ಎಐಸಿಸಿ ಅಧ್ಯಕ್ಷ ಖರ್ಗೆ ಹತ್ಯೆಗೆ ಸಂಚಿನ ವಿಡಿಯೋ: ನಟಿ ರಮ್ಯಾ ಆಘಾತ
ಯಾವುದೇ ಸಂಘಟನೆ ನಿಷೇಧ ಎನ್ನುವುದೇ ತಪ್ಪು; ತಪ್ಪು ಮಾಡಿದರೆ ಕಾನೂನು ಇದೆ
Team Udayavani, May 6, 2023, 4:17 PM IST
ವಿಜಯಪುರ: ಕಾನೂನು ಬಾಹಿರ ಕೃತ್ಯ ಮಾಡುವ ಯಾವುದೇ ಸಂಘಟನೆ ಮೇಲೆ ಕ್ರಮ ಕೈಗೊಳ್ಳಲು ಕಾನೂನುಗಳಿವೆ. ಹೀಗಾಗಿ ಸಂಘಟನೆಗಳ ನಿಷೇಧ ಎನ್ನುವುದೇ ತಪ್ಪು. ಭಜರಂಗದ ನಿಷೇಧ ಎಂಬುದೂ ಸರಿಯಲ್ಲ ಎಂದು ಕಾಂಗ್ರೆಸ್ ಸ್ಟಾರ್ ಕ್ಯಾಂಪೇನರ್, ಮಾಜಿ ಸಂಸದೆ ರಮ್ಯಾ ಅಭಿಪ್ರಾಯ ಪಟ್ಟರು.
ಶನಿವಾರ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಹತ್ಯೆಗೆ ಮಣಿಕಂಠ ರಾಠೋಡ ಮಾತನಾಡಿರುವ ಆಡಿಯೋ ವೈರಲ್ ಆಗಿದೆ ಎನ್ನುವುದು ನಿಜಕ್ಕೂ ಅಪಾಯಕಾರಿ. ರಾಜಕೀಯ ಇಷ್ಟು ಕೀಳು ಮಟ್ಟಕ್ಕೆ ಹೋಗಿರುವುದು ಅಘಾತಕಾರಿ ಸಂಗತಿ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಅವರ ಬೆಂಗಳೂರಿಗೆ ಬಂದಿರುವುದು ಒಳ್ಳೆಯದೇ, ಅವರಿಗೆ ಬೆಂಗಳೂರಿನ ವಾಸ್ತವಿಕ ಸುಸ್ಥಿತಿ ಅರಿವಿಗೆ ಬಂದಿದೆ. ರಾಜಧಾನಿ ಜನ ಅನುಭವಿಸುವ ಕಷ್ಟಗಳು, ಗುಂಡಿಬಿದ್ದ ರಸ್ತೆಗಳ ದರ್ಶನವಾಗಲಿದೆ ಎಂದು ಛೇಡಿಸಿದರು.
ಡಬಲ್ ಎಂಜಿನ್ ಸರ್ಕಾರವಲ್ಲ, ಟ್ರಬಲ್ ಎಂಜಿನ್ ಸರ್ಕಾರ. ಪ್ರಧಾನಿ ಮೋದಿ ಮತ್ತವರ ಕೇಂದ್ರ ಸಚಿವರ ತಂಡ ಕರ್ನಾಟಕ ರಾಜ್ಯದಲ್ಲೇ ಬಿಡುಬಿಟ್ಟು, ಚುನಾವಣೆ ಪ್ರಚಾರದಲ್ಲಿ ಓಡಾಡಲು ಕಾರಣವೇ ರಾಜ್ಯ ಸರ್ಕಾರದ ವೈಫಲ್ಯ ಎಂಬುದು ಸಾಬೀತಿಗೆ ಸಾಕ್ಷಿ ಎಂದು ಹರಿ ಹಾಯ್ದರು.
ಕಾವೇರಿ ತೀರ್ಪಿನ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವರಾಗಿ ಎಂ.ಬಿ.ಪಾಟೀಲ ದೆಹಲಿಗೆ ಬಂದಿದ್ದರು. ಓರ್ವ ಸಚಿವರಾಗಿ ಅವರು ದೆಹಲಿಗೆ ಬರುವ ಅಗತ್ಯವೇ ಇರಲಿಲಿಲ್ಲ. ಆದರೆ ರಾಜ್ಯದ ನೀರು, ನೀರಾವರಿ ವಿಷಯದಲ್ಲಿ ಪಾಟೀಲ ಅವರು ಹೊಂದಿರುವ ಕಾಳಜಿ, ಆಸಕ್ತಿಯೇ ಇದಕ್ಕೆ ಸಾಕ್ಷಿ. ಹೀಗಾಗಿ ಓರ್ವ ಸ್ಟಾರ್ ಕ್ಯಾಂಪೇನರ್ ಆಗಿ ಅವರ ಬಬಲೇಶ್ವರ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದು, ಸಂತಸ ತಂದಿದೆ ಎಂದರು.
ನನ್ನ ತಂದೆಗೆ ಎಂ.ಬಿ.ಪಾಟೀಲ ಅತ್ಮೀಯರೂ ಅಗಿದ್ದರು. ಸಂಸದೆಯಾಗಿದ್ದಾಗ ನನ್ನ ಗೆಲುವಿಗೆ ಶ್ರಮಿಸಿದ್ದರು. ಇಂಥ ಎಲ್ಲ ಕಾರಣಗಳು ಅವರ ಪರ ಪ್ರಚಾರ ಮಾಡಲು ಸಂತಸ ತಂದಿದೆ ಎಂದರು.
ಸುಮಲತಾ ರಾಜಕೀಯ ನಿಲುವು, ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದ ರಮ್ಯಾ, ತಾವು ಚುನಾವಣಾ ಸಕ್ರೀಯ ರಾಜಕಾರಣಕ್ಕೆ ಬರುವ ಕುರಿತು ಇನ್ನೂ ನಿರ್ಧರಿಸಿಲ್ಲ ಎಂದು ಸಮಜಾಯಿಷಿ ನೀಡಿದರು.
ಬಬಲೇಶ್ವರ ಕ್ಷೇತ್ರದಲ್ಲಿ ನೀರಾವರಿ ಮಾಡಿರುವುದರಿಂದ ದ್ರಾಕ್ಷಿ, ಕಬ್ಬು ಬೆಳೆಯುತ್ತಿರುವ ಅಲ್ಲಿನ ಜನರಲ್ಲಿ ಕಾಂಗ್ರೆಸ್ ಪರ ತುಂಬಾ ಉತ್ಸಾಹ ಕಂಡು ಬರುತ್ತಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ.ಪಾಟೀಲ ಆಯ್ಕೆ ಖಚಿತವಾಗಿದೆ ಎಂದರು.
ಬಬಲೇಶ್ವರ ಬಿಜೆಪಿ ಅಭ್ಯರ್ಥಿ ತಮ್ಮ ಮಕ್ಕಳ ಕೈಗೆ ಗನ್ ಕೊಟ್ಟಿದ್ದಾರೆ. ಭವಿಷ್ಯದಲ್ಲಿ ಕ್ಷೇತ್ರಕ್ಕೆ ಇಂಥವರು ಆಯ್ಕೆಯಾದರೆ ಕ್ಷೇತ್ರದ ಜನರ ಮಕ್ಕಳ ಕೈಗೆ ಗನ್, ಮದ್ಯದ ಬಾಟಲಿ ನೀಡುತ್ತಾರೆ. ಅಲ್ಲಿನ ಜನರ ಮಕ್ಕಳ ಕೈಗೆ ಪೆನ್ನು, ಪುಸ್ತಕ ಕೊಡುವವರು ಬೇಕಿದ್ದಾರೆಯೇ ಹೊರತು, ಗನ್ ಕೊಡುವವರಲ್ಲ ಎಂದು ಜನ ಹೇಳುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್
Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
MUST WATCH
ಹೊಸ ಸೇರ್ಪಡೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?