ಶಿರಡಿ ಸಾಯಿಬಾಬಾ ಪವಾಡ! ಏನಿದು ಹುಣಸೂರಿನ ಬಾಬಾ ಮಂದಿರದ ಕೌತುಕ
Team Udayavani, Feb 28, 2017, 4:08 PM IST
ಹುಣಸೂರು(ಮೈಸೂರು): ಗಣಪತಿ ಹಾಲು ಕುಡಿದ, ಯೇಸು ಕಣ್ಣಲ್ಲಿ ರಕ್ತ ಸುರಿಯುತ್ತಿದೆ, ಆ ಮೂರ್ತಿಯಿಂದ ವಿಭೂತಿ ಬರುತ್ತಿದೆ…ಹೀಗೆ ಆಗಾಗ ಇಂತಹ ಪವಾಡಗಳ ಸುದ್ದಿ ಹರಿದಾಡುತ್ತಿರುತ್ತದೆ…ಇದೀಗ ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಹುಣಸೂರು ಪಟ್ಟಣದಲ್ಲಿರುವ ಸಾಯಿಬಾಬಾ ಮಂದಿರದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾದ ವಿಸ್ಮಯ ಮೂಡಿಸುವ ದೃಶ್ಯವೊಂದು ಭಕ್ತರನ್ನು ಅಚ್ಚರಿಗೆ ತಳ್ಳಿದೆ.
ಇಲ್ಲಿನ ಹಳೇ ಬಿಎಂ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ, ಶಿರಡಿ ಸಾಯಿ ಅವರು ಬೆಳಕಿನ ರೂಪದಲ್ಲಿ ಗೋಚರಿಸಿರುವ ಆಕೃತಿ ಸಿಸಿಟಿವಿಯಲ್ಲಿ ಸೆರೆಯಾಗಿದೆ!
ಈ ದೃಶ್ಯ ಕೇವಲ 15 ಸೆಕೆಂಡ್ ಗಳ ಇದ್ದು, ಸಾಯಿ ಬೆಳಕಿನ ರೂಪದಲ್ಲಿ ಗೋಚರಿಸಿದ್ದು ಯಾವ ಭಕ್ತರಿಗೂ ಕಾಣಿಸಿಲ್ಲ. ಆದರೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಸಾಯಿ ಪವಾಡ ಎಂದು ಸುದ್ದಿ ಹರಿದಾಡತೊಡಗಿದೆ.
ಸಾಯಿ ಪವಾಡದ ಈ ದೃಶ್ಯವೀಗ ಎಲ್ಲೆಡೆ ಕಾಳ್ಗಿಚ್ಚಿನಂತೆ ಹರಿದಾಡುತ್ತಿದೆ. ಇದು ಸ್ವತಃ ಸಾಯಿಬಾಬಾ ಅವರ ಪವಾಡ ಎಂದೇ ಭಕ್ತರು ಸುದ್ದಿ ಹಬ್ಬಿಸತೊಡಗಿದ್ದಾರೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ