Udyavara: ತಪಾಸಣೆ ನಿರತ ಕಾರಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ
Team Udayavani, Mar 27, 2024, 10:00 PM IST
ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಜಂಕ್ಷನ್ ಬಳಿಯ ಚೆಕ್ ಪೋಸ್ಟ್ನಲ್ಲಿ ಪೊಲೀಸರ ಸೂಚನೆಯಂತೆ ನಿಲ್ಲಿಸಿದ್ದ ಕಾರಿಗೆ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆದು ಮಹಿಳೆ ಗಾಯಗೊಂಡ ಘಟನೆ ಮಾ. 26ರಂದು ಸಂಜೆ ಸಂಭವಿಸಿದೆ.
ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಸಂಪತ್ ಅವರ ಪತ್ನಿ, ಬ್ಯಾಂಕ್ ಆಫ್ ಬರೋಡಾ ಪಾಂಗಾಳ ಶಾಖೆ ಸಿಬಂದಿ ರೇಣುಕಾ ಗಾಯಗೊಂಡವರು.
ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ. ರೇಣುಕಾ ಅವರ ಬಲಗಾಲಿನ ಮಂಡಿ, ಕತ್ತು ಹಾಗೂ ಬೆನ್ನಿನ ಭಾಗಕ್ಕೆ ಏಟಾಗಿದ್ದು, ಅವರನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.