ಭಾರತ-ಆಸ್ಟ್ರೇಲಿಯ: ಬೆಂಗಳೂರು ಟೆಸ್ಟ್‌ ನೋಟ


Team Udayavani, Mar 1, 2017, 11:05 AM IST

test.jpg

ಆಸ್ಟ್ರೇಲಿಯಕ್ಕೆ ಈ ಸಲವೂ ಭಾರತ ಪ್ರವಾಸ ಕಬ್ಬಿಣದ ಕಡಲೆಯಾಗಲಿದೆ ಎಂಬ ಕ್ರಿಕೆಟ್‌ ಪ್ರೇಮಿಗಳ ಲೆಕ್ಕಾಚಾರ, ನಿರೀಕ್ಷೆಗೆ ಪುಣೆ ಟೆಸ್ಟ್‌ ಪಂದ್ಯ ಮರ್ಮಾಘಾತವಿಕ್ಕಿದೆ. ಮೂರೇ ದಿನಗಳಲ್ಲಿ ಕೊಹ್ಲಿ ಪಡೆ 333 ರನ್ನುಗಳ ಸೋಲುಂಡು ತತ್ತರಿಸಿದೆ. ಸಹಜ ವಾಗಿಯೇ ಎಲ್ಲರ ದೃಷ್ಟಿಯೀಗ ಉದ್ಯಾನ ನಗರಿ ಬೆಂಗಳೂರಿನತ್ತ ನೆಟ್ಟಿದೆ. 

ಬೆಂಗಳೂರು “ಬೋರ್ಡರ್‌-ಗಾವಸ್ಕರ್‌ ಟ್ರೋಫಿ’ ಸರಣಿಯ ಮುಂದಿನ ನಿಲ್ದಾಣ. ಇಲ್ಲಿ ಸರಣಿಯ ದ್ವಿತೀಯ ಟೆಸ್ಟ್‌ ನಡೆಯಲಿದ್ದು, ಭಾರತ ತಿರುಗೇಟು ನೀಡಲೇಬೇಕಾದ ಒತ್ತಡ ಹಾಗೂ ಅನಿವಾರ್ಯತೆಯಲ್ಲಿದೆ. ಇಲ್ಲೇನು ಸಂಭವಿಸೀತು ಎಂದು ಭವಿಷ್ಯ ನುಡಿಯುವುದು ಸುಲಭವಲ್ಲ. ಆದರೆ ಹಿಂದೇನಾಗಿತ್ತು, ಭಾರತ-ಆಸ್ಟ್ರೇಲಿಯ ಇಲ್ಲಿ ಎದುರಾದಾಗ ಎಂಥ ಫ‌ಲಿತಾಂಶ ದಾಖಲಾಗಿತ್ತು ಎಂಬುದನ್ನು ಒಮ್ಮೆ ಅವಲೋಕಿಸಲಡ್ಡಿಯಿಲ್ಲ.

ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಈವರೆಗೆ ಭಾರತ-ಆಸ್ಟ್ರೇಲಿಯ 5 ಟೆಸ್ಟ್‌ಗಳಲ್ಲಿ ಮುಖಾಮುಖೀಯಾಗಿವೆ. ಕಾಂಗರೂ ಪಡೆ ಎರಡನ್ನು ಗೆದ್ದಿದೆ. ಭಾರತಕ್ಕೆ ಒಲಿದದ್ದು ಒಂದೇ ಗೆಲುವು. ಉಳಿದೆರಡು ಟೆಸ್ಟ್‌ ಡ್ರಾಗೊಂಡಿವೆ.

1979 ವಿಶ್ವನಾಥ್‌ ವೈಭವ
ಭಾರತ-ಆಸ್ಟ್ರೇಲಿಯ ಮೊದಲ ಸಲ ಬೆಂಗಳೂರಿನಲ್ಲಿ ಮುಖಾಮುಖೀಯಾದದ್ದು 1979ರಲ್ಲಿ. ಅದು 6 ಪಂದ್ಯಗಳ ಸರಣಿಯ 2ನೇ ಟೆಸ್ಟ್‌ ಆಗಿತ್ತು. ನಾಯಕರಾಗಿದ್ದವರು ಸುನೀಲ್‌ ಗಾವಸ್ಕರ್‌ ಮತ್ತು ಕಿಮ್‌ ಹ್ಯೂಸ್‌. ಪ್ರತಿಕೂಲ ಹವಾಮಾನ ಕಾಡಿದ್ದರಿಂದ ಪಂದ್ಯ ನೀರಸ ಡ್ರಾದಲ್ಲಿ ಕೊನೆಗೊಂಡಿತು.

ಚೊಚ್ಚಲ ಟೆಸ್ಟ್‌ ಆಡಲಿಳಿದ ಸ್ಪಿನ್ನರ್‌ ಶಿವಲಾಲ್‌ ಯಾದವ್‌ ದಾಳಿಗೆ (49ಕ್ಕೆ 4) ಕುಸಿದ ಆಸ್ಟ್ರೇಲಿಯ 333ಕ್ಕೆ ಆಲೌಟ್‌ ಆಯಿತು. ಭಾರತದ ಪರ ದಿಲೀಪ್‌ ವೆಂಗ್‌ಸರ್ಕಾರ್‌ (112) ಮತ್ತು ತವರಿನ ಬ್ಯಾಟಿಂಗ್‌ ಕಲಾಕಾರ ಜಿ.ಆರ್‌. ವಿಶ್ವನಾಥ್‌ (161) ಅಮೋಘ ಪ್ರದರ್ಶನವಿತ್ತರು. ಸ್ಕೋರ್‌ 5ಕ್ಕೆ 457 ಡಿಕ್ಲೇರ್‌. ಬ್ರೂಸ್‌ ಯಾಡ್ಲಿì 107 ರನ್ನಿತ್ತು 4 ವಿಕೆಟ್‌ ಕಿತ್ತರು. ಆಸೀಸ್‌ ದ್ವಿತೀಯ ಸರದಿಯಲ್ಲಿ 3ಕ್ಕೆ 77 ರನ್‌ ಮಾಡಿತು. ಅಲ್ಲಿಗೆ ಪಂದ್ಯಕ್ಕೆ ಡ್ರಾ ಮುದ್ರೆ ಬಿತ್ತು. ಈ ಮೂರೂ ವಿಕೆಟ್‌ ಯಾದವ್‌ ಬುಟ್ಟಿಗೆ ಬಿದ್ದಿತ್ತು.

1998 ಸೋಲಿನ ನಂಟು
1998ರಲ್ಲಿ ಸರಣಿಯ 3ನೇ ಹಾಗೂ ಅಂತಿಮ ಪಂದ್ಯವನ್ನು ಇಲ್ಲಿ ಆಡಲಿಳಿಯುವಾಗ ಅಜರುದ್ದೀನ್‌ ನಾಯಕತ್ವದ ಭಾರತ 2-0 ಮುನ್ನಡೆಯಲ್ಲಿತ್ತು. ಆದರೆ ಮಾರ್ಕ್‌ ಟಯ್ಲರ್‌ ಪಡೆ 8 ವಿಕೆಟ್‌ಗಳಿಂದ ಗೆದ್ದು ಸೋಲಿನ ಅಂತರವನ್ನು 1-2ಕ್ಕೆ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಇತ್ತಂಡಗಳದ್ದು 400ರ ಸಾಧನೆ. ತೆಂಡುಲ್ಕರ್‌ ಅವರ 177 ರನ್‌ ಸಾಹಸದಿಂದ ಭಾರತ 424 ರನ್‌ ಪೇರಿಸಿತು. ಆಸ್ಟ್ರೇಲಿಯಕ್ಕೆ ಮಾರ್ಕ್‌ ವೋ (153) ಆಧಾರವಾದರು. ಸ್ಕೋರ್‌ 400ಕ್ಕೆ ಏರಿತು. ಆದರೆ ದ್ವಿತೀಯ ಸರದಿಯಲ್ಲಿ ಕ್ಯಾಸೊøàವಿಚ್‌ ದಾಳಿಗೆ (28ಕ್ಕೆ 5) ಸಿಲುಕಿ 169ಕ್ಕೆ ಕುಸಿದದ್ದು ಭಾರತಕ್ಕೆ ಮುಳುವಾಯಿತು. ಆಸೀಸ್‌ 2ಕ್ಕೆ 195 ರನ್‌ ಬಾರಿಸಿ ಗೆದ್ದು ಬಂದಿತು. ಆಗ ಕಪ್ತಾನ ಟಯ್ಲರ್‌ 102 ರನ್‌ ಮಾಡಿ ಅಜೇಯರಾಗಿದ್ದರು.
ಹರ್ಭಜನ್‌ ಸಿಂಗ್‌, ಡ್ಯಾರನ್‌ ಲೇಹ್ಮನ್‌ ಅವರಿಗೆ ಇದು ಚೊಚ್ಚಲ ಟೆಸ್ಟ್‌ ಆಗಿತ್ತು.

2004 ಕ್ಲಾರ್ಕ್‌ ಸ್ಮರಣೀಯ ಪಾದಾರ್ಪಣೆ
2004-05ರ 4 ಪಂದ್ಯಗಳ ಟೆಸ್ಟ್‌ ಸರಣಿಗೆ ನಾಂದಿ ಹಾಡಿದ್ದೇ ಬೆಂಗಳೂರು. ಫ‌ಲಿತಾಂಶ-ಭಾರತಕ್ಕೆ 217 ರನ್‌ ಅಂತರದ ಸೋಲು!

ಮೊದಲ ಟೆಸ್ಟ್‌ ಆಡಲಿಳಿದ ಮೈಕಲ್‌ ಕ್ಲಾರ್ಕ್‌ (151), ನಾಯಕ ಆ್ಯಡಂ ಗಿಲ್‌ಕ್ರಿಸ್ಟ್‌ (104) ಪ್ರಚಂಡ ಪ್ರದರ್ಶನವಿತ್ತು ಕಾಂಗರೂ ಮೊತ್ತವನ್ನು 474ಕ್ಕೆ ತಲುಪಿಸಿದರು. ಗಂಗೂಲಿ ಪಡೆ 246ಕ್ಕೆ ಕುಸಿಯಿತು. ಮೆಕ್‌ಗ್ರಾತ್‌ (55ಕ್ಕೆ 4) ಆ್ಯಂಡ್‌ ಕಂಪೆನಿ ಘಾತಕ ದಾಳಿ ಸಂಘಟಿಸಿತ್ತು. ದ್ರಾವಿಡ್‌ ಅಪರೂಪಕ್ಕೆ ಖಾತೆ ತೆರೆಯದೇ ಹೋಗಿದ್ದರು. 

ಬಳಿಕ ಆಸೀಸ್‌ ಹರ್ಭಜನ್‌ ಸ್ಪಿನ್‌ ಸುಳಿಗೆ ಸಿಲುಕಿದರೂ (78ಕ್ಕೆ 6) 228 ರನ್‌ ಒಟ್ಟುಗೂಡಿಸಿತು. ಭಾರತಕ್ಕೆ ಲಭಿಸಿದ ಟಾರ್ಗೆಟ್‌ 457 ರನ್‌. ಆದರೆ 239ಕ್ಕೆ ಆಲೌಟ್‌. ದ್ರಾವಿಡ್‌ 60 ರನ್‌ ಮಾಡಿ ಶೂನ್ಯದ ಕೊರತೆ ನೀಗಿಸಿಕೊಂಡರು. ಇರ್ಫಾನ್‌ ಪಠಾಣ್‌ 55 ರನ್‌ ಹೊಡೆದರು. 

2008 ಜಹೀರ್‌ ಆಲ್‌ರೌಂಡ್‌ ಶೋ  
2008-09ರ ಸರಣಿಗೂ ಬೆಂಗಳೂರಿನಲ್ಲೇ ಮುಹೂರ್ತ ಇರಿಸಲಾಗಿತ್ತು. ಆಗಿನ ನಾಯಕರು ಧೋನಿ ಮತ್ತು ಪಾಂಟಿಂಗ್‌. ಪಂದ್ಯದ ಫ‌ಲಿತಾಂಶ ಡ್ರಾ.

ಆಸ್ಟ್ರೇಲಿಯದ ಮೊದಲ ಸರದಿಯಲ್ಲಿ ಮಿಂಚಿದವರು ಪಾಂಟಿಂಗ್‌ (123), ಮೈಕಲ್‌ ಹಸ್ಸಿ (146), ಜಹೀರ್‌ ಖಾನ್‌ (91ಕ್ಕೆ 5) ಮತ್ತು ಇಶಾಂತ್‌ ಶರ್ಮ (77ಕ್ಕೆ 4). ಹೇಡನ್‌ ಶೂನ್ಯಕ್ಕೆ ಔಟಾದರೂ ಆಸೀಸ್‌ ಮೊತ್ತ 430ಕ್ಕೆ ಏರಿತು. ಭಾರತ ಜವಾಬು 360 ರನ್‌. ದ್ರಾವಿಡ್‌ 51, ಹರ್ಭಜನ್‌ 54, ಜಹೀರ್‌ 57 ರನ್‌ ಕೊಡುಗೆ ಸಲ್ಲಿಸಿದರು.

ದ್ವಿತೀಯ ಸರದಿಯಲ್ಲಿ ಆಸೀಸ್‌ 6ಕ್ಕೆ 228 ರನ್‌ ಗಳಿಸಿ 299 ರನ್‌ ಟಾರ್ಗೆಟ್‌ ನೀಡಿತು. ಸೆಹವಾಗ್‌, ದ್ರಾವಿಡ್‌ 24 ರನ್‌ ಆಗುವಷ್ಟರಲ್ಲಿ ವಾಪಾಸಾದಾಗ ಸೋಲಿನ ಭೀತಿ ಎದು ರಾದರೂ ತೆಂಡುಲ್ಕರ್‌-ಲಕ್ಷ್ಮಣ್‌ ತಂಡದ ರಕ್ಷಣೆಗೆ ನಿಂತರು. ಪಂದ್ಯ ಡ್ರಾ ಆಗುವಾಗ ಭಾರತದ ಸ್ಕೋರ್‌ 4ಕ್ಕೆ 177 ರನ್‌.

2010 ಏಕೈಕ ಗೆಲುವು
ಬೆಂಗಳೂರಿನಲ್ಲಿ ಕಾಂಗರೂ ವಿರುದ್ಧ ಭಾರತಕ್ಕೆ ಏಕೈಕ ಗೆಲುವು ಒಲಿದದ್ದು 2010ರ 2 ಪಂದ್ಯಗಳ ಕಿರು ಸರಣಿ
ಯಲ್ಲಿ. ಬೆಂಗಳೂರಿನಲ್ಲಿ ನಡೆದದ್ದು ದ್ವಿತೀಯ ಟೆಸ್ಟ್‌. 

ಗೆಲುವಿನ ಅಂತರ 7 ವಿಕೆಟ್‌. ಧೋನಿ ಪಡೆಯ ಪಾಲಿಗೆ ಇದು 2-0 ಕ್ಲೀನ್‌ಸಿÌàಪ್‌ ಸಾಹಸವಾಗಿತ್ತು.
ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯ 478 ರನ್‌ ಗಳಿಸಿದರೆ, ಭಾರತ 495 ರನ್‌ ಪೇರಿಸಿತು. ನಾರ್ತ್‌ (128), ಮುರಳಿ ವಿಜಯ್‌ (139) ಶತಕ ಬಾರಿಸಿದರೆ, ಸಚಿನ್‌ ತೆಂಡುಲ್ಕರ್‌ ಅವರದು ದ್ವಿಶತಕ ಪರಾಕ್ರಮವಾಗಿತ್ತು (214). 2ನೇ ಇನ್ನಿಂಗ್ಸ್‌ನಲ್ಲಿ ಆಸೀಸ್‌ 223ಕ್ಕೆ ಕುಸಿಯಿತು. ಭಾರತ 207 ರನ್‌ ಗೆಲುವಿನ ಗುರಿಯನ್ನು 3 ವಿಕೆಟ್‌ ಕಳೆದುಕೊಂಡು ಯಶಸ್ವಿಯಾಗಿ ತಲುಪಿತು.

ವನ್‌ಡೌನ್‌ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ ಟೆಸ್ಟ್‌ ಕ್ಯಾಪ್‌ ಧರಿಸಿದ್ದು ಇದೇ ಪಂದ್ಯದಲ್ಲಿ.

– ಎಚ್‌. ಪ್ರೇಮಾನಂದ ಕಾಮತ್‌

ಟಾಪ್ ನ್ಯೂಸ್

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

2-thirthahalli

ಪ್ರಜ್ವಲ್ ರೇವಣ್ಣ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಮಹಿಳಾ ಕಾಂಗ್ರೆಸ್ ಘಟಕ ಆಗ್ರಹ

ಉತ್ತರದವರು ಸಿಎಂ ಆಗಲು ಬಿಜೆಪಿ ಗೆಲ್ಲಿಸಿ; ಬಸನಗೌಡ ಪಾಟೀಲ

ಉತ್ತರದವರು ಸಿಎಂ ಆಗಲು ಬಿಜೆಪಿ ಗೆಲ್ಲಿಸಿ; ಬಸನಗೌಡ ಪಾಟೀಲ

1-sirsi

Modi ಬಂದಿದ್ದು ಕಾಂಗ್ರೆಸ್‌ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.