ದಲಿತನೆಂಬ ಕಾರಣಕ್ಕೆ ಕುದುರೆಯಿಂದ ಕೆಳಗಿಳಿಸಿ ಅವಮಾನ
Team Udayavani, May 11, 2023, 7:43 AM IST
ಲಕ್ನೋ: ದಲಿತನೆಂಬ ಕಾರಣಕ್ಕೆ ಮದುವೆಯ ಮೆರವಣಿಗೆಯಲ್ಲಿದ್ದ 24 ವರ್ಷದ ವರನೊಬ್ಬನಿಗೆ ಕುದುರೆ ಮೇಲಿಂದ ಕೆಳಗಿಳಿಯುವಂತೆ ಮೇಲ್ಜಾತಿಯ ಗುಂಪೊಂದು ಥಳಿಸಿ, ಅವಮಾನಿಸಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ವರದಿಯಾಗಿದೆ.
ಸದರ್ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಸೊಹಲ್ಲಾ ಜಾತವ್ ಬಸ್ತಿ ಪ್ರದೇಶದಲ್ಲಿ, ರಾಧಾ ಕೃಷ್ಣ ಮ್ಯಾರೇಜ್ ಹಾಲ್ನಲ್ಲಿ ದಲಿತ ಕುಟುಂಬವೊಂದರ ಮದುವೆ ಸಮಾರಂಭ ನಡೆಯುತ್ತಿತ್ತು. ಈ ವೇಳೆ ಇದಕ್ಕಿದ್ದಂತೆ ಕೋಲುಗಳನ್ನು ಹಿಡಿದು ಮಂಟಪಕ್ಕ ಆಗಮಿಸಿದ ಮೇಲ್ಜಾತಿಯ ಕೆಲ ಸದಸ್ಯರು, ಮಂಟಪದಲ್ಲಿದ್ದ ಜನರ ಮೇಲೆ ಹಲ್ಲೆ ನಡೆಸಿದ್ದಾರೆ.
ಅಲ್ಲದೇ, ವರ ಅಜಯ್ ಜಾಟವ್ನಿಗೆ ಥಳಿಸಿ ನಮ್ಮ ಊರಿನಲ್ಲಿ ದಲಿತರು ಕುದುರೆ ಮೇಲೆ ಮೆರವಣಿಗೆ ನಡೆಸುವಂತಿಲ್ಲ ಎಂದು ಆಕ್ಷೇಪಿಸಿ ಕೆಳಗಿಳಿಸಿದ್ದಾರೆ. ಈ ಸಂಬಂಧಿಸಿ, ವರನ ಅತ್ತೆ ದೂರು ನೀಡಲು ಮುಂದಾಗಿದ್ದು, ಪೊಲೀಸರು ಸಹಕರಿಸದ ಬಳಿಕ ಆಗ್ರಾ ಕಮಿಷನರ್ ಅವರಿಗೆ ವಿಚಾರ ತಿಳಿಸಿ ದೂರು ದಾಖಲಿಸಿದ್ದಾರೆ.
ಮೇ4 ರಂದೇ ನಡೆದಿರುವ ಘಟನೆ ಈಗ ಬೆಳಕಿಗೆ ಬಂದಿದ್ದು, ಈ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
Ban; ಎಂಡಿಎಚ್, ಎವರೆಸ್ಟ್ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?