ರಷ್ಯಾದಲ್ಲಿ ಕೂಲಿ ಗುಂಪಿನಿಂದ ಸಶಸ್ತ್ರ ದಂಗೆ; ಮಾಸ್ಕೋ ನಗರದಲ್ಲಿ ಹೈ ಅಲರ್ಟ್
Team Udayavani, Jun 24, 2023, 11:34 AM IST
ಮಾಸ್ಕೋ: ಉಕ್ರೇನ್ ಜತೆ ಯುದ್ಧದಲ್ಲಿ ತೊಡಗಿರುವ ರಷ್ಯಾಗೆ ಇದೀಗ ದೇಶದೊಳಗೆ ದಂಗೆ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ಪ್ರಬಲ ಕೂಲಿ ಗುಂಪಿನ ವ್ಯಾಗ್ನರ್ ಮುಖ್ಯಸ್ಥ ಸಶಸ್ತ್ರ ದಂಗೆಯನ್ನು ಆರಂಭಿಸಿದ್ದಾರೆ. ವ್ಯಾಗ್ನರ್ ಬಂಧನಕ್ಕೆ ಸರ್ಕಾರ ಆದೇಶಿಸಿದೆ.
ಉಕ್ರೇನ್ ನಲ್ಲಿನ ಯುದ್ಧದ ಕುರಿತು ರಷ್ಯಾದ ಕೂಲಿ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಮತ್ತು ಮಿಲಿಟರಿ ಉನ್ನತ ಅಧಿಕಾರಿಗಳ ನಡುವಿನ ದೀರ್ಘಕಾಲದ ಬಿಕ್ಕಟ್ಟು ಇದೀಗ ಬಹಿರಂಗವಾಗಿದೆ.
ವ್ಯಾಗ್ನರ್ ಗುಂಪು ಸಶಸ್ತ್ರ ದಂಗೆಯೆಂದು ಕ್ರೆಮ್ಲಿನ್ ಆರೋಪಿಸಿದ ನಂತರ, ವ್ಯಾಗ್ನರ್ ಹೋರಾಟಗಾರರು ಉಕ್ರೇನ್ ನಿಂದ ರಷ್ಯಾದ ಗಡಿಯನ್ನು ದಾಟಿದರು. ಮಾಸ್ಕೋದ ಮಿಲಿಟರಿಯ ವಿರುದ್ಧ ಎಲ್ಲಾ ರೀತಿಯ ಹೋರಾಟಕ್ಕೆ ಸಿದ್ದವಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಇದನ್ನೂ ಓದಿ:ಅದ್ಭುತ ಅವಕಾಶ ತಪ್ಪಿಸಿಕೊಂಡರು..: ಟೆಸ್ಟ್ ತಂಡದ ಬಗ್ಗೆ ಗಾವಸ್ಕರ್ ಅಸಮಾಧಾನ
ವ್ಯಾಗ್ನರ್ ಗ್ರೂಪ್ ಕೂಲಿ ಸೈನಿಕರ ಖಾಸಗಿ ಸೈನ್ಯವಾಗಿದ್ದು, ಇದು ಉಕ್ರೇನ್ ನಲ್ಲಿ ಸಾಮಾನ್ಯ ರಷ್ಯಾದ ಸೈನ್ಯದೊಂದಿಗೆ ಹೋರಾಡುತ್ತಿದೆ. ಇತ್ತೀಚಿನ ತಿಂಗಳುಗಳಲ್ಲಿ ಪುಟಿನ್ ಮಿತ್ರರಾಗಿದ್ದ ಪ್ರಿಗೋಜಿನ್ ಅವರ ಸಂಬಂಧ ಮಾಸ್ಕೋದೊಂದಿಗೆ ಉತ್ತಮವಾಗಿಲ್ಲ.
ವ್ಯಾಗ್ನರ್ ನ ಕೂಲಿ ಸೈನಿಕರು ರೋಸ್ಟೋವ್ ನಲ್ಲಿ ಮಿಲಿಟರಿ ಕಟ್ಟಡವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಈ ದಂಗೆಯೊಂದಿಗೆ, ಮಾಸ್ಕೋದಲ್ಲಿ ಭದ್ರತಾ ಪಡೆಗಳು ಹೈ ಅಲರ್ಟ್ ಘೋಷಿಸಿದವು.
ರೋಸ್ಟೊವ್ ನಲ್ಲಿರುವ ರಷ್ಯಾದ ಅಧಿಕಾರಿಗಳು ವಾಸಿಗಳನ್ನು ಮನೆಯೊಳಗೆ ಇರುವಂತೆ ಕೇಳಿಕೊಂಡಿದ್ದಾರೆ. “ಪ್ರಸ್ತುತ ಪರಿಸ್ಥಿತಿಯಿಂದಾಗಿ, ದಯವಿಟ್ಟು ಸಾಧ್ಯವಾದರೆ ನಗರ ಕೇಂದ್ರಕ್ಕೆ ಹೋಗುವುದನ್ನು ತಪ್ಪಿಸಿ ಮತ್ತು ನಿಮ್ಮ ಮನೆಗಳಲ್ಲಿ ಇರಿ” ಎಂದು ರೋಸ್ಟೊವ್ ಪ್ರದೇಶದ ಗವರ್ನರ್ ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Spicy Chip Challenge; ಅತ್ಯಂತ ಖಾರದ ಚಿಪ್ಸ್ ತಿಂದ 14ರ ಬಾಲಕ ಸಾವು!
Microsoft ಚಿಂತನೆ : ಚೀನದಿಂದ 800 ನೌಕರರ ವರ್ಗ
27 ವರ್ಷಗಳ ಹಿಂದೆ ನಾಪತ್ತೆಯಾದವ ನೆರೆಮನೆಯ ನೆಲಮಾಳಿಗೆಯಲ್ಲಿ ಪತ್ತೆ!!: ವಿಡಿಯೋ ವೈರಲ್
Viral Video: ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ; ಆದರೆ ನಾವು….: ಪಾಕ್ ನಾಯಕನ ಮಾತು
Slovak PM: ದುಷ್ಕರ್ಮಿಯಿಂದ ಸ್ಲೊವಾಕ್ ಪ್ರಧಾನಿ ರಾಬರ್ಟ್ ಮೇಲೆ ಗುಂಡಿನ ದಾಳಿ…
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್