ಚಿಂಚೋಳಿ: ಚಂದ್ರಪಳ್ಳಿ-ಚಿಕ್ಕನಿಂಗದಳ್ಳಿಕೆರೆ ಸುತ್ತ ಕೆರೆ ಸುತ್ತ ಹಕ್ಕಿಗಳ ಕಲರವ

ಪಕ್ಷಿಗಳು ನೆರಳಿನಾಸರೆ ಪಡೆದು ಸಂಜೆ ತಂಪು ವಾತಾವರಣದಲ್ಲಿ ಬಾನಲ್ಲಿ ಹಾರಾಡುತ್ತವೆ.

Team Udayavani, May 29, 2023, 6:00 PM IST

ಚಿಂಚೋಳಿ: ಚಂದ್ರಪಳ್ಳಿ-ಚಿಕ್ಕನಿಂಗದಳ್ಳಿಕೆರೆ ಸುತ್ತ ಕೆರೆ ಸುತ್ತ ಹಕ್ಕಿಗಳ ಕಲರವ

ಚಿಂಚೋಳಿ: ತಾಲೂಕಿನ ಚಂದ್ರಂಪಳ್ಳಿ ಮತ್ತು ಚಿಕ್ಕನಿಂಗದಳ್ಳಿ ಕೆರೆ ಅಕ್ಕಪಕ್ಕ ವಲಸೆ ಹಕ್ಕಿಗಳು ಆಗಮಿಸಿದ್ದು, ಪಕ್ಷಿ ಪ್ರೇಮಿಗಳ ಮನಸೂರೆಗೊಂಡಿವೆ. ವಿವಿಧ ಭಾಗಗಳಿಂದ ಆಗಮಿಸುವ ಈ ಅತಿಥಿಗಳು ಕೆರೆ ಅಕ್ಕಪಕ್ಕದ ಗಿಡ-ಮರಗಳ ಆಶ್ರಯ ಪಡೆದಿವೆ.

ಸಂತಾನೋತ್ಪತ್ತಿಗೆಂದು ದೂರ ದೂರದ ಪ್ರದೇಶಗಳಿಂದ ಲಗ್ಗೆ ಇಡುವ ಈ ಬಾನಾಡಿಗಳು ಗಿಡ-ಮರಗಳ ಪೊಟರುಗಳಲ್ಲಿ ಗೂಡು ಕಟ್ಟಿಕೊಂಡು ಮಳೆಗಾಲ ಮುಗಿಯುವವರೆಗೆ ಇಲ್ಲಿಯೇ ವಾಸವಾಗಿರುತ್ತವೆ.

ಚಂದ್ರಂಪಳ್ಳಿ ಮತ್ತು ಚಿಕ್ಕನಿಂಗದಳ್ಳಿ ಈ ಎರಡೂ ಕೆರೆಗಳು ಹಕ್ಕಿಗಳ ನಿವಾಸ ಸ್ಥಾನವಾಗಿದ್ದು, ಹಕ್ಕಿಗಳ ಚಿಲಿಪಿಲಿ ನಿನಾದ ಕರ್ಣಗಳಿಗೆ ಹಿತವನ್ನುಂಟು ಮಾಡುತ್ತವೆ. ಬಣ್ಣಬಣ್ಣದ ಈ ಹಕ್ಕಿಗಳು ಕಣ್ಣಿಗೆ ಮುದ ನೀಡುತ್ತಿವೆ. ಗೊಟ್ಟಂಗೊಟ್ಟ, ಸೇರಿಭಿಕನಳ್ಳಿ, ಮಂಡಿ ಬಸವಣ್ಣ, ಲಾಲ್‌ತಲಾಬ್‌ ಪ್ರದೇಶಗಳಲ್ಲಿ ಆಶ್ರಯ ಪಡೆಯುವ ಕೆಂಪು ರಾಟವಾಳ, ಚುಕ್ಕೆ ರಾಟವಾಳ, ನವಿಲು, ಬಾರ್‌ ಹೆಡ್ಡೆಡ್‌, ಗೂಸ, ಬ್ರಾಹ್ಮಣಿ ಮೈನಾ, ಹಳದಿ ಕಣ್ಣಿನ ಹರಟೆಮಲ್ಲ, ಬಣ್ಣದ ಕೊಕ್ಕರೆಗಳು(ಅತಿಥಿಗಳು) ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು ಈಗ ಎಲ್ಲರ ಕಣ್ಮನ ಸೆಳೆಯುತ್ತಿವೆ.

ಕುಂಚಾವರಂ ವನ್ಯಜೀವಿಧಾಮ ಅರಣ್ಯ ಪ್ರದೇಶದೊಳಗೆ ಇರುವ ಚಂದ್ರಂಪಳ್ಳಿ ಮತ್ತು ಚಿಕ್ಕನಿಂಗದಳ್ಳಿ ಸಣ್ಣ ನೀರಾವರಿ ಕೆರೆಗೆ
ವಲಸೆ ಹಕ್ಕಿಗಳು ಬಂದು ಗೂಡು ಕಟ್ಟಿಕೊಂಡು, ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಇಲ್ಲಿ ತಂಪು ವಾತಾವರಣ ಇರುವುದರಿಂದ ಇವುಗಳಿಗೆ ತುಂಬಾ ಅನುಕೂಲವಾಗಿದೆ.
*ಸಂಜೀವಕುಮಾರ ಚವ್ಹಾಣ,
ಅರಣ್ಯಾಧಿಕಾರಿ, ವನ್ಯಜೀವಿಧಾಮ

ಚಂದ್ರಂಪಳ್ಳಿ, ಚಿಕ್ಕನಿಂಗದಳ್ಳಿ ಸೇರಿದಂತೆ ಕುಂಚಾವರಂ ಮೀಸಲು ಅರಣ್ಯದಲ್ಲಿ ಸಣ್ಣ-ಸಣ್ಣ ಪಕ್ಷಿಗಳು ಬಿಸಿಲಿನ ತಾಪದಿಂದ
ತಪ್ಪಿಸಿಕೊಳ್ಳಲು ಗಿಡಮರಗಳ ಪೊಟರುಗಳಲ್ಲಿ ಆಸರೆ ಪಡೆದುಕೊಳ್ಳುತ್ತಿವೆ. ವಿವಿಧ ಜಾತಿಯ ಹಕ್ಕಿಗಳು, ಗಿಳಿ, ಕೊಕ್ಕರೆ, ಗುಬ್ಬಿ, ವಿವಿಧ ಜಾತಿಯ ಪಕ್ಷಿಗಳು ನೆರಳಿನಾಸರೆ ಪಡೆದು ಸಂಜೆ ತಂಪು ವಾತಾವರಣದಲ್ಲಿ ಬಾನಲ್ಲಿ ಹಾರಾಡುತ್ತವೆ.
ಸಿದ್ಧಾರೂಢ ಹೊಕ್ಕುಂಡಿ
ಉಪ ವಲಯ ಅರಣ್ಯಾಧಿಕಾರಿ, ಚಿಂಚೋಳಿ

*ಶಾಮರಾವ ಚಿಂಚೋಳಿ

ಟಾಪ್ ನ್ಯೂಸ್

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.