Endosulfan ಹೂತಿರುವ ಆರೋಪ; 5 ಬಾವಿಗಳನ್ನು ಅಗೆದು ಪರಿಶೀಲಿಸಲು ನಿರ್ದೇಶ
Team Udayavani, Feb 7, 2024, 5:44 AM IST
ಕಾಸರಗೋಡು: ಮಾರಕ ಕೀಟನಾಶಕ ಎಂಡೋಸಲ್ಫಾನ್ ಹೂತಿಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅದನ್ನು ದೃಢಪಡಿಸಿಕೊಳ್ಳಲು ರಾಜ್ಯ ತೋಟಗಾರಿಕೆ ನಿಗಮದ ಕಾಸರಗೋಡು ಎಸ್ಟೇಟ್ಗೊಳಪಟ್ಟ ಪ್ರದೇಶದಲ್ಲಿ ಮುಚ್ಚಲಾಗಿರುವ ಐದು ಬಾವಿಗಳನ್ನು 100 ಮೀಟರ್ ಆಳಕ್ಕೆ ಅಗೆದು ಪರಿಶೀಲಿಸುವಂತೆ ಕೇಂದ್ರ ಸರಕಾರದ ತಂಡ ನಿರ್ದೇಶಿಸಿದೆ.
ತೋಟಗಾರಿಕೆ ಇಲಾಖೆಯ ಕಾಸರಗೋಡು ಎಸ್ಟೇಟ್ಗೊಳಪಟ್ಟ ಮಿಂಚಿಪದವಿನ ಬಾವಿಯಲ್ಲಿ ಎಂಡೋಸಲ್ಫಾನ್ ಹಾಕಿ ಮುಚ್ಚಲಾಗಿದೆ ಎಂಬ ದೂರು ರಾಷ್ಟ್ರೀಯ ಹಸುರು ಪೀಠಕ್ಕೆ ಲಭಿಸಿತ್ತು. ಪೀಠದ ನಿರ್ದೇಶನದಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ದಕ್ಷಿಣ ವಲಯ ನಿರ್ದೇಶಕ ಡಾ| ಜೆ. ಚಂದ್ರಬಾಬು ನೇತೃತ್ವದ ತಂಡ ಡಿಸೆಂಬರ್ 28ರಂದು ಕಾಸರಗೋಡಿಗೆ ಆಗಮಿಸಿ ಆ ದೂರಿನ ಸಮಗ್ರ ಪರಿಶೀಲನೆ ನಡೆಸಿತ್ತು.
ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಬಳಸತೊಡಗಿದ 1983ರಿಂದ 2001ರ ಅವಧಿಯಲ್ಲಿ ಕಾಸರಗೋಡು ತೋಟಗಾರಿಕೆ ಇಲಾಖೆಗೆ ಸೇರಿದ 5 ಬಾವಿಗಳಲ್ಲಿ ಎಂಡೋಸಲ್ಫಾನ್ ಅನ್ನು ಬ್ಯಾರಲ್ಗಳಲ್ಲಿ ತುಂಬಿಸಿ ಅದನ್ನು ಬಾವಿಯೊಳಗೆ ಇರಿಸಿ ಬಾವಿಗಳನ್ನು ಮುಚ್ಚಲಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಹೆಚ್ಚು ಕಡಿಮೆ 280 ಬ್ಯಾರೆಲ್ಗಳಷ್ಟು ಎಂಡೋಸಲ್ಫಾನ್ ಕಾಸರಗೋಡು ಜಿಲ್ಲೆಯಲ್ಲಿ ಬಳಸಲಾಗಿತ್ತು. ಅದರಲ್ಲಿ ಇನ್ನು 20 ಬ್ಯಾರೆಲ್ಗಳು ಈಗ ಕಾರ್ಪೊರೇಶನ್ನ ಆದೂರು ಎಸ್ಟೇಟ್ನಲ್ಲಿ ಬಾಕಿ ಉಳಿದಿವೆ. ಆದರೆ ಬಾಕಿ ಬ್ಯಾರೆಲ್ಗಳು ಈಗ ಎಲ್ಲಿವೆ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್