ನೋಟು ನಿಷೇಧ ವಿರೋಧಿಸಿದರೆ ದೇಶದ್ರೋಹದ ಆಪಾದನೆ: ಬೊಳುವಾರು ವ್ಯಂಗ್ಯ


Team Udayavani, Jan 13, 2017, 3:45 AM IST

120117pp2.jpg

ಉಡುಪಿ: ನೋಟು ನಿಷೇಧವನ್ನು ವಿರೋಧಿಸಿದರೆ ದೇಶದ್ರೋಹದ ಆಪಾದನೆಯನ್ನೂ ಎದುರಿಸಬೇಕಾದ ಸಂದಿಗ್ಧತೆ ಇದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬೊಳುವಾರು ಮಹಮ್ಮದ್‌ ಕುಂಞಿ ವ್ಯಂಗ್ಯವಾಡಿದರು.ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಡಾ| ಟಿ.ಎಂ.ಎ. ಪೈ ಭಾರತೀಯ ಸಾಹಿತ್ಯ ಅಕಾಡೆಮಿ, ಮಣಿಪಾಲ ವಿ.ವಿ. ಹಾಗೂ ರಥಬೀದಿ ಗೆಳೆಯರ ವತಿಯಿಂದ ಗುರುವಾರ ನಡೆದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ನಮ್ಮ ಸುತ್ತಮುತ್ತ ಇರುವ ಎಲ್ಲರನ್ನು ಪ್ರೀತಿಸಲು ಕಲಿಯಿರಿ. ಈ ಜಗತ್ತೇ ನಮ್ಮ ಮಾತೃಭೂಮಿಯೆಂದು ತಿಳಿಯಿರಿ. ಮಾತೃಭೂಮಿ ಎಂದರೆ ಕೇವಲ ದೇಶ ಮಾತ್ರವಲ್ಲ. ತಾಲೂಕು, ಜಿಲ್ಲೆ, ರಾಜ್ಯ ಎಲ್ಲವೂ ನಮ್ಮ ಮಾತೃಭೂಮಿಯೇ. ಪ್ರೀತಿಯೊಂದಿದ್ದರೆ ಬೇರೆ ಎಲ್ಲವೂ ಸಿಗುತ್ತವೆ ಎಂದು  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬೊಳುವಾರು ಮಹಮ್ಮದ್‌ ಕುಂಞಿß ಹೇಳಿದರು. 

ಇದು ನನ್ನೂರು: ನಾನು ಪುತ್ತೂರಿನ ಬೊಳುವಾರಿನವನಾದರೂ ನನಗೆ ಬದುಕು ಕಟ್ಟಿಕೊಟ್ಟ ಊರು ಉಡುಪಿ. ಇದು ನನ್ನೂರು. ಈ ಊರಲ್ಲಿ ನನಗೆ ಸಾಕಷ್ಟು ಮಹನೀಯರು ನೆರವಾಗಿದ್ದಾರೆ. ಅವರಲ್ಲಿ ಕೆ.ಕೆ. ಪೈ, ಕು.ಶಿ. ಹರಿದಾಸ ಭಟ್‌, ಬನ್ನಂಜೆ ಗೋವಿಂದಾಚಾರ್ಯ ಹಾಗೂ ಮುರಾರಿ ಬಲ್ಲಾಳ್‌ ಪ್ರಮುಖರು. ನನಗೆ ಎರಡು ಆಸೆಗಳಿವೆ.

ಕಾರಂತರಂತೆ ಬದುಕ ಬೇಕು ಹಾಗೂ ಕುವೆಂಪು ಅವರಂತೆ ಬರೆಯಬೇಕು. ಅವರಷ್ಟು ಅಲ್ಲದಿದ್ದರೂ ಅವರು ಬರೆದಷ್ಟು ದಪ್ಪದ ಪುಸ್ತಕವನ್ನಾದರೂ ಬರೆಯಬೇಕು ಎಂದು ಬರೆದಿದ್ದೇನೆ ಎಂದರು.

ಮುಗ್ಧತೆಯಿಂದಲೇ ಸ್ವಾತಂತ್ರ್ಯದ ಓಟ: ಬೊಳುವಾರು ಅವರ ಬರವಣಿಗೆಯಲ್ಲಿ ಸೃಷ್ಟಿಶೀಲತೆ, ಲೋಕ ಸರಿ ಇರಬೇಕು
ಅನ್ನುವ ಮನೋಧರ್ಮ ಅವರದು. ಅವರ ಸ್ವಾತಂತ್ರ್ಯದ ಓಟ ಪುಸ್ತಕ ಬಿಡುಗಡೆ ಸಂದರ್ಭ ಪರಸ್ಪರ ವಿರುದ್ಧ ಆಲೋಚನೆ ಗಳನ್ನು ಹೊಂದಿದ್ದ ಎಸ್‌.ಎಲ್‌. ಭೈರಪ್ಪ ಹಾಗೂ ಯು.ಆರ್‌. ಅನಂತಮೂರ್ತಿ ಅವರನ್ನು ಒಂದೇ ವೇದಿಕೆಯಲ್ಲಿ ತರಲು ಬಯಸಿದ್ದರು. ಅವರೋರ್ವ ಮುಗ್ಧ ಬರೆಹಗಾರರು. 

ಅಂತಹ ಮುಗ್ಧತೆಯಿಂದಲೇ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ “ಸ್ವಾತಂತ್ರ್ಯದ ಓಟ’ ಅನ್ನುವ ಮಹಾನ್‌ ಕಾದಂಬರಿ ಹುಟ್ಟಿದ್ದು ಎಂದು ಲೇಖಕ, ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.

ಕಾರ್ಯಕ್ರಮದಲ್ಲಿ  ಬೊಳುವಾರು ಅವರ ಸಹೋದರ, ಮಕ್ಕಳ ನಾಟಕ ನಿರ್ದೇಶಕ ಐ.ಕೆ. ಬೋಳುವಾರು ಉಪಸ್ಥಿತರಿದ್ದರು. ಬೊಳುವಾರು ಅವರ ಬಗ್ಗೆ ಸಾಹಿತಿ, ಡಾ| ಟಿ.ಎಂ.ಎ. ಪೈ ಭಾರತೀಯ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ವೈದೇಹಿ, ರಥಬೀದಿ ಗೆಳೆಯರ ಬಳಗದ ಅಧ್ಯಕ್ಷ ಮುರಳೀಧರ ಉಪಾಧ್ಯಾಯ ಅವರು ಬೊಳುವಾರು ಮಹಮ್ಮದ್‌ ಕುಂಞಿ ಅವರ ಬಗ್ಗೆ ಮಾತನಾಡಿದರು.

ಮಣಿಪಾಲ ವಿ.ವಿ.ಯ ಗಾಂಧಿ ಅಧ್ಯಯನ ಕೇಂದ್ರದ ವರದೇಶ್‌ ಹಿರೇಗಂಗೆ ಸ್ವಾಗತಿಸಿದರು. ಜಿ.ಪಿ. ಪ್ರಭಾಕರ್‌ ಕಾರ್ಯಕ್ರಮ ನಿರ್ವಹಿಸಿದರು.

ಇದೆಂಥಾ ದೇಶಪ್ರೇಮ?
ಎಟಿಎಂನಲ್ಲಿ ದುಡ್ಡು ಬಂದರೆ ಖುಷಿ ಜತೆಗೆ ಬೇಸರ ಎರಡೂ ಆಗುವ ಸಂದಿಗ್ಧ ಕಾಲಘಟ್ಟದಲ್ಲಿ ಇದ್ದೇವೆ. ದುಡ್ಡು ಬಂತು ಅನ್ನುವ ಖುಷಿ, ಚಿಲ್ಲರೆ ಹೇಗೆ ಮಾಡುವುದು ಅನ್ನುವ ಬೇಸರ. ಬ್ಯಾಂಕ್‌, ಎಟಿಎಂ ಮುಂದೆ ಹಣಕ್ಕಾಗಿ ಸಾಲು ನಿಂತವರನ್ನು ಹಗಲು-ರಾತ್ರಿಯೆನ್ನದೆ ಗಡಿಯಲ್ಲಿ ದೇಶ ಕಾಯುವ ಯೋಧರಿಗೆ ಹೋಲಿಸುವುದು ಎಂದರೆ ಇದೆಂಥಾ ದೇಶಪ್ರೇಮ ಅನ್ನುವುದನ್ನು ಬೊಳುವಾರು ಮಹಮ್ಮದ್‌ ಕುಂಞಿ ಮಾರ್ಮಿಕವಾಗಿ ನುಡಿದರು.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.