ಜಲ್ಲಿಕಟ್ಟು:ತಮಿಳುನಾಡು ಸರ್ಕಾರದ ವಿರುದ್ಧ ಸುಪ್ರೀಂಗೆ ಅರ್ಜಿ
Team Udayavani, Jan 25, 2017, 11:58 AM IST
ಹೊಸದಿಲ್ಲಿ : ಜಲ್ಲಿಕಟ್ಟು ಆಚರಣೆಯನ್ನು ಮತ್ತೆ ನಡೆಸುವುದಕ್ಕೆ ತಮಿಳುನಾಡು ಸರ್ಕಾರ ತಂದ ಕಾಯ್ದೆಯನ್ನು ಪ್ರಶ್ನಿಸಿ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಇತರ ಕೆಲ ಸಂಘಟನೆಗಳು ಸುಪ್ರೀಂ ಕೋರ್ಟ್ಗೆ ಆರ್ಜಿಗಳನ್ನು ಸಲ್ಲಿಸಿವೆ. ಎಲ್ಲಾ ಆರ್ಜಿಗಳನ್ನು ಜನವರಿ 30 ರಂದು ವಿಚಾರಣೆಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
ಜಲ್ಲಿಕಟ್ಟಿನಲ್ಲಿ ಗೂಳಿಗಳಿಗೆ ಹಿಂಸೆ ನೀಡುವ ಬಗ್ಗೆ ವಿವರಗಳನ್ನು ಮತ್ತೆ ಅರ್ಜಿಗಳಲ್ಲಿ ವಿವರಿಸಲಾಗಿದ್ದು, ಸರ್ಕಾರ ತಂದ ಕಾಯ್ದೆಗೆ ಅವಕಾಶ ನೀಡಬಾರದು ಎಂದು ತಕರಾರು ತೆಗೆಯಲಾಗಿದೆ ಎಂದು ವರದಿಯಾಗಿದೆ.
ರಾಜ್ಯದಲ್ಲಿ ಜಲ್ಲಿಕಟ್ಟು ನಿಷೇಧದ ವಿರುದ್ಧ ವ್ಯಾಪಕ ಆಕ್ರೋಶ, ಭಾರೀ ಪ್ರತಿಭಟನೆಗಳು ನಡೆದ ಬಳಿಕ ಸರಕಾರ ಕಾಯ್ದೆ ರಚಿಸಿತ್ತು.