Ananteshwar Temple ಇಂದಿನಿಂದ ಮಂಜೇಶ್ವರ ಷಷ್ಠಿ ಮಹೋತ್ಸವ
Team Udayavani, Dec 13, 2023, 6:35 AM IST
ಮಂಗಳೂರು: ಮಂಜೇಶ್ವರದ ಶ್ರೀಮತ್ ಅನಂತೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವವು ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಡಿ. 13ರಿಂದ 19ರ ವರೆಗೆ ನಡೆಯಲಿದೆ.
13ರಂದು ಮಹಾಪೂಜೆ, ಸಮಾರಾಧನೆ, ರಾತ್ರಿ ಪಲ್ಲಕ್ಕಿ ಉತ್ಸವ, ವಸಂತ ಪೂಜೆ, ಮಂಗಳಾರತಿ ನಡೆಯಲಿದೆ. 14ರಂದು ಮೃತ್ತಿಕಾರೋಹಣ, ಧ್ವಜಾರೋಹಣ ನಡೆಯಲಿರುವುದು.
ಯಜ್ಞ, ಮಹಾಪೂಜೆ, ಸಮಾರಾಧನೆ ಹಾಗೂ ರಾತ್ರಿಉತ್ಸವ, ವಸಂತ ಪೂಜೆ, ಮಂಗಳಾರತಿ ನಡೆಯಲಿದೆ. 15ರಂದು ಹಗಲು ಉತ್ಸವ, ಯಜ್ಞ, ಮಹಾಪೂಜೆ, ಸಮಾರಾಧನೆ, ರಾತ್ರಿ ಲಾಲ್ಕಿ ಉತ್ಸವ, ಚಂದ್ರಮಂಡಲ, ಸಣ್ಣರಥದಲ್ಲಿ ಉತ್ಸವ ಹಾಗೂ ಮಹಾಪೂಜೆ ನಡೆಯಲಿದೆ.
ಡಿ. 16ರಂದು ಹಗಲು ಉತ್ಸವ, ಯಜ್ಞ, ಮಹಾಪೂಜೆ, ಸಮಾರಾಧನೆ, ರಾತ್ರಿ ಗರುಡ ಮಂಟಪ, ಚಂದ್ರ ಮಂಡಲ, ಸಣ್ಣರಥದಲ್ಲಿ ಉತ್ಸವ, ವಸಂತ ಪೂಜೆ ಮಂಗಳಾರತಿ ನಡೆಯಲಿರುವುದು.
17ರಂದು ಸ್ವರ್ಣ ಲಾಲ್ಕಿಯಲ್ಲಿ ಹಗಲು ಉತ್ಸವ, ಅಭಿಷೇಕ, ತುಲಾಭಾರ, ನಡೆಯಲಿದೆ. ಸಂಜೆ ಯಜ್ಞಾರತಿ, ಬಲಿ, ಮಹಾಪೂಜೆ, ಸಮಾರಾಧನೆ, ಬೆಳ್ಳಿ ಲಾಲ್ಕಿಯಲ್ಲಿ ಮೃಗಬೇಟೆ ಉತ್ಸವ, ಅಡ್ಡ ಪಲ್ಲಕ್ಕಿ ಉತ್ಸವ, ಸಣ್ಣರಥದಲ್ಲಿ ಉತ್ಸವ, ವಸಂತ ಪೂಜೆ, ಮಂಗಳಾರತಿ, 18ರಂದು ಧರ್ಮ, ಮಹಾಪೂಜೆ, ಯಜ್ಞ ಪೂರ್ಣಾಹುತಿ, ಸ್ವರ್ಣ ವಾಹನದಲ್ಲಿ ಬಲಿ ಉತ್ಸವ ಹಾಗೂ ಸಂಜೆ 5ಕ್ಕೆ ರಥಾರೋಹಣ, ರಾತ್ರಿ ಮಂಗಳಾರತಿ, ಅನಂತರ ಸಮಾರಾಧನೆ ನಡೆಯಲಿರುವುದು.
ಡಿ. 19ರಂದು ಅವಭೃಥ ಉತ್ಸವ, ಶೇಷ ತೀರ್ಥದಲ್ಲಿ ಸ್ನಾನದ ಅನಂತರ ಧ್ವಜಾವರೋಹಣ ನಡೆಯುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಟಿ. ಗಣಪತಿ ಪೈ ಹಾಗೂ ಎಂ. ನಿತಿನ್ಚಂದ್ರ ಪೈ, ಜಿ. ಪ್ರಶಾಂತ್ ಪೈ, ಪ್ರಶಾಂತ್ ಹೆಗ್ಡೆ, ಪಿ. ರಾಜೇಶ್ ಪೈ, 18 ಪೇಟೆಯ ಪ್ರತಿನಿಧಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್
Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ