ಕೃಷ್ಣೆಯ ಹಣ ಕಾವೇರಿಗೆ ಹಸ್ತಾಂತರಿಸಲು ಹುನ್ನಾರ!


Team Udayavani, Jan 19, 2017, 3:50 AM IST

ukp.jpg

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಪುನರ್ವಸತಿ ಕೇಂದ್ರಗಳಿಗೆ ಮೂಲಸೌಲಭ್ಯ ಕಲ್ಪಿಸಲು ನೀಡಿರುವ 191.5 ಕೋಟಿ ರೂ. ಅನುದಾನವನ್ನು ಕಾವೇರಿ ನೀರಾವರಿ ನಿಗಮಕ್ಕೆ ಹಸ್ತಾಂತರಿಸಲು ಹುನ್ನಾರ ನಡೆದಿದೆ. ಈ ವಿಚಾರ ಬಹಿರಂಗಗೊಂಡ ಬೆನ್ನಲ್ಲೇ ಯುಕೆಪಿ ವ್ಯಾಪ್ತಿಯ ಸಂತ್ರಸ್ತರು, ಸಂಘಟನೆಗಳು ಆಕ್ರೋಶಗೊಂಡಿದ್ದು, ಜನಪ್ರತಿನಿಧಿಗಳು ಮಾತ್ರ ಗಾಢನಿದ್ರೆಗೆ ಜಾರಿದಂತಿದೆ.

ಪುನರ್ವಸತಿಗೆ ಅನುದಾನ:
ಯುಕೆಪಿ 1 ಮತ್ತು 2ನೇ ಹಂತದಲ್ಲಿ ಒಟ್ಟು 198 ಗ್ರಾಮಗಳು ಮುಳುಗಡೆಯಾಗಿದ್ದು, ಅವುಗಳಿಗಾಗಿ 136 ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ. ಅದರಲ್ಲಿ 31 ಕೇಂದ್ರಗಳನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ. ಇನ್ನುಳಿದ 105 ಯುಕೆಪಿ ಪುನರ್ವಸತಿ ಕೇಂದ್ರಗಳು ಹಾಗೂ 1 ಕಲಬುರಗಿಯ ಸನ್ನತಿ ಸೇತುವೆ ಸಹಿತ ಬ್ಯಾರೇಜ್‌ ನಿರ್ಮಾಣದಿಂದ ಮುಳುಗಡೆಗೊಂಡ ಜನವಸತಿಗೆ ಕಲ್ಪಿಸಿದ ಪುನರ್ವಸತಿ ಸೇರಿ ಒಟ್ಟು 106 ಪುನರ್ವಸತಿ ಕೇಂದ್ರಗಳು 69 ಗ್ರಾಪಂಗಳಿಗೆ ಹಸ್ತಾಂತರಿಸಬೇಕಿದೆ. ಇವುಗಳಿಗೆ ಮೂಲ ಸೌಲಭ್ಯ ಕಲ್ಪಿಸಲು 2016ರ ಅಕ್ಟೋಬರ್‌ನಲ್ಲಿ 191.05 ಕೋಟಿ ರೂ.ಅನುದಾನಕ್ಕೆ ಸರ್ಕಾರ ಮಂಜೂರಾತಿ ನೀಡಿದೆ.

ನಿರ್ಧಾರಕ್ಕೆ ಕಾರಣವೇನು?:
ಪುನರ್ವಸತಿ ಕೇಂದ್ರಗಳ ಮೂಲಸೌಲಭ್ಯಕ್ಕೆ ನೀಡಿರುವ ಅನುದಾನ ಬಳಕೆಗೆ ಮಾರ್ಚ್‌ 31 ಕೊನೇ ದಿನ. ಅಷ್ಟರೊಳಗೆ  ಅನುದಾನ ಬಳಕೆ ಮಾಡುತ್ತೀರಾ? ಕ್ರಿಯಾ ಯೋಜನೆ ಸಿದ್ಧಗೊಂಡಿವೆಯೇ? ಅನುಮೋದನೆ ಸಿಕ್ಕಿದೆಯೇ?  5 ತಿಂಗಳು ಕಳೆದರೂ ಬಳಕೆ ಕುರಿತು ಯಾವುದೇ ಪ್ರಕ್ರಿಯೆ ಬಂದಿಲ್ಲ. ಹೀಗಾಗಿ ಅನುದಾನ ಬಳಕೆ ಸಾಧ್ಯವಿಲ್ಲದಿದ್ದರೆ  ಕಾವೇರಿ ನೀರಾವರಿ ನಿಗಮಕ್ಕೆ ಹಸ್ತಾಂತರಿಸಿ ಎಂದು ಹಣಕಾಸು ಇಲಾಖೆಯಿಂದ ಯುಕೆಪಿ ಆಯುಕ್ತರಿಗೆ  ಪತ್ರ ಬಂದಿದೆ.

ವಿಳಂಬ ಏಕೆ?:
ಅನುದಾನ ಬಳಕೆ ವಿಳಂಬಕ್ಕೆ ಮುಖ್ಯ ಕಾರಣ ಈ ಭಾಗದ ಜನಪ್ರತಿನಿಧಿಗಳು ಎಂಬ ಆರೋಪವಿದೆ. 106 ಪುನರ್ವಸತಿ ಕೇಂದ್ರಗಳನ್ನು ಆಯಾ ಗ್ರಾಪಂಗೆ ಹಸ್ತಾಂತರಿಸಿ, ಜಿಪಂನಿಂದ ಮೂಲಸೌಲಭ್ಯ ಕಲ್ಪಿಸಬೇಕು. ಅದಕ್ಕಾಗಿ 450 ಪ್ರತ್ಯೇಕ ಕಾಮಗಾರಿಗಳಿಗೆ ಜಿಪಂನಿಂದಲೇ ಟೆಂಡರ್‌ ಕರೆದು ಕಾಮಗಾರಿ ಕೈಗೊಳ್ಳಬೇಕು. ಆಮೇಲೆ ಗ್ರಾಪಂಗೆ ಪುನರ್ವಸತಿ ಕೇಂದ್ರ ಹಸ್ತಾಂತರಿಸಿದರೆ ಜನಸಂಖ್ಯೆವಾರು ಹೆಚ್ಚಿನ ಅನುದಾನ ಲಭ್ಯವಾಗುತ್ತದೆ. ಎಲ್ಲ ಕಾಮಗಾರಿ ಕೈಗೊಳ್ಳಲು ಸಾಧ್ಯ ಎಂಬುದು ಕೆಬಿಜೆಎನ್‌ಎಲ್‌ ಮತ್ತು ಯುಕೆಪಿ ನಿಲುವು.

ಆದರೆ, ಪುನರ್ವಸತಿ ಕೇಂದ್ರಗಳಿಗೆ ಮೂಲ ಸೌಲಭ್ಯ ಕಲ್ಪಿಸಿದ ಬಳಿಕವೇ ಗ್ರಾಪಂಗೆ ಹಸ್ತಾಂತರಿಸಿ ಎಂಬುದು ಜನಪ್ರತಿನಿಧಿಗಳ ಒತ್ತಾಯ. ಹಸ್ತಾಂತರಿಸಿದ ಬಳಿಕ ಅಭಿವೃದ್ಧಿ ಮಾಡುತ್ತೇವೆ ಎಂಬುದು ಕೆಬಿಜೆಎನ್‌ಎಲ್‌-ಯುಕೆಪಿ ನಿಲುವು. ಇದರಿಂದ ಅನುದಾನ ಬಳಕೆ ವಿಳಂಬವಾಗಿದೆ.

ಬಳಕೆಗೆ ತರಾತುರಿ:
191.5 ಕೋಟಿ ರೂ. ಕಾವೇರಿ ನೀರಾವರಿ ನಿಗಮದ ಪಾಲಾಗುವ ಆತಂಕ ಸೃಷ್ಟಿಯಾಗಿದ್ದೇ ತಡ, ಇದೀಗ ಅನುದಾನ ಮಾರ್ಚ್‌ ವೇಳೆಗೆ ಬಳಕೆಗೆ ತರಾತುರಿ ತಯಾರಿ ನಡೆದಿದೆ. 106 ಪುನರ್ವಸತಿ ಕೇಂದ್ರಗಳನ್ನು 3 ಜಿಲ್ಲೆಗಳ 69 ಗ್ರಾಪಂಗೆ ಹಸ್ತಾಂತರಿಸಲು ಪ್ರಕ್ರಿಯೆ ನಡೆದಿದ್ದು, 43 ಕೇಂದ್ರಗಳ ಹಸ್ತಾಂತರ ಪೂರ್ಣಗೊಂಡಿದೆ. ಅಲ್ಲದೆ, 106 ಪುನರ್ವಸತಿ ಕೇಂದ್ರಗಳಲ್ಲಿ ಕಟ್ಟಡ-79, ರಸ್ತೆ-178, ನೀರು-86 ಹಾಗೂ ವಿದ್ಯುತ್‌ ಸರಬರಾಜು ಸಂಬಂಧಿತ-107 ಸೇರಿ ಒಟ್ಟು 450 ಕಾಮಗಾರಿಯ ಕ್ರಿಯಾಯೋಜನೆ ಜಿಪಂನಿಂದ ಸಿದ್ಧಗೊಂಡಿದೆ. ವಾರದಲ್ಲಿ ಟೆಂಡರ್‌ ಕರೆಯಲು ಸಿದ್ಧತೆ ಮಾಡಿಕೊಂಡಿದ್ದು,  ಮಾರ್ಚ್‌ 31ರೊಳಗೆ ಅನುದಾನವನ್ನು ಜಿಪಂಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಹಣಕಾಸು ಇಲಾಖೆ ವಿವರಣೆ ಕೇಳಿತ್ತು
191.5 ಕೋಟಿ ರೂ. ಬಳಕೆ ಕುರಿತು ವಿವರಣೆ ಕೇಳಲಾಗಿತ್ತು. ಮಾರ್ಚ್‌ ಅಂತ್ಯದೊಳಗೆ ಬಳಕೆ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಕಾವೇರಿ ನೀರಾವರಿ ನಿಗಮಕ್ಕೆ ಹಸ್ತಾಂತರಿಸಿ ಎಂದು ನಿರ್ದೇಶನ ನೀಡಿತ್ತು. ಆದರೆ, ಟೆಂಡರ್‌ ಕರೆದು ಅನುದಾನ ಬಳಕೆಗೆ ಮುಂದಾಗಿದ್ದೇವೆ.

-ಶಿವಯೋಗಿ ಕಳಸದ, ಯುಕೆಪಿ ಆಯುಕ್ತರು

ಅನುದಾನ ಹಸ್ತಾಂತರ ಸಾಧ್ಯವಿಲ್ಲ
191.5 ಕೋಟಿ ರೂ. ಅನುದಾನವನ್ನು  ಕಾವೇರಿ ನೀರಾವರಿ ನಿಗಮಕ್ಕೆ ಕೊಡಲು ಹೇಗೆ ಸಾಧ್ಯ? ಇಲ್ಲಿನ ಪುನರ್ವಸತಿ ಕೇಂದ್ರಗಳ ಪರಿಸ್ಥಿತಿ ಗಂಭೀರವಾಗಿದೆ. ಮೂಲಸೌಲಭ್ಯ ಕಲ್ಪಿಸಲು ಬಳಕೆ ಮಾಡಲಾಗುತ್ತದೆ. ಇನ್ನೂ ಹೆಚ್ಚಿನ ಅನುದಾನದ ಅಗತ್ಯವಿದೆ. ಆದಕ್ಕಾಗಿ ಒತ್ತಡ ಹಾಕುತ್ತೇವೆ.
-ಎಚ್‌.ವೈ. ಮೇಟಿ, ಬಾಗಲಕೋಟೆ ಶಾಸಕ

– ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

Hassan ವೀಡಿಯೋ ಪ್ರಕರಣ ಎಸ್‌ಐಟಿ ತನಿಖೆಗೆ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.