೇಶ್ವರ್‌

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

1-wewqewq

Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.