2.5 ಲಕ್ಷ ರೂ. ಠೇವಣಿಗೆ ವಿಚಾರಣೆಯಿಲ್ಲ: ಐಟಿ ಇಲಾಖೆ
Team Udayavani, Feb 7, 2017, 3:45 AM IST
ಹೊಸದಿಲ್ಲಿ: ಬ್ಯಾಂಕ್ನಲ್ಲಿ 2.5 ಲಕ್ಷ ರೂ. ವರೆಗೆ ಠೇವಣಿ ಇರಿಸಿದವರನ್ನು ಆದಾಯ ತೆರಿಗೆ ಇಲಾಖೆ ಪ್ರಶ್ನೆ ಮಾಡು ವುದಿಲ್ಲ. ಹೀಗೆಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ತಿಳಿಸಿದೆ.
ನೋಟುಗಳ ಅಪಮೌಲ್ಯದ ಬಳಿಕ ಬ್ಯಾಂಕ್ಗಳಲ್ಲಿ ಠೇವಣಿ ಇರಿಸಿರುವ ಬಗ್ಗೆ ಇಲಾಖೆ ನಡೆಸುತ್ತಿರುವ ಪರಿಶೀಲನೆ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ. ರಿಟರ್ನ್ಸ್ ಸಲ್ಲಿಕೆ ನೀಡಿದ ಮತ್ತು ಬ್ಯಾಂಕ್ನಲ್ಲಿ ಠೇವಣಿ ಇರಿಸಿದ ವೇಳೆ ನೀಡ
ಲಾಗಿರುವ ಮಾಹಿತಿ ತಾಳೆಯಾಗುವುದಿದ್ದರೆ ಆತಂಕಪಡುವುದು ಬೇಡ ಎಂದು ಮಂಡಳಿ ಅಧ್ಯಕ್ಷ ಸುಶೀಲ್ಚಂದ್ರ ತಿಳಿಸಿದ್ದಾರೆ.
ಬ್ಯಾಂಕ್ಗಳಲ್ಲಿನ ಠೇವಣಿಯನ್ನು ವಿವಿಧ ರೀತಿಯಲ್ಲಿ ವರ್ಗೀಕರಿಸಿರುವ ಆದಾಯ ತೆರಿಗೆ ಇಲಾಖೆ ಬೃಹತ್ ಪ್ರಮಾಣದಲ್ಲಿ ಮಾಹಿತಿ ಸಂಗ್ರಹಿಸುತ್ತಿದೆ.