Karwar; ತುಂಡಾದ ಬಸ್ ಕ್ಲಚ್ ಪ್ಲೇಟ್: ತಪ್ಪಿದ ಅನಾಹುತ
Team Udayavani, Jan 2, 2024, 1:07 PM IST
ಕಾರವಾರ: ಕಾರವಾರದಿಂದ ಕೆರವಡಿ ಗ್ರಾಮಕ್ಕೆ ತೆರಳುತ್ತಿದ್ದ ಬಸ್ ಚಲಿಸುವಾಗಲೇ ಕ್ಲಚ್ ಪ್ಲೇಟ್ ತುಂಡಾದ ಪರಿಣಾಮ ಪ್ರಯಾಣಿಕರು ಗಾಯವಾದ ಘಟನೆ ಕಾರವಾರ ನಗರದ ಹಬ್ಬುವಾಡದ ಗೋಲ್ಡನ್ ಬೇಕರಿ ಸಮೀಪ ನಡೆದಿದೆ.
ಬಸ್ ನಗರವನ್ನು ದಾಟುವ ಮುನ್ನ ಕ್ಲಚ್ ಪ್ಲೇಟ್ ತುಂಡಾಗಿದೆ. ಬಸ್ ಉರುಳಿದ್ದರೆ ಭಾರೀ ಪ್ರಮಾಣದಲ್ಲಿ ಜನರಿಗೆ ಗಾಯಗಳಾಗುತ್ತಿದ್ದವು. ಅದೃಷ್ಟವಶಾತ್ ಬಸ್ ವೇಗ ಕಡಿಮೆ ಇದ್ದ ಕಾರಣ ಹೆಚ್ಚಿನ ಅನಾಹುತವಾಗಿಲ್ಲ. ಬಸ್ ನಲ್ಲಿ 50 ಜನ ಪ್ರಯಾಣಿಕರಿದ್ದು, 20 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಲ್ಲದೇ ಬಸ್ ರಸ್ತೆ ಮಧ್ಯೆ ನಿಂತ ಪರಿಣಾಮ ಹಬ್ಬುವಾಡ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಸಂಚಾರ ಒಂದು ತಾಸು ಬಂದ್ ಆಗಿತ್ತು. ಬಸ್ ಸ್ಥಳಾಂತರ ಮಾಡಿದ ನಂತರ ಕಾರವಾರ ಹಬ್ಬುವಾಡ ರಸ್ತೆಯಲ್ಲಿ ವಾಹನ ಸಂಚಾರ ಪುನಃ ಆರಂಭವಾಗಿದೆ.
ಗುಜರಿ ಬಸ್ ಬಿಟ್ಟು ಜನರ ಪ್ರಾಣದ ಜೊತೆ ಚೆಲ್ಲಾಟ ವಾಡುವ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ. ಡಿಪೋ ಮ್ಯಾನೇಜರ್ ಬೇಜವಾಬ್ದಾರಿ ಬಸ್ ಅಪಘಾತಕ್ಕೆ ಕಾರಣ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Kannada ಗೋಕರ್ಣದಲ್ಲಿ ಪೂಜೆಗೆ ತಡೆ: 11 ಜನರ ವಿರುದ್ಧ ದೂರು ದಾಖಲು
Mundgod: ಬೈಕ್ ಗಳ ನಡುವೆ ಮುಖಾಮುಖಿ ; ಓರ್ವ ಸಾವು, ಇಬ್ಬರು ಗಂಭೀರ
ಗೋ ಮೂತ್ರ ಔಷಧ ಆಗರ-72 ಸಾವಿರ ನಾಡಿಗಳ ಶುದ್ಧೀಕರಣ ಸಾಧ್ಯ: ಡಾ| ಜೀವನಕುಮಾರ
ಶಂಕರರ ಭಾಷ್ಯದಲ್ಲಿದೆ ಉಪನಿಷತ್ತಿನ ವಾಣಿ: ಶ್ರೀ ವೀರೇಶಾನಂದ ಸ್ವಾಮೀಜಿ
Sirsi: ಕೆರೆ ಅಭಿವೃದ್ದಿ ಮಾಡಿದರೆ ಮಾತ್ರ ಜಲ ಸಂರಕ್ಷಣೆ ಸಾಧ್ಯ… :ಶ್ರೀನಿವಾಸ ಹೆಬ್ಬಾರ್
MUST WATCH
ಹೊಸ ಸೇರ್ಪಡೆ
Mumbai: ಹೋರ್ಡಿಂಗ್ ಕುಸಿತು ಬಿದ್ದ ಪ್ರಕರಣ; ಮೃತರ ಸಂಖ್ಯೆ 14ಕ್ಕೆ ಏರಿಕೆ, 74 ಮಂದಿಗೆ ಗಾಯ
Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್ನ ಬಜೆಟ್ಟೇ 835 ಕೋಟಿ ರೂ.
Ramanagara: ಬಿರುಗಾಳಿ ಮಳೆಯ ಅವಾಂತರ… ನೂರಾರು ಮರಗಳು ಧರೆಗೆ, ಹಾರಿ ಹೋದ ಮನೆಯ ಮೇಲ್ಛಾವಣಿ
Madikeri ಮೇಲುಸೇತುವೆ ಕಾಮಗಾರಿ ಪೂರ್ಣ; ಇನ್ನು ಪ್ರವಾಹದ ಭೀತಿ ಇಲ್ಲ
Horoscope: ಈ ರಾಶಿಯವರ ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆಯಾಗಲಿದೆ