ಪಂಟ ಮುಂದಕ್ಕೆ ಹೋಗೋಕೆ ಕಾರಣ ಏನು ಗೊತ್ತಾ?
Team Udayavani, Feb 16, 2017, 11:14 AM IST
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಎಸ್. ನಾರಾಯಣ್ ನಿರ್ದೇಶನದ “ಪಂಟ’ ಚಿತ್ರ ಬಿಡುಗಡೆಯಾಗಬೇಕಿತ್ತು. ಈ ಕುರಿತು ಜಾಹೀರಾತುಗಳು ಸಹ ಬಂದಿದ್ದವು. ಆದರೆ, ಕೊನೆಯ ಹಂತದಲ್ಲಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಹಾಗೆ ಮುಂದಕ್ಕೆ ಹೋಗುವುದಕ್ಕೆ ಕಾರಣವೇನು ಗೊತ್ತಾ? “ಚೌಕ’ ಚಿತ್ರದ “ಅಲ್ಲಾಡ್ಸುಅಲ್ಲಾಡ್ಸು…’ ಹಾಡು.
“ಚೌಕ’ ಚಿತ್ರದ “ಅಲ್ಲಾಡ್ಸುಅಲ್ಲಾಡ್ಸು…’ ಹಾಡಿಗೂ, “ಪಂಟ’ ಮುಂಂದೂಡಲ್ಪಟ್ಟಿದ್ದಕ್ಕೂ ಸಂಬಂಧವೇನು ಎಂಬ ಪ್ರಶ್ನೆ ಸಹಜ. ವಿಷಯವೇನೆಂದರೆ, “ಚೌಕ’ ಚಿತ್ರದ “ಅಲ್ಲಾಡ್ಸುಅಲ್ಲಾಡ್ಸು…’ ಯಾವ ಪರಿ ಜನಪ್ರಿಯವಾಯಿತು ಎಂಬುದು ಗೊತ್ತು ತಾನೇ? ನಾರಾಯಣ್ ಸಹ “ಪಂಟ’ಕ್ಕೆ “ಕುಲುಕು ಕುಲುಕು …’ ತರಹದ ಹಾಡೊಂದನ್ನು ಮಾಡಿದ್ದರಂತೆ.
ಆದರೆ, ಯಾಕೋ ಅದು ಸರಿ ಹೋಗಲಿಲ್ಲ ಎಂಬ ಕಾರಣಕ್ಕೆ ಬಿಟ್ಟಿದ್ದರಂತೆ. ಚಿತ್ರೀಕರಣ ಸಹ ಮಾಡದೆ ಸುಮ್ಮನಿದ್ದರಂತೆ. ಈಗ “ಅಲ್ಲಾಡ್ಸುಅಲ್ಲಾಡ್ಸು…’ ಹಾಡು ಜನಪ್ರಿಯವಾಗಿರುವ ಹಿನ್ನೆಲೆಯಲ್ಲಿ, “ಪಂಟ’ದ ನಿರ್ಮಾಪಕ ಸುಬ್ರಹ್ಮಣ್ಯಂ, ತಮ್ಮ ಚಿತ್ರದಲ್ಲೂ ಆ ತರಹದ್ದೊಂದು ಹಾಡಿದ್ದರೆ ಚೆನ್ನ ಎಂದು ಅಭಿಪ್ರಾಯ ವ್ಯಕ್ತಪಡಿಸಿದರಂತೆ.
ಮುಂಚೆ ಈ ಹಾಡು ಬೇಡ ಎಂದು ತೀರ್ಮಾನಿಸಿದ್ದ ನಾರಾಯಣ್, ಕೊನೆಗೆ ನಿರ್ಮಾಪಕರ ಒತ್ತಾಯಕ್ಕೆ ಮಣಿದು, ಹಾಡನ್ನು ಸೇರಿಸುವುದಕ್ಕೆ ತೀರ್ಮಾನಿಸಿದ್ದಾರೆ. ಹಾಡು ಸೇರಿಸುವುದು ಎಂದರೆ, ಅದು ಸುಲಭದ ಮಾತೇ? ಮೊದಲು ಚಿತ್ರೀಕರಣ ಮಾಡಿ, ಎಡಿಟ್ ಮಾಡಿ, ಆ ನಂತರ ಇನ್ನೊಮ್ಮೆ ಸೆನ್ಸಾರ್ ಮಾಡಿಸಬೇಕು.
ಹಾಗಾಗಿ ಮೊದಲು ಮೂರು ದಿನಗಳ ಚಿತ್ರೀಕರಣ ಪ್ಲಾನ್ ಮಾಡಿದ್ದಾರೆ ನಾರಾಯಣ್. ಇಂದಿನಿಂದ ಮೂರು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆಯಂತೆ. ಆ ನಂತರ ಹಾಡನ್ನು ಸೇರಿಸಿ ಬಿಡುಗಡೆ ಮಾಡುತ್ತಿದ್ದಾರೆ ನಾರಾಯಣ್. ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಬೇಕಷ್ಟೇ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ