ಟೋಲ್ಗೇಟ್ ಕ್ಯಾಂಟೀನ್ಗೆ ನುಗ್ಗಿ ಹಲ್ಲೆ: ಪ್ರಕರಣ ದಾಖಲು
Team Udayavani, Jul 6, 2023, 5:48 AM IST
ಪಡುಬಿದ್ರಿ : ಹೆಜಮಾಡಿಯ ನವಯುಗ ಟೋಲ್ ಪ್ಲಾಝಾದ ಕ್ಯಾಂಟೀನ್ನಲ್ಲಿ ಮಂಗಳವಾರ ಮಧ್ಯರಾತ್ರಿಯ ಬಳಿಕ 1.30ರ ವೇಳೆಗೆ ಕ್ಷುಲ್ಲಕ ಕಾರಣಗಳಿಗಾಗಿ ಮಾತಿಗೆ ಮಾತು ಬೆಳೆಸಿ ಕಾಪು ಚಂದ್ರನಗರದ ಮೂವರ ಗುಂಪೊಂದು ಕ್ಯಾಂಟೀನ್ ಕೆಲಸಗಾರ ಸಂತೋಷ್ ಕುಮಾರ್ ಮೇಲೆ ಕೈಯಿಂದ ಹಲ್ಲೆ ನಡೆಸಿ, ತಿಂಡಿಯ ಡಬ್ಬಗಳನ್ನೆಸೆದು, ಕತ್ತಿಯನ್ನು ಝಳಪಿಸಿ ಕೊಲ್ಲದೇ ಬಿಡುವುದಿಲ್ಲವೆಂದು ಜೀವಬೆದರಿಕೆಯನ್ನು ಹಾಕಿದ್ದಾರೆ.
ಇಬ್ಬರು ಆರೋಪಿಗಳ ಹೆಸರನ್ನು ಸಂತೋಷ್ ಕುಮಾರ್ ಅವರು ರಜಿನ್ ಹಾಗೂ ಜಕ್ರಿಯ ಎಂದು ದೂರಿನಲ್ಲಿ ಹೆಸರಿಸಿದ್ದು ಮೂರನೇ ಆರೋಪಿಯ ಹೆಸರು ತಿಳಿದಿಲ್ಲ. ಉಡುಪಿ ಮಂಗಳೂರು ಕಡೆಗೆ ಹೋಗುವ ಏಕಮುಖ ರಸ್ತೆಯ ಎಡಬದಿಯಲ್ಲಿನ ಕ್ಯಾಂಟೀನ್ನಲ್ಲಿ ಈ ಘಟನೆ ನಡೆದಿದ್ದು ಆರೋಪಿಗಳು ಬಂದಿದ್ದ ಕಾರಲ್ಲಿ ಐವರು ಇದ್ದರೂ ಕೇವಲ ಮೂವರ ಗುಂಪು ಈ ಕೃತ್ಯವನ್ನು ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ
Kunigal: ಪ್ರತ್ಯೇಕ ಅಪಘಾತ; ಇಬ್ಬರು ಸಾವು
Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ
Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು
Odisha ಜನರು ನಿಂದನೀಯ ಭಾಷೆ ಮೆಚ್ಚಿಕೊಳ್ಳುವುದಿಲ್ಲ:ಬಿಜೆಪಿಗೆ ಪಟ್ನಾಯಕ್ ತಿರುಗೇಟು