Export: ರಫ್ತು ನಿಷೇಧ: ನೇಪಾಳಕ್ಕೆ ಅಕ್ಕಿ ಕಳ್ಳಸಾಗಣೆ ಹೆಚ್ಚಳ
Team Udayavani, Oct 15, 2023, 9:08 PM IST
ಮಹರಾಜ್ಗಂಜ್: ಭಾರತ ಅಕ್ಕಿ ರಫ್ತನ್ನು ನಿಷೇಧಿಸಿದ ನಂತರ ಭಾರತ-ನೇಪಾಳ ಗಡಿಯಲ್ಲಿ ಅಕ್ಕಿ ಕಳ್ಳಸಾಗಣೆ ಗಣನೀಯವಾಗಿ ಏರಿಕೆಯಾಗಿದೆ. ಗಡಿಯಲ್ಲಿರುವ ಗ್ರಾಮಸ್ಥರು ಹಣಕ್ಕಾಗಿ ನಡಿಗೆ ಮೂಲಕ ಅಥವಾ ಚಿಕ್ಕ ವಾಹನಗಳಲ್ಲಿ ಭಾರತದಿಂದ ನೇಪಾಳಕ್ಕೆ ಅಕ್ಕಿ ಕಳ್ಳಸಾಗಣೆ ಮಾಡುತ್ತಿದ್ದಾರೆ.
ನೇಪಾಳಿ ವ್ಯಾಪಾರಿಗಳು ಗಡಿಗಳಲ್ಲಿ ಅಕ್ಕಿಯನ್ನು ಸಂಗ್ರಹಿಸಲು ಸಂಗ್ರಹಗಾರಗಳನ್ನು ನಿರ್ಮಿಸಿದ್ದಾರೆ. ಯುವ ನಿರುದ್ಯೋಗಿಗಳು, ಮಹಿಳೆಯರು, ಕೆಲವೊಮ್ಮೆ ವಯಸ್ಸಾದವರು ಅಕ್ಕಿ ಕಳ್ಳಸಾಗಣೆ ಮಾಡುತ್ತಾರೆ. ಇವರಿಗೆ ಕ್ವಿಂಟಲ್ ಅಕ್ಕಿಗೆ 300 ರೂ.ವರೆಗೆ ವ್ಯಾಪಾರಿಗಳು ಹಣ ಪಾವತಿಸುತ್ತಾರೆ. ಹೆಚ್ಚು ಹಣ ಗಳಿಸಲು ಅನೇಕರು ಹಲವು ಬಾರಿ ಸಂಚಾರ ಮಾಡುತ್ತಾರೆ.
ಲಕ್ಷ್ಮೀನಗರ, ಥೂತಿಬರಿ, ನಿರ್ಚಾಲ್, ಪರ್ಸಾ ಮಲಿಕ್, ಬರ್ಗಡ್ವಾ, ಭಗವಾನ್ಪುರ್, ಶ್ಯಾಮ್ ಕಾಟ್, ಫರೇನಿಯಾ, ಹಾರ್ಡಿ ಡಾಲಿ ಮತ್ತು ಖಾನುವಾ ಗ್ರಾಮಗಳಿಂದ ಗಡಿಯನ್ನು ದಾಟಿ ನೇಪಾಳ ತಲುಪುವುದು ಸುಲಭ. 15ರಿಂದ 20 ರೂ.ಗೆ ಖರೀದಿಸುವ ಕೆಜಿ ಅಕ್ಕಿಯನ್ನು ನೇಪಾಳದಲ್ಲಿ 70 ರೂ.ವರೆಗೆ ಮಾರಾಟ ಮಾಡಲಾಗುತ್ತದೆ.
ಕಳೆದ ನಾಲ್ಕು ತಿಂಗಳಲ್ಲಿ ನೇಪಳಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 111.2 ಟನ್ ಅಕ್ಕಿಯನ್ನು ಸಶಸ್ತ್ರ ಸೀಮಾ ದಳ ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್
Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು
AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್
PM Modi ಪತ್ರಿಕಾಗೋಷ್ಠಿ ಯಾಕೆ ನಡೆಸುವುದಿಲ್ಲ? ಉತ್ತರಿಸಿದ ಪ್ರಧಾನಿ ಮೋದಿ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್