The Kerala Story ನಟಿಯ ಮೊಬೈಲ್ ನಂಬರ್ ಲೀಕ್: ಮೆಸೇಜ್, ಕಾಲ್ನಿಂದ ನಟಿಗೆ ಕಿರುಕುಳ
Team Udayavani, May 25, 2023, 1:36 PM IST
ಮುಂಬಯಿ: ʼದಿ ಕೇರಳ ಸ್ಟೋರಿʼ ನಟಿ ಅದಾ ಶರ್ಮಾ ಸಿನಿಮಾ ರಿಲೀಸ್ ಆದಾಗಿನಿಂದ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಸಿನಿಮಾದಲ್ಲಿನ ಅವರ ನಟನೆ ಬಗ್ಗೆ ಜನ ಶಹಬ್ಬಾಸ್ ಗಿರಿಯನ್ನು ಕೊಟ್ಟಿದ್ದು ಒಂದು ಕಡೆಯಾದರೆ, ಇನ್ನೊಂದೆಡೆ ಈ ಸಿನಿಮಾವನ್ನು ಆಯ್ದುಕೊಂಡ ಬಗ್ಗೆಯೂ ಕೆಲ ಜನ ಅವರ ವಿರುದ್ಧ ಕಿಡಿಕಾರಿದ್ದಾರೆ.
ವಿವಾದದ ಹೊರತಾಗಿಯೂ ಸುದೀಪ್ತೋ ಸೇನ್ ನಿರ್ದೇಶನದ ಸಿನಿಮಾ 200 ಕೋಟಿ ಕ್ಲಬ್ ಸೇರಿದೆ. ಸಿನಿಮಾವನ್ನು ಅಭೂತಪೂರ್ವವಾಗಿ ಯಶಸ್ಸುಗೊಳಿಸಿದ ಪ್ರೇಕ್ಷಕರಿಗೆ ನಟಿ ಅದಾ ಶರ್ಮಾ ಧನ್ಯವಾದವನ್ನು ಹೇಳಿದ್ದಾರೆ.
ಸಿನಿಮಾ ರಿಲೀಸ್ ಆದಾಗಿನಿಂದ ಸಿನಿಮಾ ತಂಡಕ್ಕೆ ಕೆಲವರಿಂದ ಬೆದರಿಕೆಗಳು ಬಂದಿರುವುದು ವರದಿಯಾಗಿತ್ತು. ಇದೀಗ ನಟಿ ಅದಾ ಶರ್ಮಾ ಅವರ ವೈಯಕ್ತಿಕ ಫೋನ್ ನಂಬರ್ ನ್ನು ಹ್ಯಾಕರ್ ವೊಬ್ಬ ಲೀಕ್ ಮಾಡಿದ್ದಾನೆ ಎನ್ನಲಾಗಿದೆ.
‘jhamunda_bolte’ ಎಂಬ ಬಳಕೆದಾರ ಇನ್ಸ್ಟಾಗ್ರಾಮ್ ನಲ್ಲಿ ನಟಿಯ ಫೋನ್ ನಂಬರ್ ಲೀಕ್ ಮಾಡಿದ್ದಾನೆ. ಕೆಲವರು ನಟಿಯ ನಂಬರ್ ಪಡೆದು ನಟಿಗೆ ನಾನಾ ರೀತಿಯಲ್ಲಿ ಮೆಸೇಜ್ ಗಳನ್ನು ಮಾಡಿ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಹ್ಯಾಕರ್ ಶರ್ಮಾ ನನ್ನಿಂದ ಬೇಸರದಲ್ಲಿದ್ದಾರೆ. ಇನ್ನೊಮ್ಮೆ ಮುಸ್ಲಿಂಮರ ವಿರುದ್ಧದ ಸಿನಿಮಾ ಬಂದರೆ ರಿಜೆಕ್ಟ್ ಮಾಡಿ ಎಂದು ಮತ್ತೊಂದು ಪೋಸ್ಟ್ ಮಾಡಿದ್ದಾನೆ. ಹೊಸ ನಂಬರ್ ಬಳಸಿದರೆ ಅದನ್ನು ಕೂಡ ಲೀಕ್ ಮಾಡುತ್ತೇನೆ ಎಂದು ಬೆದರಿಕೆಯನ್ನು ಹಾಕಿದ್ದಾನೆ.
ನಟಿಯ ಅಭಿಮಾನಿಗಳು ಅಕೌಂಟ್ ಬಗ್ಗೆ ಕೂಡಲೇ ರಿಪೋರ್ಟ್ ಮಾಡಿದ ಬಳಿಕ ಆತನ ಅಕೌಂಟ್ ಸ್ಥಗಿತಗೊಂಡಿದೆ. ಕೆಲವೇ ಕ್ಷಣವಿದ್ದ ನಟಿಯ ನಂಬರ್ ಪೋಸ್ಟ್ ವೈರಲ್ ಆಗಿದೆ.
ಆದರೆ ನಟಿ ಅದಾ ಶರ್ಮಾ ಈ ಬಗ್ಗೆ ಇನ್ನು ಯಾವ ಪ್ರತಿಕ್ರಿಯೆ ನೀಡಿಲ್ಲ.
ʼದಿ ಕೇರಳ ಸ್ಟೋರಿʼ ಯಶಸ್ಸಿನಲ್ಲಿರುವ ನಟಿ ಅದಾ ಶರ್ಮಾ ಶೀಘ್ರದಲ್ಲಿ ತನ್ನ ಮುಂದಿನ ಚಿತ್ರದ ಬಗ್ಗೆ ಅನೌನ್ಸ್ ಮಾಡಲಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್