IOA ಸದಸ್ಯರಿಂದ ನನ್ನನ್ನು ಮೂಲೆಗುಂಪು ಮಾಡಲು ಯತ್ನ: ಅಧ್ಯಕ್ಷೆ ಉಷಾ ಕಿಡಿ
Team Udayavani, Apr 9, 2024, 4:37 PM IST
ನವದೆಹಲಿ: ಐಒಎಯಲ್ಲಿನ (ಭಾರತೀಯ ಒಲಿಂಪಿಕ್ ಸಂಸ್ಥೆ) ಒಳಜಗಳ ತೀವ್ರಗೊಂಡಿದೆ. ಇದರ ವಿರುದ್ಧ ಅಧ್ಯಕ್ಷೆ,ಓಟದ ದಂತಕಥೆ ಪಿ.ಟಿ.ಉಷಾ ನೇರವಾಗಿ ತಿರುಗಿಬಿದ್ದಿದ್ದಾರೆ. ಕಾರ್ಯಕಾರಿ ಮಂಡಳಿ ಸದಸ್ಯರು ತಾನು ನೇಮಕ ಮಾಡಿರುವ ವ್ಯಕ್ತಿಗಳ ಗುತ್ತಿಗೆ ರದ್ದು ಮಾಡಿ, ತನ್ನನ್ನೇ ಮೂಲೆ ಗುಂಪು ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಐಒಎಯ ಸಿಇಒ ಆಗಿ ರಘುರಾಮ್ ಅಯ್ಯರ್ರನ್ನು ನೇಮಕ ಮಾಡುವಾಗ ನಮ್ಮ ಒಪ್ಪಿಗೆ ಪಡೆದಿರಲಿಲ್ಲ ಎಂದು ಈ ಹಿಂದೆಯೇ ಕಾರ್ಯಕಾರಿ ಸದಸ್ಯರು ಆರೋಪಿಸಿದ್ದರು. ಹಾಗೆಯೇ ಅಯ್ಯರ್ರನ್ನು ಅಮಾನತು ಮಾಡುವ ಆದೇಶಕ್ಕೆ ಸಹಿ ಹಾಕಿದ್ದರು. ಇದೀಗ ಶುಕ್ರವಾರ ಉಷಾ ಅವರ ಕಾರ್ಯಕಾರಿ ಸಹಾಯಕ ಅಜಯ್ ನಾರಂಗ್ರ ನೇಮಕಾತಿಯನ್ನೇ ರದ್ದು ಮಾಡಿರುವುದಾಗಿ ಕಾರ್ಯಕಾರಿ ಸಮಿತಿ ಹೇಳಿಕೊಂಡಿದೆ!
ಮಾತ್ರವಲ್ಲ, ಅನಧಿಕೃತ ವ್ಯಕ್ತಿಗಳಿಗೆ ಕೇಂದ್ರ ಕಚೇರಿಗೆ ಪ್ರವೇಶವಿಲ್ಲ ಎಂಬ ನೋಟಿಸ್ ಅನ್ನು ಅಂಟಿಸಿದೆ! ಇದು ಉಷಾ ಅವರಿಗೆ ಬೇಸರ ಬರಿಸಿದೆ. ಕಾರ್ಯಕಾರಿ ಸದಸ್ಯರಿಗೆ ನೇಮಕ ಮಾಡುವ, ರದ್ದು ಮಾಡುವ ಅಧಿಕಾರವಿಲ್ಲ ಎನ್ನುವುದು ನೆನಪಿರಬೇಕು ಎಂದು ಉಷಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Virat Kohli; ನಿವೃತ್ತಿಯ ಬಗ್ಗೆ ಮಾತನಾಡಿದ ವಿರಾಟ್..; ಫ್ಯಾನ್ಸ್ ಗೆ ಆತಂಕತಂದ ಕೊಹ್ಲಿ ಮಾತು
Head Coach; ರಾಹುಲ್ ದ್ರಾವಿಡ್ ಬಳಿಕ ಕೋಚ್ ಹುದ್ದೆ ನಿರಾಕರಿಸಿದ ಟೀಂ ಇಂಡಿಯಾ ದಿಗ್ಗಜ
Sunil Chhetri: ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿದ ಸುನಿಲ್ ಚೇತ್ರಿ
Haji Karam Din: 102ನೇ ವಯಸ್ಸಿನಲ್ಲೂ ಕ್ರಿಕೆಟ್ ಆಟ!
Ipl 2024: ಹೈದರಾಬಾದ್ಗೆ ಗೆಲುವು ಅನಿವಾರ್ಯ, ವಿದಾಯ ಪಂದ್ಯ ಆಡಲಿರುವ ಗುಜರಾತ್ ಟೈಟಾನ್ಸ್