Punjalkatte ಜಾನುವಾರು ಅಕ್ರಮ ಸಾಗಾಟ ಪತ್ತೆ
Team Udayavani, Apr 11, 2024, 12:12 AM IST
ಪುಂಜಾಲಕಟ್ಟೆ: ವಧೆ ಮಾಡಿ ಮಾಂಸ ಮಾರಾಟಕ್ಕಾಗಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಆಟೋ ರಿಕ್ಷಾವನ್ನು ಪೊಲೀಸರು ತಡೆದು ನಿಲ್ಲಿಸಲು ಸೂಚಿಸಿದಾಗ ರಿಕ್ಷಾ ನಿಲ್ಲಿಸದೆ ಜಾನುವಾರು ಹಾಗೂ ರಿಕ್ಷಾವನ್ನು ಬಿಟ್ಟು ಪರಾರಿಯಾದ ಘಟನೆ ಎ. 9ರಂದು ಸಂಭವಿಸಿದೆ.
ಆಟೋರಿಕ್ಷಾ ಚಾಲಕ ತಾಲೂಕಿನ ಕಾವಳಪಡೂರು ಗ್ರಾಮದ ಮಹಮ್ಮದ್ ಮುಸ್ತಫ ಮತ್ತು ಆಟೋರಿಕ್ಷಾದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಲಿಂಗಪ್ಪ ಆರೋಪಿಗಳಾಗಿದ್ದು, ಪರಾರಿಯಾಗಿದ್ದಾರೆ. ಆಟೋ ರಿಕ್ಷಾ ಹಾಗೂ ಜಾನುವಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.