D. K. Shivakumar ಆಸ್ತಿ ಮಾರಿ ಜನರಿಗೆ 15 ಲಕ್ಷ ಕೊಡಲಿ: ಯತ್ನಾಳ್
ಪ್ರಿಯಾಂಕ್ ಖರ್ಗೆ ಆಸ್ತಿ ಮಾರಿ ದಲಿತರಿಗೆ ಮನೆ ಕಟ್ಟಿಕೊಡಲಿ
Team Udayavani, Apr 12, 2024, 6:40 PM IST
ಕಾರವಾರ: ಉಪಮುಖ್ಯಮಂತ್ರಿ, ಕನಕಪುರಬಂಡೆ ಪದೇ ಪದೇ 15 ಲಕ್ಷದ ವಿಷಯ ಮಾತಾಡುತ್ತಿದ್ದಾರೆ. ಜನರ ಆಕೌಂಟ್ಗೆ ಮೋದಿಯ ಹಣ ಬಂದಿಲ್ಲ ಎಂದು ಜಪ ಮಾಡುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ಆಸ್ತಿ ಮಾರಿದರೆ ಕರ್ನಾಟಕದ ಪ್ರತಿ ಪ್ರಜೆಗೆ 15 ಲಕ್ಷ ರೂ. ಹಾಕಬಹುದು ಆ ಕೆಲಸ ಮೊದಲು ಮಾಡಿ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಕೆನರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ ಅವರು, ನಾನು ಹೇಳಿದಂತೆ ಕೇಳು. ನಿನ್ನ ಆಸ್ತಿ ಮಾರಿ, ಜನರ ಆಕೌಂಟ್ಗೆ ದುಡ್ಡು ಹಾಕು. ಮೋದಿ ಹೇಳಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಸುಮ್ಮನೆ ಮಾತನಾಡುವ ಬದಲು ಆಸ್ತಿ ಮಾರಿ ಎಲ್ಲರ ಅಕೌಂಟ್ಗೆ ದುಡ್ಡು ಹಾಕಪಾ. ಡಿಕೆಶಿ ಹಾಗೇ ನಮ್ಮ ಕಡೆ ಪ್ರಿಯಾಂಕ್ ಖರ್ಗೆ ಅಂತಾ ಒಬ್ಬ ಇದಾನ. ಅವನೂ ಸಹ ಬಿಜೆಪಿಯವರು 15 ಲಕ್ಷ ರೂ. ಹಾಕಿಲ್ಲ ಅಂತ ಪದೇ ಪದೇ ಹೇಳ್ತಿರ್ತಾನೆ. ಪ್ರಿಯಾಂಕ್ ನಿಮ್ಮ ಅಪ್ಪ ಮಾಡಿದ ಆಸ್ತಿ ಬೇಕಾದಷ್ಟಿದೆ. ನಿನ್ನ ಆಸ್ತಿ ಮಾರಿ ಕರ್ನಾಟಕದ ದಲಿತರಿಗೆ ಮನೆ ಕಟ್ಟಿಕೊಡು. ಸುಮ್ಮನೆ ದಲಿತರ ಪರ ಅಂತಾ ಮಾತಾಡೋದಲ್ಲ. ಅವರಿಗಾಗಿ ನಿನ್ನ ಆಸ್ತಿ ಸ್ವಲ್ಪ ಖರ್ಚು ಮಾಡು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್