IPL 2023: ಔಟ್.. ನೋಬಾಲ್.. ಸಿಕ್ಸ್… ಸಮದ್ ಎದುರಿಸಿದ ಆ ಕೊನೆಯ ಬಾಲ್ ನ ವಿಡಿಯೋ ನೋಡಿ
Team Udayavani, May 8, 2023, 11:48 AM IST
ಜೈಪುರ: ಇಲ್ಲಿನ ಸವಾಯ್ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಐಪಿಎಲ್ ಪಂದ್ಯವು ರೋಮಾಂಚಕ ತಿರುವುಗಳಿಗೆ ಸಾಕ್ಷಿಯಾಯಿತು. ಕುತೂಹಲಕಾರಿಯಾಗಿ ನಡೆದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಗೆಲುವು ಸಾಧಿಸಿತು.
ಕೊನೆಯ ಓವರ್ ಗೆ 17 ರನ್ ಬೇಕಿದ್ದ ಪಂದ್ಯ ಕೊನೆಯ ಎಸೆತದಲ್ಲಿ ಐದು ರನ್ ತನಕ ಬಂದಿತ್ತು. ಅಬ್ದುಲ್ ಸಮದ್ ಸ್ಟ್ರೈಕ್ ನಲ್ಲಿದ್ದರು. ಸಂದೀಪ್ ಶರ್ಮಾ ಎಸೆತವನ್ನು ಸಮದ್ ಲಾಂಗ್ ಆಫ್ ಗೆ ಚಚ್ಚಿದರು. ಲಾಂಗ್ ಆಫ್ ಫೀಲ್ಡರ್ ಕ್ಯಾಚ್ ಹಿಡಿದಾಗ ರಾಜಸ್ಥಾನ ಆಟಗಾರರು ಪಂದ್ಯ ಗೆದ್ದ ಸಂತಸದಲ್ಲಿ ಕುಣಿದಾಡಿದರು. ಆದರೆ ಅದು ನೋ ಬಾಲ್ ಆಗಿತ್ತು. ಶರ್ಮಾ ಬೌಲಿಂಗ್ ಕ್ರೀಸ್ ನಿಂದ ಎದುರು ಕಾಲಿಟ್ಟು ಚೆಂಡೆಸೆದಿದ್ದರು.
ಸಮದ್ ಮತ್ತು ಹೈದರಾಬಾದ್ ಗೆ ಮತ್ತೊಂದು ಅವಕಾಶ. ಅದೂ ಫ್ರೀ ಹಿಟ್. ಮತ್ತೊಂದು ಯಾರ್ಕರ್ ಪ್ರಯತ್ನಿಸಿದ ಶರ್ಮಾ ಸ್ವಲ್ಪ ಎಡವಿದರು. ಈ ಬಾರಿ ತಪ್ಪು ಮಾಡದ ಸಮದ್ ಚೆಂಡನ್ನು ಸಿಕ್ಸರ್ ಗೆ ಬಾರಿಸಿದರು. ಹೈದರಾಬಾದ್ ತಂಡವು ಗೆಲುವು ಸಾಧಿಸಿತು.
WHAT A MATCH , Last Over
Glenn Phillips & Abdul Samad won for SRH from Rajasthan Royals
Cricket Script is unbelievable!
Sandeep Sharma No Ball cost to RR.
Once this is done by RP Singh vs CSK
Sanju Samson has no Idea. Harry Brook missed#RRvsSRH #SRHvsRR #TATAIPL #IPL2O23 #RRvSRH pic.twitter.com/uQCbJE3Zf9— Saurabh Cricket Wander (@VlogsSaurabh) May 7, 2023
ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ ರಾಯಲ್ಸ್ ತಂಡವು ಎರಡು ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿದರೆ, ಸನ್ ರೈಸರ್ಸ್ ಹೈದರಾಬಾದ್ ತಂಡವು ಆರು ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿ ಜಯ ಸಾಧಿಸಿತು.
ಇದು ಜೈಪುರ ಮೈದಾನದಲ್ಲಿ ಚೇಸ್ ಮಾಡಲಾದ ಅತೀ ದೊಡ್ಡ ಮೊತ್ತವಾಗಿದೆ. ಈ ಹಿಂದೆ 2012ರಲ್ಲಿ 197 ರನ್ ಚೇಸ್ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ಕೊಹ್ಲಿಯನ್ನು ಮತ್ತೆ ನಾಯಕನನ್ನಾಗಿ ಮಾಡಬೇಕು: ಹರ್ಭಜನ್ ಹೇಳಿದ್ದೇನು?
ಟೀಂ ಇಂಡಿಯಾದಲ್ಲೂ ರೋಹಿತ್ ಕೆರಿಯರ್ ಮುಗಿಸಿದ್ರಾ ಹಾರ್ದಿಕ್ ಪಾಂಡ್ಯ? ಏನಿದು ವರದಿ
T20 ಕ್ರಿಕೆಟ್ ನಿಂದ ರೋಹಿತ್ ನಿವೃತ್ತಿ? ಹಾರ್ದಿಕ್ ತಂಡ ಸೇರ್ಪಡೆಗೆ ಹಿಟ್ ಮ್ಯಾನ್ ಕಾರಣ?
RCB ಪ್ಲೇಆಫ್ ತಲುಪಲು ಚೆನ್ನೈಯನ್ನು ಎಷ್ಟು ರನ್ ಗಳಿಂದ ಸೋಲಿಸಬೇಕು? ಹೀಗಿದೆ ಲೆಕ್ಕಾಚಾರ
Play Off ಸಡಗರದಲ್ಲಿರುವ ಕೆಕೆಆರ್ ಎದುರಾಳಿ: ಪವಾಡದ ನಿರೀಕ್ಷೆಯಲ್ಲಿ ಗುಜರಾತ್
MUST WATCH
ಹೊಸ ಸೇರ್ಪಡೆ
ಅಗ್ನಿ ದೇವರು ಎನ್ನುವವರು ಅದರ ಜತೆ ಮಲಗುತ್ತಿರಾ ಎಂದಿದ್ದ ಬಸವಣ್ಣ : ನಿಜಗುಣಾನಂದ ಶ್ರೀ
Mundgod: ಬೈಕ್ ಗಳ ನಡುವೆ ಮುಖಾಮುಖಿ ; ಓರ್ವ ಸಾವು, ಇಬ್ಬರು ಗಂಭೀರ
Rahul Gandhi ಅವರಿಗೆ ಪತ್ರ ಬರೆದು ಬಹಿರಂಗ ಚರ್ಚೆಗೆ ಪ್ರತಿನಿಧಿ ಸಿದ್ದ ಎಂದ ತೇಜಸ್ವಿ ಸೂರ್ಯ
Nomination; ವಾರಾಣಸಿಯಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
Hunsur: ಭಾರೀ ಮಳೆ; ಮನೆಗಳಿಗೆ ನುಗ್ಗಿದ ಮಳೆನೀರು; ಬೆಳೆ ಹಾನಿ, ರೈತರಿಗೆ ಸಂಕಷ್ಟ