Shivamogga ಗಲಭೆ ಪ್ರಕರಣ: ತಲ್ವಾರ್‌ ಕತ್ತಿ ಪ್ರದರ್ಶನ ಮಾಡಿಲ್ಲ: ಪರಮೇಶ್ವರ್‌


Team Udayavani, Oct 2, 2023, 9:09 PM IST

Shivamogga ಗಲಭೆ ಪ್ರಕರಣ: ತಲ್ವಾರ್‌ ಕತ್ತಿ ಪ್ರದರ್ಶನ ಮಾಡಿಲ್ಲ: ಪರಮೇಶ್ವರ್‌

ತುಮಕೂರು: ಶಿವಮೊಗ್ಗ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಕಲ್ಲುತೂರಿದ್ದ 50 ಜನರನ್ನು ಬಂಧಿಸಲಾಗಿದೆ. ಅಲ್ಲಿ ತಲ್ವಾರ್‌ ಕತ್ತಿ ಪ್ರದರ್ಶನ ಮಾಡಿಲ್ಲ, ಮರದ ತುಂಡನ್ನ ಕತ್ತಿ ತರ ಮಾಡಿ ಬಣ್ಣ ಹಾಕಿ, ಅದನ್ನ ಪ್ರದರ್ಶನ ಮಾಡಿದ್ದಾರೆಂದು ಅಲ್ಲಿಯ ಎಸ್‌ಪಿ ನನಗೆ ಮಾಹಿತಿ ಕೊಟ್ಟಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಶಿವಮೊಗ್ಗದಲ್ಲಿ ಅಂತಹದ್ದು ಏನೂ ನಡೆದಿಲ್ಲ. ನೀವು ಏನೇನೋ ಹೇಳಬೇಡಿ. ಯಾರಿಗೋ ಚಾಕು ಹಾಕಿದ್ರು, ಯಾರಿಗೋ ಕತ್ತಿಯಲ್ಲಿ ಹೊಡೆದಿದ್ದು ಇಂತಹದ್ದನೆಲ್ಲ ಮಾತನಾಡಬಾರದು. ಅಲ್ಲಿಯ ಪರಿಸ್ಥಿತಿ ಅರಿತಿದ್ದ ನಾವು, ಮೊದಲೇ ಸಾಕಷ್ಟು ಪೊಲೀಸರನ್ನು ನಿಯೋಜನೆ ಮಾಡಿದ್ದೆವು ಎಂದರು.

ಅನಾವಶ್ಯಕವಾಗಿ ಮಾತನಾಡಬೇಡಿ: “ಶಿವಮೊಗ್ಗದಲ್ಲಿ ಕಲ್ಲು ತೂರಾಟ ನಡೆದಿದ್ದು ಕಾಂಗ್ರೆಸ್‌ ನಿಂದಲೇ’ ಎಂಬ ಈಶ್ವರಪ್ಪ ಹೇಳಿಕೆಗೆ ಟಾಂಗ್‌ ಕೊಟ್ಟ ಪರಮೇಶ್ವರ್‌, ಅದಕ್ಕೆ ಆಗಲೇ ಜನ ಉತ್ತರ ಕೊಟ್ಟಿದ್ದಾರೆ. ಗಲಭೆ ಆಗೋದಕ್ಕೆ ಮೊದಲೇ ನಾವು ಎಲ್ಲಾ ಕ್ರಮ ತೆಗೆದುಕೊಂಡಿದ್ದೆವು. ಆದರೂ, ಸಣ್ಣ ಘಟನೆ ನಡೆದು ಹೋಗಿದೆ. ಅನಾವಶ್ಯಕವಾಗಿ ಮಾತನಾಡಿ, ಪ್ರಚೋದನೆ ಮಾಡೋದು ಸರಿಯಲ್ಲ. ಈಶ್ವರಪ್ಪನವರು ಅರ್ಥ ಮಾಡಿಕೊಳ್ಳಬೇಕು ಎಂದರು.

ಮೆರವಣಿಗೆಯಲ್ಲಿ ನಿಜವಾದ ತಲ್ವಾರ್‌ ಪ್ರದರ್ಶನ ಮಾಡಿದ್ದಾರೆ ಅಂತ ಹೇಳ್ತಿದ್ದಾರೆ. ನಾನು ಅದನ್ನ ಹೋಗಿ ನೋಡಿದ್ನ? ನಿಜವಾದ ತಲ್ವಾರ್‌ ಇರಬಹುದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹೊರರಾಜ್ಯ, ಹೊರ ಜಿಲ್ಲೆ ಯಿಂದಲೂ ಯಾರೂ ಬಂದಿಲ್ಲ. ಅವರು ಕಲ್ಲು ಹೊಡೆದಿದ್ದಾರೆ ಅಂತ ಇವರು ಕಲ್ಲು ಹೊಡೆದಿದ್ದಾರೆ. ಸೆಲೆಕ್ಟಿವ್‌ ಆಗಿ ಅಂತ ಪೊಲೀಸರಿಗೆ ಏನೂ ಹೊಡೆದಿಲ್ಲ. ಸಾಮೂಹಿಕ ಕಲ್ಲು ತೂರಾಟದಲ್ಲಿ ಪೊಲೀಸರ ಮೇಲೆ ಕಲ್ಲು ಬಿದ್ದಿದೆ.
-ಡಾ.ಜಿ.ಪರಮೇಶ್ವರ್‌, ಗೃಹ ಸಚಿವ

ಶಿವಮೊಗ್ಗ ಗಲಾಟೆ ಸಣ್ಣ ಗಲಾಟೆಯಲ್ಲ: ಬೊಮ್ಮಾಯಿ
ಮಂಡ್ಯ: ಶಿವಮೊಗ್ಗದಲ್ಲಿ ನಡೆದ ಗಲಾಟೆ ಗಂಭೀರವಾಗಿದ್ದು, ಸಣ್ಣ ಗಲಾಟೆಯಲ್ಲ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿಕೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಮೇಶ್ವರ್‌ ಅವರು ಈ ರೀತಿ ಮೊದಲನೇ ಬಾರಿಗೆ ಹೇಳಿಕೆ ನೀಡುತ್ತಿಲ್ಲ. ಗಂಭೀರವಾದ ಘಟನೆ ನಡೆದರೂ ಸಣ್ಣ ಘಟನೆ ಎಂದು ಹೇಳುವ ಪ್ರವೃತ್ತಿ ಇದೆ. ಕೋಮು ಗಲಭೆ ಸೃಷ್ಟಿ ಮಾಡುವ ಕುಮ್ಮಕ್ಕು ಕೊಡುವ ಶಕ್ತಿಗಳನ್ನು ಬಂಧಿಸಿ ಜೈಲಿಗೆ ಕಳಿಹಿಸಬೇಕು. ಆದರೆ ಈ ರೀತಿ ಹೇಳಿಕೆ ಕೊಟ್ಟರೆ ಇನ್ನೂ ಪ್ರೋತ್ಸಾಹ ಕೊಟ್ಟಂತೆ ಆಗುತ್ತೆ. ಈ ಘಟನೆ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿ ಎಂದರು.

ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ: ಮಧು
ಬೆಂಗಳೂರು: ಶಿವಮೊಗ್ಗ ಹೊರವಲಯದ ರಾಗಿಗುಡ್ಡ ಪ್ರದೇಶದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಪೋಲಿಸರು ಕಾನೂನು ರೀತಿಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಸೋಮವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಪರಿಸ್ಥಿತಿ ಈಗ ಶಾಂತವಾಗಿದೆ.ಇದು ಹಿಂದೂ-ಮುಸ್ಲಿಂ ಗಲಾಟೆ ಅಲ್ಲ. ಪ್ರಚೋದನೆಯಿಂದ ನಡೆದಿದೆ. ಶಾಂತಿಯನ್ನು ಕಾಪಾಡಲು ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ.

ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿಗಳಿಗೆ ಕಿಡಿಗೇಡಿಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

ರಾಗಿಗುಡ್ಡದಲ್ಲಿ ಮಾತ್ರ ಈ ಘಟನೆ ನಡೆದಿದೆ: ಕೆಲವರು ಮನೆಗೆ ನುಗಿದ್ದಾರೆ ಎಂಬ ಮಾಹಿತಿ ಇದೆ.ಘಟನೆಯಲ್ಲಿ 12 ಜನರಿಗೆ ಗಾಯವಾಗಿದೆ. ಜತೆಗೆ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು 50 ಜನರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗಿದೆ. ರಾಗಿಗುಡ್ಡದಲ್ಲಿ ಮಾತ್ರ ಈ ಘಟನೆ ನಡೆದಿದೆ ವೈಯಕ್ತಿಕ ಸ್ವಾರ್ಥಕ್ಕಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ ಎಂದರು.

ರಾಗಿಗುಡ್ಡದಲ್ಲಿ ಅನೇಕ ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ರೀತಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಯಾರೂ ನಡೆಸಬಾರದು. ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಶಾಂತಿಯುತವಾಗಿ ನಡೆದಿದೆ. ಆದರೂ ಈದ್‌ ಮಿಲಾದ್‌ ಮೆರವಣಿಗೆ ವೇಳೆ ಈ ರೀತಿ ನಡೆದಿರುವುದು ದುರಂತ. ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ತೆಗೆದುಕೊಳ್ಳಬೇಕು.
-ಬಿ.ವೈ.ರಾಘವೇಂದ್ರ, ಸಂಸದ

ಮೆರವಣಿಗೆ ಹೋಗುವ ಸಂದರ್ಭದಲ್ಲಿ ಕೈಯಲ್ಲಿ ತಲ್ವಾರ್‌ ಹಿಡಿದುಕೊಂಡು ಹೋಗುತ್ತಾರೆ. ಯಾರಿಗೆ ಎಚ್ಚರ ಅದು? ಹಿಂದೂ ಸಮಾಜಕ್ಕಾ? ಶಿವಮೊಗ್ಗ ನಗರದಲ್ಲಿ ದೊಡ್ಡ ದೊಡ್ಡ ತಲ್ವಾರ್‌ ನೇತು ಹಾಕಿದ್ದಾರೆ. ಕೋಲಾರದಲ್ಲೂ ಹಾಕಿದ್ದರು. ಆದರೆ ಅಲ್ಲಿನ ಸಂಸದರ ಎಚ್ಚರಿಕೆ ಬಳಿಕ ತೆಗೆದರು. ಅದು ಗೊತ್ತಿದ್ದರೂ ಇಲ್ಲಿ ದೊಡ್ಡ ಖಡ್ಗ ಹಾಕಲು ಏಕೆ ಬಿಟ್ಟರು? ಪೊಲೀಸರು ಸರ್ಕಾರಕ್ಕೆ ಹೆದರಿ ಹೋಗಿದ್ದಾರೆ. ತಲ್ವಾರ್‌ಗೆ ತಲ್ವಾರ್‌ ಹಿಡಿದು ಉತ್ತರ ಕೊಡಲು ಹಿಂದೂ ಸಮಾಜಕ್ಕೆ ಬರುತ್ತದೆ. ಇದು ಸಿಎಂ, ಗೃಹ ಮಂತ್ರಿ ಹಾಗೂ ಮುಸ್ಲಿಮರಿಗೆ ಎಚ್ಚರಿಕೆ.
-ಕೆ.ಎಸ್‌.ಈಶ್ವರಪ್ಪ, ಮಾಜಿ ಸಚಿವ

ಟಾಪ್ ನ್ಯೂಸ್

Rain Alert: ಇಂದು ಬಿರುಗಾಳಿ ಸಹಿತ ಮಳೆ ಸಾಧ್ಯತೆ

Rain Alert: ಇಂದು ಬಿರುಗಾಳಿ ಸಹಿತ ಮಳೆ ಸಾಧ್ಯತೆ

1-qwewqeqw

POK; ಪಾಕ್‌ ವಿರುದ್ಧ ಬೂದಿ ಮುಚ್ಚಿದ ಕೆಂಡ : 4ನೇ ದಿನವೂ ಮುಂದುವರಿದ ಪ್ರತಿಭಟನೆ

1-qeewqew

400 ಕೋ.ರೂ. ಲಾಭ ಸಿಕ್ಕರೂ ಕೋಪವೇಕೆ?: ಗೋಯೆಂಕಾಗೆ ವೀರೇಂದ್ರ ಸೆಹವಾಗ್‌ ಪ್ರಶ್ನೆ

1-wqeewq

Mumbai; ಮೊದಲ ಮಳೆಯ ಭಾರೀ ಅವಾಂತರ: 8 ಮಂದಿ ಸಾವು

ISRO 2

LVM3 ರಾಕೆಟ್‌ ತಯಾರಿಸಲು ಖಾಸಗಿ ವಲಯಕ್ಕೆ ಆಹ್ವಾನ

Belthangady ಸಂಸ್ಕೃತಿ ಸಂರಕ್ಷಣೆಯೆಡೆಗೆ 130 ಸಸ್ಯಪ್ರಭೇದಗಳ ಸಂರಕ್ಷಣೆ

Belthangady ಸಂಸ್ಕೃತಿ ಸಂರಕ್ಷಣೆಯೆಡೆಗೆ 130 ಸಸ್ಯಪ್ರಭೇದಗಳ ಸಂರಕ್ಷಣೆ

badminton

Badminton; ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಇಂದಿನಿಂದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewq

Koratagere; 201 ಕೆರೆಗಳ ಮೇಲೆ ಭೂ ಮಾಫಿಯಾ ಕಣ್ಣು!!

3-

Pavagada: ಕಾರು ಅಪಘಾತ; ಇಬ್ಬರು ಶಿಕ್ಷಕರು ಸ್ಥಳದಲ್ಲೇ ದುರ್ಮರಣ

JDS-BJP ಮೈತ್ರಿ ಸ್ಪರ್ಧಿಗಳು ಪ್ರಜ್ವಲ್‌ ಫೋಟೋ ಹಾಕಿಕೊಂಡು ಮತ ಕೇಳಲಿ: ಬಾಬು

JDS-BJP ಮೈತ್ರಿ ಸ್ಪರ್ಧಿಗಳು ಪ್ರಜ್ವಲ್‌ ಫೋಟೋ ಹಾಕಿಕೊಂಡು ಮತ ಕೇಳಲಿ: ಬಾಬು

7-tumkur

SSLC ಫಲಿತಾಂಶ: ತುಮಕೂರು ಶೇ. 75.16 ರಷ್ಟು ಫಲಿತಾಂಶ

5-koratagere

Koratagere: ಹಲಸಿನ ಮರದಿಂದ ಕಾಲು ಜಾರಿ ಬಿದ್ದು ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವು

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-wqewqewq

Nikhil Kamath; ಮಕ್ಕಳಿಗಾಗಿ 20 ವರ್ಷ ಹಾಳು ಮಾಡಲು ಸಿದ್ಧ ಇಲ್ಲ

Rain Alert: ಇಂದು ಬಿರುಗಾಳಿ ಸಹಿತ ಮಳೆ ಸಾಧ್ಯತೆ

Rain Alert: ಇಂದು ಬಿರುಗಾಳಿ ಸಹಿತ ಮಳೆ ಸಾಧ್ಯತೆ

1-qwewqeqw

POK; ಪಾಕ್‌ ವಿರುದ್ಧ ಬೂದಿ ಮುಚ್ಚಿದ ಕೆಂಡ : 4ನೇ ದಿನವೂ ಮುಂದುವರಿದ ಪ್ರತಿಭಟನೆ

1-qeewqew

400 ಕೋ.ರೂ. ಲಾಭ ಸಿಕ್ಕರೂ ಕೋಪವೇಕೆ?: ಗೋಯೆಂಕಾಗೆ ವೀರೇಂದ್ರ ಸೆಹವಾಗ್‌ ಪ್ರಶ್ನೆ

1-wqeewq

Mumbai; ಮೊದಲ ಮಳೆಯ ಭಾರೀ ಅವಾಂತರ: 8 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.