ಲೋಕಸಭಾ ಸ್ಥಾನದ ಮೇಲೆ ಕಣ್ಣಿಟ್ಟ ಅಸ್ನೋಟಿಕರ್: ರೂಪಾಲಿ ನಾಯ್ಕ ವಿರುದ್ಧ ಕಿಡಿ


Team Udayavani, May 18, 2023, 4:11 PM IST

ಅಸ್ನೋಟಿಕರ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಂಸದ ಸ್ಥಾನಕ್ಕೆ ರಾಷ್ಟ್ರೀಯ ಪಕ್ಷದಿಂದ  ಸ್ಪರ್ಧಿಸುವ ಬಯಕೆಯಿದೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದರು‌.

ಕಾರವಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಹಿಂದೆ ಲೋಕಸಭೆಗೆ ಸ್ಪರ್ಧಿಸಿ, 30 ದಿನಗಳ ಅತ್ಯಲ್ಪ ಸಮಯದಲ್ಲಿ ಪ್ರಚಾರ ಮಾಡಿ,‌ 3.60 ಲಕ್ಷ ಮತ ಪಡೆದಿದ್ದೆ. ಈ ಸಲ ಲೋಕಸಭಾ ಕ್ಷೇತ್ರದಲ್ಲಿ ಗಂಭೀರವಾಗಿ ಪ್ರಚಾರದಲ್ಲಿ ತೊಡಗಿಕೊಳ್ಳುವೆ. ಆರು ತಿಂಗಳ ಮೊದಲೇ ಕಾರ್ಯ ಪ್ರಾರಂಭಿಸುವೆ ಎಂದರು.

ಕಾರ್ಯಕರ್ತರ ಸಲಹೆ ಪಡೆದು ತಿಂಗಳೊಪ್ಪತ್ತಿನಲ್ಲಿ ರಾಜಕೀಯ ನಿರ್ಧಾರ ಮಾಡುವೆ. ಕಾಂಗ್ರೆಸ್, ಬಿಜೆಪಿಯಲ್ಲಿ ಒಳ್ಳೆಯ ಸಂಪರ್ಕ ಇದೆ. ಮರಾಠಿ, ‌ಕೊಂಕಣಿ, ಹಿಂದಿ, ‌ಇಂಗ್ಲಿಷ್, ಕನ್ನಡ ಬಲ್ಲ ನನಗೆ ಕ್ಷೇತ್ರದಲ್ಲಿ ‌ಈ‌ ಎಲ್ಲಾ ಭಾಷೆ ಮಾತನಾಡುವ ಜನರ ತಲುಪಬಲ್ಲೆ. ಜಾತಿ, ‌ಭಾಷೆ, ಹಣ, ಜನರ‌ ಒಡನಾಟ. ಚುನಾವಣೆ ಗೆಲ್ಲಲು ಅವಶ್ಯ ಎಂದ ಅವರು ಒಬಿಸಿ ಜನಾಂಗದವರು ಮುಂದೆ ಲೋಕಸಭಾ‌ ಸದಸ್ಯರಾಗಬೇಕು. ಕಳೆದ 25 ವರ್ಷದಿಂದ ‌ಬ್ರಾಹ್ಮಣರು ಸಂಸದರಾಗಿದ್ದರು.‌ ಈಗ ಬದಲಾವಣೆ ಬೇಕಾಗಿದೆ‌ ಎಂದರು.

ಛೇಡಿಸಿದ್ದೆ ಸೋಲಿಗೆ ಕಾರಣ: ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ‌ ಸತೀಶ್ ‌ಸೈಲ್ ಮಾಜಿ ಮಾಜಿ ಎಂದು ಛೇಡಿಸಿದ್ದೆ ಶಾಸಕಿ‌ ರೂಪಾಲಿ ನಾಯ್ಕ ಚುನಾವಣೆಯಲ್ಲಿ ಸೋಲಲು ಕಾರಣ ಎಂದು ಆನಂದ ಅಸ್ನೋಟಿಕರ್ ‌ಹೇಳಿದರು.

ರೂಪಾಲಿ ನಾಯ್ಕ ಸರ್ವಾಧಿಕಾರಿಯ ರೀತಿ ವರ್ತಿಸುತ್ತಿದ್ದರು‌. ಅವರು ಸೋತ ನಂತರ ಬಿಜೆಪಿ ಹಿರಿಯರನ್ನು, ಮೂಲ ಹಿರಿಯ ಕಾರ್ಯಕರ್ತರನ್ನು ಬೈದಿರುವ ಆಡಿಯೋ ನನ್ನ ಬಳಿ‌ಯಿದೆ. ಆದರೆ ಬಿಜೆಪಿಯ ಒಂದು ಮತವೂ ಕಾಂಗ್ರೆಸ್ ‌ಗೆ ಬಂದಿಲ್ಲ. ಬಿಜೆಪಿ ಮತ ಬಿಜೆಪಿಗೆ ಬಿದ್ದಿವೆ. ಆದರೂ ಬಿಜೆಪಿ ಮೂಕ ಕಾರ್ಯಕರ್ತರನ್ನು‌ ಮಾಜಿ‌ ಶಾಸಕಿ ಬಾಯಿಗೆ ಬಂದಂತೆ, ಅಸಂವಿಧಾನಿಕ ಪದ ಬಳಸಿ ಬೈದಿದ್ದಾರೆ. ಅವರ ವರ್ತನೆ ಬಹುತೇಕ ಸರ್ವಾಧಿಕಾರಿಯಂತಿತ್ತು ಎಂದು ಅಸ್ನೋಟಿಕರ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಅಧಿಕಾರಿಗಳಿಗೆ ಧನ್ಯವಾದ ಹೇಳಿದ್ದಾರೆ. ಬಹುಶಃ ಕಮಿಷನ್ ಸರಿಯಾಗಿ ತಂದು ಕೊಟ್ಟಿದ್ದಕ್ಕೆ ಧನ್ಯವಾದ ಹೇಳಬೇಕಿತ್ತು. ಅಲ್ಲದೆ ಶಾಸಕಿ ಅಧಿಕಾರದಲ್ಲಿ ಇದ್ದಾಗ ಅಧಿಕಾರಿಗಳಿಗೆ ಕೊಟ್ಟ ಕಿರುಕುಳ ದಾಖಲೆಯಗುವಂತಹದ್ದು ಎಂದರು. ಬಿಜೆಪಿ ಬಿಟ್ಟು ಆಕೆ ಪಕ್ಷೇತರರಾಗಿ ನಿಲ್ಲಲಿ. 2000 ಮತಗಳು ಬಂದರೆ ಹೆಚ್ಚು ಎಂದು ಆನಂದ ಲೇವಡಿ‌ ಮಾಡಿದರು.

ಟಾಪ್ ನ್ಯೂಸ್

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

22

Politics: ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಲಿ: ಅಶ್ವತ್ಥನಾರಾಯಣ 

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

train-track

Belagavi: ರೈಲಿನಲ್ಲಿ ಮುಸುಕುಧಾರಿಯಿಂದ ಚಾಕು ಇರಿತ: ವ್ಯಕ್ತಿ ಸಾವು,ಇಬ್ಬರಿಗೆ ಗಾಯ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwew-eqw-wq

Yellapur; ಶಾಲೆಯ ಮೇಲೆ ಬಿದ್ದ ಬೃಹತ್ ಮರ

Ankola: ಅಪ್ರಾಪ್ತ ಬಾಲಕಿಯ ಮೇಲೆ ವಯೋವೃದ್ಧನಿಂದ ಲೈಂಗಿಕ ದೌರ್ಜನ್ಯ; ಪ್ರಕರಣ ದಾಖಲು

Ankola: ಅಪ್ರಾಪ್ತ ಬಾಲಕಿಯ ಮೇಲೆ ವಯೋವೃದ್ಧನಿಂದ ಲೈಂಗಿಕ ದೌರ್ಜನ್ಯ; ಪ್ರಕರಣ ದಾಖಲು

5-sirsi

Sirsi: ಕರ್ನಾಟಕ ಜಾನಪದ ಪರಿಷತ್‌ನ ನೂತನ ಜಿಲ್ಲಾಧ್ಯಕ್ಷರಾಗಿ ಡಾ. ವೆಂಕಟೇಶ ನಾಯ್ಕ ಆಯ್ಕೆ

Uttara Kannada ಗೋಕರ್ಣದಲ್ಲಿ ಪೂಜೆಗೆ ತಡೆ: 11 ಜನರ ವಿರುದ್ಧ ದೂರು ದಾಖಲು

Uttara Kannada ಗೋಕರ್ಣದಲ್ಲಿ ಪೂಜೆಗೆ ತಡೆ: 11 ಜನರ ವಿರುದ್ಧ ದೂರು ದಾಖಲು

accident

Mundgod: ಬೈಕ್ ಗಳ ನಡುವೆ ಮುಖಾಮುಖಿ ; ಓರ್ವ ಸಾವು, ಇಬ್ಬರು ಗಂಭೀರ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

baby 2

Ballari: ತಿಪ್ಪೆಗುಂಡಿಯಲ್ಲಿ ಸಿಕ್ಕಿದ್ದ ಹೆಣ್ಣುಮಗುವನ್ನು ದತ್ತು ಪಡೆದ ವಿದೇಶಿ ದಂಪತಿ

1-wqewqewqe

MLC Election; ಕೊರಿಯರ್‌ ಕಚೇರಿಯಲ್ಲಿ ಅಪಾರ ಗಿಫ್ಟ್ ಬಾಕ್ಸ್‌!!

school

RTE; ಶಿಕ್ಷಣ ಹಕ್ಕು ಕಾಯ್ದೆ ಅರ್ಜಿ ಅವಧಿ ವಿಸ್ತರಣೆ

crime (2)

Belagavi: ಇರಿದು ಯುವಕನ ಕೊಲೆ; ಆರೋಪಿಯ ಸೋದರಿಯನ್ನು ಪ್ರೀತಿಸುತ್ತಿದ್ದುದು ಕಾರಣ

Thailand Open Super 500: ಸಾತ್ವಿಕ್‌ – ಚಿರಾಗ್‌ ಕ್ವಾರ್ಟರ್‌ಫೈನಲಿಗೆ

Thailand Open Super 500: ಸಾತ್ವಿಕ್‌ – ಚಿರಾಗ್‌ ಕ್ವಾರ್ಟರ್‌ಫೈನಲಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.