ರಕ್ಷಣ ಸರಕು ರಫ್ತಿನಲ್ಲಿ ಭಾರತ ಸಾರ್ವಕಾಲಿಕ ದಾಖಲೆ: 10 ವರ್ಷಗಳಲ್ಲಿ 23 ಪಟ್ಟು ಹೆಚ್ಚಳ
Team Udayavani, May 31, 2023, 8:00 AM IST
ಹೊಸದಿಲ್ಲಿ: ಜಾಗತಿಕ ರಕ್ಷಣ ಸರಕುಗಳ ಉತ್ಪಾದನೆ ವಲಯದಲ್ಲಿ ಭಾರತವು ವಿಶಿಷ್ಟವಾದ ಛಾಪು ಮೂಡಿಸಿದ್ದು, 10 ವರ್ಷಗಳಲ್ಲಿ ಭಾರತದ ರಕ್ಷಣ ರಫ್ತು ಪ್ರಮಾಣ ಸಾರ್ವಕಾಲಿಕ ದಾಖಲೆ ಮಾಡಿದೆ.
2013-14ರಲ್ಲಿ 686 ಕೋಟಿ ರೂ. ಮೌಲ್ಯದ ಸರಕುಗಳು ಭಾರತದಿಂದ ರಫ್ತಾದರೆ, 2022-23ರಲ್ಲಿ ಈ ಪ್ರಮಾಣ 16 ಸಾವಿರ ಕೋಟಿ ರೂ.ಗೇರಿದೆ. ಮಂಗಳವಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಕುರಿತ ವರದಿಯನ್ನು ಬಿಡುಗಡೆ ಮಾಡಿದೆ.
ಭಾರತದ ರಕ್ಷಣ ರಫ್ತು ಪ್ರಮಾಣ 2013-14ಕ್ಕೆ ಹೋಲಿಸಿದರೆ ಈಗ 23 ಪಟ್ಟು ಹೆಚ್ಚಳವಾಗಿದೆ. ಪ್ರಸ್ತುತ 100ರಷ್ಟು ಕಂಪೆನಿಗಳು ಭಾರತದಲ್ಲಿ ರಕ್ಷಣ ಸರಕುಗಳನ್ನು ಉತ್ಪಾದಿಸಿ, 85ಕ್ಕೂ ಅಧಿಕ ದೇಶಗಳಿಗೆ ರಫ್ತು ಮಾಡುತ್ತಿವೆ. ಹಿಂದೆ ಭಾರತವು ರಕ್ಷಣ ಸಾಮಗ್ರಿಗಳ ಆಮದುದಾರನಾಗಿತ್ತು. ಈಗ ರಫ್ತುದಾರ ರಾಷ್ಟ್ರವಾಗಿ ಬೆಳೆದಿದೆ ಎಂದೂ ಸಚಿವಾಲಯ ಹೇಳಿದೆ.
ಪ್ರಮುಖ ರಫ್ತು
ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಕೇಂದ್ರ ಸರಕಾರವು ವಿದೇಶಿ ರಕ್ಷಣ ಸರಕುಗಳ ಆಮದು ನಿರ್ಬಂಧ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಜತೆಗೆ ಭಾರತದಲ್ಲೇ ಎಲ್ಲ ರೀತಿಯ ಸರಕುಗಳನ್ನು ವಿನ್ಯಾಸಗೊಳಿಸಲು ಮತ್ತು ಉತ್ಪಾದಿಸಲು ಉತ್ತೇಜನ ನೀಡಿದೆ. ಪರಿಣಾಮವಾಗಿ ಪ್ರಸ್ತುತ ದೇಶದಿಂದ ಪ್ರಮುಖವಾಗಿ ಡಾರ್ನಿಯರ್-228, ಆರ್ಟಿಲರಿ ಗನ್ಗಳು, ಬ್ರಹ್ಮೋಸ್ ಕ್ಷಿಪಣಿಗಳು, ಪಿನಾಕಾ ರಾಕೆಟ್ಗಳು ಮತ್ತು ಲಾಂಚರ್ಗಳು, ರೇಡಾರ್ಗಳು, ಸಿಮ್ಯುಲೇಟರ್ಗಳು ಮತ್ತು ಸಶಸ್ತ್ರ ವಾಹನಗಳು ರಫ್ತಾಗುತ್ತಿವೆ. ಅಲ್ಲದೆ ಎಲ್ಸಿಎ-ತೇಜಸ್, ಲಘು ಯುದ್ಧ ಹೆಲಿಕಾಪ್ಟರ್ಗಳು, ವಿಮಾನ ವಾಹಕಗಳಿಗೆ ವಿದೇಶಗಳಿಂದ ಬೇಡಿಕೆ ಹೆಚ್ಚಿದೆ. ಒಟ್ಟು ರಫ್ತಿನ ಮೊತ್ತವನ್ನು 2025ರ ವೇಳೆಗೆ 35 ಸಾವಿರ ಕೋಟಿ ರೂ.ಗಳಿಗೆ ಏರಿಸುವ ಗುರಿಯನ್ನು ಸರಕಾರ ಹಾಕಿಕೊಂಡಿದೆ.
ಇದೇ ವೇಳೆ ವಿದೇಶಗಳಿಂದ ರಕ್ಷಣ ಸಾಮಗ್ರಿಗಳ ಆಮದು 2018-18ರಲ್ಲಿ ಒಟ್ಟು ವೆಚ್ಚದ ಶೇ.46ರಷ್ಟು ಇದ್ದದ್ದು, 2022ರ ಡಿಸೆಂಬರ್ ವೇಳೆಗೆ ಶೇ. 36.7ಕ್ಕೆ ಇಳಿಕೆಯಾಗಿದೆ ಎಂದೂ ರಕ್ಷಣ ಸಚಿವಾಲಯದ ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು