Road Mishap; ಉಪ್ಪಿನಂಗಡಿ: ಬೈಕ್ಗಳ ಢಿಕ್ಕಿ; ಓರ್ವ ಸಾವು
Team Udayavani, Apr 1, 2024, 12:24 AM IST
ಉಪ್ಪಿನಂಗಡಿ: ಬೈಕ್ಗಳೆರಡು ಮುಖಾಮುಖೀ ಢಿಕ್ಕಿ ಹೊಡೆದ ಪರಿಣಾಮ ಮೂವರು ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಶನಿವಾರ ರಾತ್ರಿ ಗೋಳಿತ್ತೂಟ್ಟುವಿನಲ್ಲಿ ನಡೆದಿದೆ.
ಸಣ್ಣಂಪಾಡಿ ಸೇತುವೆ ಸಮೀಪ ಉಪ್ಪಿನಂಗಡಿಯ ಕಂಬಳ ವೀಕ್ಷಣೆಗೆಂದು ಬೈಕ್ನಲ್ಲಿ ಸಂಚರಿಸುತ್ತಿದ್ದ ಗೋಳಿತೊಟ್ಟು ನಿವಾಸಿ ವಿನೋಯ್ (35) ಅವರ ಬೈಕ್ ಕೊಕ್ಕಡ ಪರಿಸರದ ನಿವಾಸಿಗರಾದ ಗಗನ್ ಕೊಕ್ಕಡ, ರಜನೀಶ್ ಕೊಕ್ಕಡ ಅವರು ಸಂಚರಿಸುತ್ತಿದ್ದ ಬೈಕ್ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಗಂಭೀರ ಗಾಯಗೊಂಡಿದ್ದರು. ಗಾಯಾಳುಗಳ ಪೈಕಿ ವಿನೋಯ್ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೆ ರವಿವಾರ ಮಧ್ಯಾಹ್ನದ ಸಮಯ ಮೃತಪಟ್ಟರು.
ಮೃತ ವಿನೋಯ್ ಗೋಳಿತೊಟ್ಟು ನಿವಾಸಿ ಜೇಕಬ್ ಅವರ ಮಗನಾಗಿದ್ದು, ವಿವಾಹಿತರಾಗಿ ಒಂದು ಮಗುವಿನ ತಂದೆಯಾಗಿದ್ದಾರೆ. ಉಳಿದಿಬ್ಬರು ಗಾಯಾಳುಗಳು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ತೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬರಲಿದೆ ಮತ್ತೊಂದು ಸ್ಕ್ಯಾಮ್ ಸಿರೀಸ್: ʼಸ್ಕ್ಯಾಮ್ 2010: ಸುಬ್ರತಾ ರಾಯ್ʼ ಅನೌನ್ಸ್
ತಮಿಳುನಾಡಿನಲ್ಲಿ ಖಾಸಗಿ ಬಸ್ ಅಪಘಾತ: ನಾಲ್ವರು ಮೃತ್ಯು, 20 ಕ್ಕೂ ಹೆಚ್ಚು ಮಂದಿ ಗಾಯ
27 ವರ್ಷಗಳ ಹಿಂದೆ ನಾಪತ್ತೆಯಾದವ ನೆರೆಮನೆಯ ನೆಲಮಾಳಿಗೆಯಲ್ಲಿ ಪತ್ತೆ!!: ವಿಡಿಯೋ ವೈರಲ್
Manipal: ಕೆಎಂಸಿಯಲ್ಲಿ ನ್ಯೂಟ್ರಿಷನ್ ಸ್ಟೀವರ್ಡ್ಶಿಪ್ ಕಾರ್ಯಕ್ರಮ
Sandalwood: ‘ಇದು ನಮ್ ಶಾಲೆ’ಯ ಹಾಡುಗಳು ಬಂತು