Chikkodi: ಜನಮನ ಗೆದ್ದಜಂಗಿ ನಿಕಾಲಿ ಕುಸ್ತಿ

ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿ ನೋಡಲು ಸಾವಿರಾರು ಜನ ಸೇರಿದ್ದರು

Team Udayavani, Sep 15, 2023, 3:20 PM IST

Chikkodi: ಜನಮನ ಗೆದ್ದಜಂಗಿ ನಿಕಾಲಿ ಕುಸ್ತಿ

ಚಿಕ್ಕೋಡಿ: ಶಿರಗಾಂವ ಗ್ರಾಮದ ಶ್ರೀ ಬಸವೇಶ್ವರ ಜಾತ್ರೆ ಅಂಗವಾಗಿ ನಡೆದ ಅಂತರಾಷ್ಟ್ರೀಯ ಹೆಸರಾಂತ ಮಲ್ಲರ ಜಂಗೀ ನಿಕಾಲಿ ಕುಸ್ತಿಗಳು ಪ್ರೇಕ್ಷಕರ ಗಮನ ಸೆಳೆದವು. ಕರ್ನಾಟಕ – ಮಹಾರಾಷ್ಟ್ರ ಗಡಿ ಭಾಗದ ಸಾವಿರಾರು ಕುಸ್ತಿ ಅಭಿಮಾನಿಗಳು ಜಗಜಟ್ಟಿಗಳ ಕುಸ್ತಿ ನೋಡಿ ಚಪ್ಪಾಳೆ, ಸಿಳ್ಳೆ, ಕೇಕೇ ಹಾಕುತ್ತಾ ಹುರಿದುಂಬಿಸಿದರು.

ಪ್ರಥಮ ಕುಸ್ತಿಯಲ್ಲಿ ಕೊಲ್ಲಾಪೂರದ ಸಿಕಂದರ ಶೇಖ ಮತ್ತು ಉತ್ತರ ಪ್ರದೇಶ ಮಥುರಾದ ಪಾಲೇಂದರ ನಡುವೆ ನಡೆದ ತೀವ್ರ
ಹಣಾಹಣಿಯಲ್ಲಿ ಸಿಕಂದರ ಶೇಖ ಜಯಗಳಿಸಿ ಸುಮಾರು 3.50 ಲಕ್ಷ ರೂ. ಬಹುಮಾನ ಮತ್ತು ಢಾಲ್‌ ತಮ್ಮದಾಗಿಸಿಕೊಂಡರು.

ಎರಡನೆ ಕುಸ್ತಿ ದೆಹಲಿಯ ಅಶಿಶ್‌ ಹುಡ್ಡಾ ಮತ್ತು ಹರಿಯಾಣದ ಜೋಗಿಂದರತಿ ನಡುವೆ  ಭಾರಿ ತುರುಸಿನಿಂದ ನಡೆಯಿತು. ಅರ್ಧ ಗಂಟೆಗಳ ಕಾಲ ನಡೆದ ಕುಸ್ತಿಯಲ್ಲಿ ಯಾರೂ ಗೆಲ್ಲದೇ ಇರುವ ಕಾರಣ ನಿರ್ಣಾಯಕರು ಸಮಬಲದ ಕುಸ್ತಿ ಎಂದು ಘೋಷಿಸಿದರು.

ಮೂರನೆ ಕುಸ್ತಿ ಹರಿಯಾಣದ ಜಿತು ಪೂಜೇರ ಚಿಕ್ಕೋಡಿ: ಶಿರಗಾಂವ ಗ್ರಾಮದ ಶ್ರೀ ಬಸವೇಶ್ವರ ಜಾತ್ರೆ ಅಂಗವಾಗಿ ನಡೆದ ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿ ನೋಡಲು ಸಾವಿರಾರು ಜನ ಸೇರಿದ್ದರು. ಮತ್ತು ಪುಣೆಯ ಮಾಚುಲಿ ಕೊಕಾಟೆ ನಡುವೆ ನಡೆದು, ಮಾಚುಲಿ ಕೊಕಾಟೆ ವಿಜಯಶಾಲಿಯಾದರು.

ಪ್ರೇಕ್ಷಕರ ಮನಗೆದ್ದ ಥಾಪಾ: ನೇಪಾಳದ ಪೈಲ್ವಾನ್‌ ದೇವ ಥಾಪಾ ಮತ್ತು ಹಿಮಾಚಲ ಪ್ರದೇಶದ ನವೀನ್‌ ನಡುವೆ ಭಾರಿ ತುರಿಸಿನಿಂದ ಕುಸ್ತಿ ನಡೆಯಿತು. 10 ನಿಮಿಷಗಳ ಕಾಲ ಇಬ್ಬರ ನಡುವೆ ನಡೆದ ಕುಸ್ತಿಯಲ್ಲಿ ಕುಳ್ಳನಾದ ದೇವ ಥಾಪಾ ಎದುರಾಳಿ ನವೀನ್‌ ಪೈಲ್ವಾನ್‌ನನ್ನು ಮೈದಾನದ ತುಂಬೆಲ್ಲ ಓಡಾಡಿಸಿದ್ದು, ಜನರ ಮನರಂಜಿಸಿತು.

ಪ್ರತಿ ವರ್ಷ ನಡೆಯುವ ಈ ಕುಸ್ತಿ ಪಂದ್ಯಾವಳಿ ನೋಡಲು ಸಾವಿರಾರು ಜನರು ಆಗಮಿಸುತ್ತಾರೆ. ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗಳಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ, ಜಿಪಂ ಮಾಜಿ ಸದಸ್ಯ ಪವನ ಕತ್ತಿ ಆಗಮಿಸಿ, ಕೆಲವು ಕುಸ್ತಿಗಳಿಗೆ ಚಾಲನೆ ನೀಡಿದರು.

ರತನಕುಮಾರ ಮಠಪತಿ, ಶ್ರೀಮಂತಗೌರವಜಿ ಸರಕಾರ, ಈಶ್ವರ ಫರಾಳೆ, ರಾಮಗೌಡ ಪಾಟೀಲ, ಅಶೋಕ ಹರಗಾಪೂರೆ, ನಿಶಕಾಂತ ಫರಾಳೆ, ಮಹಾದೇವ ಉದಗಟ್ಟಿ, ಭೀಮಾ ಉದಗಟ್ಟಿ, ಬಸವರಾಜ ಕಡೋಲೆ, ಮಹೇಶ ಫರಾಳೆ, ಗೋಪಾಲ ಕುದುರೆ ಮುಂತಾದವರು ಇದ್ದರು.

ಟಾಪ್ ನ್ಯೂಸ್

Charmady: ಕತ್ತಲಾಗ್ತಿದ್ದಂತೆ ಹೆದ್ದಾರಿಗೆ ಬಂದು ನಿಲ್ಲುವ ಕಾಡಾನೆಗಳು.. ವಾಹನ ಸವಾರರ ಪರದಾಟ

Charmady: ಕತ್ತಲಾಗ್ತಿದ್ದಂತೆ ಹೆದ್ದಾರಿಗೆ ಬಂದು ನಿಲ್ಲುವ ಕಾಡಾನೆ… ಜೀವ ಭಯದಲ್ಲಿ ಸವಾರರು

Mumbai: ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ: ಹರ್ಯಾಣದಲ್ಲಿ ಆರನೇ ಆರೋಪಿ ಬಂಧನ

Mumbai: ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ: ಹರ್ಯಾಣದಲ್ಲಿ ಆರನೇ ಆರೋಪಿ ಬಂಧನ

Mangoes: ಹೊರ ರಾಜ್ಯಗಳ ಮಾವಿನ ಹಣ್ಣಿನ ದರ್ಬಾರ್‌!

Mangoes: ಹೊರ ರಾಜ್ಯಗಳ ಮಾವಿನ ಹಣ್ಣಿನ ದರ್ಬಾರ್‌!

Tragedy: ಭೀಕರ ರಸ್ತೆ ಅಪಘಾತ… ಒಂದೇ ಕುಟುಂಬದ 6 ಮಂದಿ ಮೃತ್ಯು, ಓರ್ವನ ಸ್ಥಿತಿ ಗಂಭೀರ

Tragedy: ಭೀಕರ ರಸ್ತೆ ಅಪಘಾತ… ಒಂದೇ ಕುಟುಂಬದ 6 ಮಂದಿ ಮೃತ್ಯು, ಓರ್ವನ ಸ್ಥಿತಿ ಗಂಭೀರ

Sandalwood: ʼದಿ ಜಡ್ಜ್ ಮೆಂಟ್‌ʼ; ಇದು ಮಾಮೂಲಿ ಸಿನಿಮಾ ಅಲ್ಲ

Sandalwood: ʼದಿ ಜಡ್ಜ್ ಮೆಂಟ್‌ʼ; ಇದು ಮಾಮೂಲಿ ಸಿನಿಮಾ ಅಲ್ಲ

3

ಹೆಚ್ಚು ಟೀ, ಕಾಫಿ ಕುಡಿದರೆ ರಕ್ತಹೀನತೆ ಬಾಧೆ ಗ್ಯಾರಂಟಿ!

Mumbai: ಹೋರ್ಡಿಂಗ್‌ ಕುಸಿತು ಬಿದ್ದ ಪ್ರಕರಣ; ಮೃತರ ಸಂಖ್ಯೆ 14ಕ್ಕೆ ಏರಿಕೆ, 74 ಮಂದಿಗೆ ಗಾಯ

Mumbai: ಹೋರ್ಡಿಂಗ್‌ ಕುಸಿದು ಬಿದ್ದ ಪ್ರಕರಣ; ಮೃತರ ಸಂಖ್ಯೆ 14ಕ್ಕೆ ಏರಿಕೆ, 74 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಣಬರ್ಗಿ ರಸ್ತೆ ಪೂರ್ಣ ಆಗೋದು ಯಾವಾಗ? ಸಾರ್ವಜನಿಕರ ಆಕ್ರೋಶ

ಕಣಬರ್ಗಿ ರಸ್ತೆ ಪೂರ್ಣ ಆಗೋದು ಯಾವಾಗ? ಸಾರ್ವಜನಿಕರ ಆಕ್ರೋಶ

1-wqewewqewq

Belgavi; ಭಾರೀ ಪ್ರಮಾಣದ ಅಕ್ರಮ ಮದ್ಯ ಜಪ್ತಿ:ಇಬ್ಬರ ಬಂಧನ

ಟಯರ್‌ ಒಡೆದು ಕ್ರೂಸರ್‌ ಪಲ್ಟಿ: ಅಥಣಿಯ ಮೂವರ ದುರ್ಮರಣ

ಟಯರ್‌ ಒಡೆದು ಕ್ರೂಸರ್‌ ಪಲ್ಟಿ: ಅಥಣಿಯ ಮೂವರ ದುರ್ಮರಣ

1-wqewqwewq

Rain; ಬೆಳಗಾವಿ, ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

Prajwal Case; ಬೆಳಗಾವಿಯಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

Prajwal Case; ಬೆಳಗಾವಿಯಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Charmady: ಕತ್ತಲಾಗ್ತಿದ್ದಂತೆ ಹೆದ್ದಾರಿಗೆ ಬಂದು ನಿಲ್ಲುವ ಕಾಡಾನೆಗಳು.. ವಾಹನ ಸವಾರರ ಪರದಾಟ

Charmady: ಕತ್ತಲಾಗ್ತಿದ್ದಂತೆ ಹೆದ್ದಾರಿಗೆ ಬಂದು ನಿಲ್ಲುವ ಕಾಡಾನೆ… ಜೀವ ಭಯದಲ್ಲಿ ಸವಾರರು

8

Day Care Center: ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಡೇ ಕೇರ್‌ ಕೇಂದ್ರ

Bengaluru: ವಿಪತ್ತು ನಿರ್ವಹಣೆಗೆ 10 ಕೋಟಿ ರೂ.: ತುಷಾರ್‌

Bengaluru: ವಿಪತ್ತು ನಿರ್ವಹಣೆಗೆ 10 ಕೋಟಿ ರೂ.: ತುಷಾರ್‌

Mumbai: ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ: ಹರ್ಯಾಣದಲ್ಲಿ ಆರನೇ ಆರೋಪಿ ಬಂಧನ

Mumbai: ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ: ಹರ್ಯಾಣದಲ್ಲಿ ಆರನೇ ಆರೋಪಿ ಬಂಧನ

Mangoes: ಹೊರ ರಾಜ್ಯಗಳ ಮಾವಿನ ಹಣ್ಣಿನ ದರ್ಬಾರ್‌!

Mangoes: ಹೊರ ರಾಜ್ಯಗಳ ಮಾವಿನ ಹಣ್ಣಿನ ದರ್ಬಾರ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.