ಪ್ರತಿಭಟನೆ ಕೈ ಬಿಡಿ, ಜೈನ ಸಮಾಜದೊಂದಿಗೆ ನಾವಿದ್ದೇವೆ: ಸಚಿವ ಡಾ.ಜಿ.ಪರಮೇಶ್ವರ ಅಭಯ


Team Udayavani, Jul 10, 2023, 6:19 PM IST

ಪ್ರತಿಭಟನೆ ಕೈ ಬಿಡಿ, ನಿಮ್ಮೊಂದಿಗೆ ನಾವಿದ್ದೇವೆ: ಸಚಿವ ಡಾ.ಜಿ.ಪರಮೇಶ್ವರ ಅಭಯ

ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿ ಪರ್ವತದ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವ ಯಾವುದೇ ಸಂದರ್ಭ ಇಲ್ಲ. ಕೊಲೆಗೆ ಕಾರಣ ತನಿಖೆಯಿಂದ ಬಹಿರಂಗವಾಗಲಿದೆ. ಪ್ರತಿಭಟನೆ ಕೈ ಬಿಡುವಂತೆ ಜೈನ ಸಮಾಜಕ್ಕೆ ಮನವಿ ಮಾಡುತ್ತೇವೆ. ಸರ್ಕಾರ ಜೈನ ಧರ್ಮದ ರಕ್ಷಣೆ ಬದ್ಧವಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.

ತಾಲೂಕಿನ ಹಲಗಾದಲ್ಲಿರುವ ಶ್ರೀ 108 ಸಿದ್ಧಸೇನ ಮುನಿ ಮಹಾರಾಜರನ್ನು ಸೋಮವಾರ ಗೃಹ ಸಚಿವ ಪರಮೇಶ್ವರ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಇಡೀ ಜೈನ ಸಮಾಜಕ್ಕೆ ಅಭಯ ನೀಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಶಾಂತಿ ಕಾಪಾಡಲು ಸರ್ಕಾರ ಬದ್ಧವಾಗಿದೆ. ಇದು ನಿಮ್ಮ ಸರ್ಕಾರ. ಯಾವುದೆ ಸಂದರ್ಭದಲ್ಲಿಯೂ ನಿಮ್ಮೊಂದಿಗೆ ಇದ್ದೇವೆ. ಆತಂಕ ಪಡುವ ಅಗತ್ಯ ಇಲ್ಲ. ಸರ್ಕಾರದಿಂದ ವಿಳಂಬ ಆಗುವುದಿಲ್ಲ. ನಿಮ್ಮ ನೋವು, ಅದು ನಮ್ಮ ನೋವು. ದೇಶ-ವಿದೇಶದಲ್ಲಿ ಪ್ರತಿಭಟನೆ ಆಗುತ್ತಿದ್ದು, ಪರಿಣಾಮಕಾರಿಯಾಗಿ ತನಿಖೆ ನಡೆಸಲಾಗುವುದು. ಯಾವುದೇ ಉದ್ವೇಗಕ್ಕೆ ಒಳಗಾಗಬಾರದು ಎಂದರು.

ಬಿಜೆಪಿಯವರು ಸರ್ಕಾರ ನಡೆಸುವಾಗ ಪೊಲೀಸ್ ಇಲಾಖೆ ಚೆನ್ನಾಗಿ ಇತ್ತು. ಈಗ ಒಂದೂವರೆ ತಿಂಗಳಲ್ಲಿ ಬಿಜೆಪಿವರಿಗೆ ಪೊಲೀಸ್ ಇಲಾಖೆ ಮೇಲೆ ಅಪನಂಬಿಕೆ ಬರುತ್ತಿರುವುದು ಏಕೆ? ಬಿಜೆಪಿಯವರು ಕ್ಷುಲ್ಲಕ ರಾಜಕೀಯ ಮಾಡಬಾರದು. ಜೈನಮುನಿಗಳ ಹತ್ಯೆ ನಡೆದ ಕೆಲವೇ ಗಂಟೆಯಲ್ಲಿ ಆರೋಪಿಗಳ ಬಂಧನವಾಗಿದೆ. ಎಲ್ಲದರಲ್ಲೂ ರಾಜಕೀಯ ಮಾಡಿದರೆ ಚೆನ್ನಾಗಿ ಇರುವುದಿಲ್ಲ ಎಂದರು.

ಸ್ವಾಮೀಜಿ ಭೀಕರ ಹತ್ಯೆ ನೋವು ತಂದಿದೆ. ಇಂಥ ಘಟನೆ ನಡೆಯಬಾರದಿತ್ತು. ಕಾನೂನು ಸರಿಯಾದ ಪಾಠ ಕಲಿಸುತ್ತದೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ ಎಂದ ಅವರು, ಹಲಗಾದ 108 ಶ್ರೀ ಸಿದ್ದಸೇನ ಮುನಿ ಮಹಾರಾಜರನ್ನು ಭೇಟಿಯಾಗಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇನೆ. ಜೈನಮುನಿಗಳ ಪಾದಯಾತ್ರೆ ಸಂದರ್ಭದಲ್ಲಿ ಶಾಲೆ, ಕಾಲೇಜಿನಲ್ಲಿ ತಂಗಲು ಅನುಮತಿ ನೀಡಿ ರಕ್ಷಣೆ ಒದಗಿಸಬೇಕು. ಜೈನ ಸಮುದಾಯಕ್ಕೆ ಮಂಡಳಿ ಸ್ಥಾಪನೆ ಮಾಡಬೇಕು ಎಂದು ಶ್ರೀಗಳ ಬೇಡಿಕೆಯಾಗಿದೆ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಂದಿಸಲಾಗುವುದು ಎಂದು ತಿಳಿಸಿದರು.

ಹಲಗಾದ 108 ಶ್ರೀ ಸಿದ್ದಸೇನ ಮುನಿ ಮಹಾರಾಜರು ಇದ್ದರು.

ಟಾಪ್ ನ್ಯೂಸ್

Prajwal Revanna ವಿಮಾನ ಟಿಕೆಟ್‌ ರದ್ದು; ಸಂಸದನ ನಡೆ ಕುತೂಹಲ, ಸಿಗದ ಸುಳಿವು

Prajwal Revanna ವಿಮಾನ ಟಿಕೆಟ್‌ ರದ್ದು; ಸಂಸದನ ನಡೆ ಕುತೂಹಲ, ಸಿಗದ ಸುಳಿವು

Byndoor : ಕಾರ್ಯಕರ್ತರಿಂದ ಕ್ಷೇತ್ರದೆಲ್ಲೆಡೆ ಸಮಾಜಮುಖಿ ಕಾರ್ಯ

Byndoor : ಕಾರ್ಯಕರ್ತರಿಂದ ಕ್ಷೇತ್ರದೆಲ್ಲೆಡೆ ಸಮಾಜಮುಖಿ ಕಾರ್ಯ

Protest ಪಿಒಕೆ ಮತ್ತಷ್ಟು ಉದ್ವಿಗ್ನ: ಪೊಲೀಸ್‌ ಅಧಿಕಾರಿ ಸಾವು

Protest ಪಿಒಕೆ ಮತ್ತಷ್ಟು ಉದ್ವಿಗ್ನ: ಪೊಲೀಸ್‌ ಅಧಿಕಾರಿ ಸಾವು

1-wewwqewqe

Loksabha ಇಂದು 4ನೇ ಹಂತದ ಮತ ; ಒಡಿಶಾ, ಆಂಧ್ರದಲ್ಲಿ ವಿಧಾನಸಭೆ ಚುನಾವಣೆ

ISREL

War; ಇಸ್ರೇಲ್‌ಗೆ ಇರಾನ್‌ನಿಂದ ಅಣುಬಾಂಬ್‌ ಬೆದರಿಕೆ!

1-wewewqe

Play Off ಸಡಗರದಲ್ಲಿರುವ ಕೆಕೆಆರ್‌ ಎದುರಾಳಿ: ಪವಾಡದ ನಿರೀಕ್ಷೆಯಲ್ಲಿ ಗುಜರಾತ್‌

1-wewqeqwe

Karachi ಭಾರತೀಯ ಮಹಿಳೆಯ ವಡಾಪಾವ್‌, ಪಾವ್‌ಭಾಜಿ ಕಮಾಲ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewewqewq

Belgavi; ಭಾರೀ ಪ್ರಮಾಣದ ಅಕ್ರಮ ಮದ್ಯ ಜಪ್ತಿ:ಇಬ್ಬರ ಬಂಧನ

ಟಯರ್‌ ಒಡೆದು ಕ್ರೂಸರ್‌ ಪಲ್ಟಿ: ಅಥಣಿಯ ಮೂವರ ದುರ್ಮರಣ

ಟಯರ್‌ ಒಡೆದು ಕ್ರೂಸರ್‌ ಪಲ್ಟಿ: ಅಥಣಿಯ ಮೂವರ ದುರ್ಮರಣ

1-wqewqwewq

Rain; ಬೆಳಗಾವಿ, ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

Prajwal Case; ಬೆಳಗಾವಿಯಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

Prajwal Case; ಬೆಳಗಾವಿಯಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

MUST WATCH

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

ಹೊಸ ಸೇರ್ಪಡೆ

Prajwal Revanna ವಿಮಾನ ಟಿಕೆಟ್‌ ರದ್ದು; ಸಂಸದನ ನಡೆ ಕುತೂಹಲ, ಸಿಗದ ಸುಳಿವು

Prajwal Revanna ವಿಮಾನ ಟಿಕೆಟ್‌ ರದ್ದು; ಸಂಸದನ ನಡೆ ಕುತೂಹಲ, ಸಿಗದ ಸುಳಿವು

Byndoor : ಕಾರ್ಯಕರ್ತರಿಂದ ಕ್ಷೇತ್ರದೆಲ್ಲೆಡೆ ಸಮಾಜಮುಖಿ ಕಾರ್ಯ

Byndoor : ಕಾರ್ಯಕರ್ತರಿಂದ ಕ್ಷೇತ್ರದೆಲ್ಲೆಡೆ ಸಮಾಜಮುಖಿ ಕಾರ್ಯ

Protest ಪಿಒಕೆ ಮತ್ತಷ್ಟು ಉದ್ವಿಗ್ನ: ಪೊಲೀಸ್‌ ಅಧಿಕಾರಿ ಸಾವು

Protest ಪಿಒಕೆ ಮತ್ತಷ್ಟು ಉದ್ವಿಗ್ನ: ಪೊಲೀಸ್‌ ಅಧಿಕಾರಿ ಸಾವು

1-wewwqewqe

Loksabha ಇಂದು 4ನೇ ಹಂತದ ಮತ ; ಒಡಿಶಾ, ಆಂಧ್ರದಲ್ಲಿ ವಿಧಾನಸಭೆ ಚುನಾವಣೆ

ISREL

War; ಇಸ್ರೇಲ್‌ಗೆ ಇರಾನ್‌ನಿಂದ ಅಣುಬಾಂಬ್‌ ಬೆದರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.