Karnataka Budget: ಯಾವ ಯೋಜನೆಗೆ ಎಷ್ಟು ಅನುದಾನ? ; ಇಲ್ಲಿದೆ ವಿವರಗಳು
Team Udayavani, Jul 7, 2023, 2:40 PM IST
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಗುರುವಾರ ಸುದೀರ್ಘ ಬಜೆಟ್ ಮಂಡಿಸಿದ್ದು, ಕಾಂಗ್ರೆಸ್ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳಿಗೆ ಬಹುಪಾಲು ಅನುದಾನವನ್ನು ಘೋಷಿಸಲಾಗಿದೆ. ಗೃಹಲಕ್ಷ್ಮೀ ಯೋಜನೆಗೆ 30,000 ಕೋಟಿ ರೂ, ಅನ್ನಭಾಗ್ಯ ಯೋಜನೆಗೆ 10,000 ಕೋಟಿ ರೂ., ಗೃಹಜ್ಯೋತಿಗೆ 13,910 ಕೋಟಿ ರೂ.,ಶಕ್ತಿ ಯೋಜನೆಗೆ 4,000 ಕೋಟಿ ರೂ. ಮತ್ತುಇಂದಿರಾ ಕ್ಯಾಂಟೀನ್ 100ಕೋಟಿ ರೂ.ಅನುದಾನ ಮೀಸಲಿಡಲಾಗಿದೆ.
ನಮ್ಮ ಮೆಟ್ರೋ- 30,000ಕೋಟಿ ರೂ., ಆಹಾರ ಇಲಾಖೆ-10,460ಕೋಟಿ ರೂ., ಸಮಾಜ ಕಲ್ಯಾಣ-11,173ಕೋಟಿ ರೂ. , ಬೆಂಗಳೂರು ಅಭಿವೃದ್ಧಿಗೆ -45,000ಕೋಟಿ ರೂ., ಎತ್ತಿನಹೊಳೆ-23,252 ಕೋಟಿ ರೂ., ಕುಡಿಯುವ ನೀರು- 770 ಕೋಟಿ ರೂ., ಶಿಕ್ಷಣ ಇಲಾಖೆ-37,587 ಕೋಟಿ ರೂ. ಅನುದಾನ ನೀಡಲಾಗಿದೆ.
ಇಂಧನ- 22000 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ-24,166 ಕೋಟಿ ರೂ., ನೀರಾವರಿ-19,000 ಕೋಟಿ ರೂ., ಗ್ರಾಮೀಣಾಭಿವೃದ್ಧಿ-18,000 ಕೋಟಿ ರೂ., ಸಾರಿಗೆ ಮತ್ತು ಒಳಾಡಳಿತ- 16,000 ಕೋಟಿ ರೂ., ಕೃಷಿ ಮತ್ತು ತೋಟಗಾರಿಕೆ- 5,860 ಕೋಟಿ ರೂ., ಕಂದಾಯ- 16,000 ಕೋಟಿ ರೂ., ಪಶು ಸಂಗೋಪನೆ ಇಲಾಖೆ – 3,024 ಕೋಟಿ ರೂ.ಜೈನರ ಪುಣ್ಯ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರೂ. ವಕ್ಫ್ ಆಸ್ತಿ ಅಭಿವೃದ್ಧಿಗೆ- 50 ಕೋಟಿ ರೂ. , ಕ್ರಿಶ್ಚಿಯನ್ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.