ಮೋದಿಗೆ ಪತ್ರ ಬರೆದಿದ್ದ ಆಯೋಗ
Team Udayavani, Mar 20, 2017, 10:26 AM IST
ಹೊಸದಿಲ್ಲಿ: ಮತ ದೃಢೀಕರಣ ಯಂತ್ರಗಳ (ವಿವಿಪ್ಯಾಟ್) ಖರೀದಿಗೆ ಹಣ ಬಿಡುಗಡೆ ಮಾಡಿ ಎಂದು ಕೋರಿ ಪ್ರಧಾನಿ ಮೋದಿ ಅವರಿಗೆ 4 ತಿಂಗಳ ಹಿಂದೆಯೇ ಚುನಾವಣಾ ಆಯೋಗವು ಪತ್ರ ಬರೆದಿತ್ತು ಎಂಬ ಅಂಶ ಬಹಿರಂಗವಾಗಿದೆ. ಪಂಚರಾಜ್ಯಗಳ ಚುನಾವಣೆ ವೇಳೆ ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚಲಾಗಿದೆ ಎಂದು ಬಿಎಸ್ಪಿ, ಆಪ್ ಮತ್ತಿತರ ಪಕ್ಷಗಳು ಆರೋಪಿಸಿರುವ ಬೆನ್ನಲ್ಲೇ ಈ ವಿಚಾರ ಹೊರಬಂದಿದೆ. 2019ರ ಲೋಕಸಭೆ ಚುನಾವಣೆ ವೇಳೆ ಎಲ್ಲ ಮತಗಟ್ಟೆಗಳಲ್ಲೂ ಮತ ದೃಢೀಕರಣ ಯಂತ್ರ ಇರಬೇಕು. ಹಾಗಾಗಿ, 16 ಲಕ್ಷ ಯಂತ್ರಗಳ ಖರೀದಿಗೆ 3,100 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಸಿ ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈದಿ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. 2014ರ ಜೂನ್ನಿಂದ ಈವರೆಗೆ ಈ ಕುರಿತು 10 ಬಾರಿ ಸರಕಾರವನ್ನು ಜ್ಞಾಪಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಪ್ರಧಾನಿಗೇ ನೇರ ಪತ್ರ ಬರೆದಿದ್ದರು.
ಮತ ಹಾಕಿದ ಕೂಡಲೇ ಪಕ್ಕದಲ್ಲೇ ಇರುವ ವಿವಿಪ್ಯಾಟ್ ಯಂತ್ರದಲ್ಲಿ ನೀವು ಯಾರಿಗೆ ಮತ ಹಾಕಿದ್ದೀರಿ ಎಂಬ ಮುದ್ರಿತ ಪ್ರತಿ ಹೊರಬರುತ್ತದೆ. ಇದು ನಿಮ್ಮ ಮತವನ್ನು ದೃಢೀಕರಿಸುತ್ತದೆ. ಮತದಾನದ ವೇಳೆ ಅಕ್ರಮ ನಡೆಯಬಾರದೆಂಬ ಉದ್ದೇಶದಿಂದ ಈ ಯಂತ್ರವನ್ನು ಎಲ್ಲ ಮತಗಟ್ಟೆಗಳಲ್ಲೂ ಹಂತ ಹಂತವಾಗಿ ಅಳವಡಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದರೆ, ಯಂತ್ರಗಳ ಪೂರೈಕೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ 2019ರ ಚುನಾವಣೆಗೆ ಇದರ ಸಂಪೂರ್ಣ ಬಳಕೆಯ ಗುರಿ ಮುಟ್ಟಲಾಗದೇ ನ್ಯಾಯಾಂಗ ನಿಂದನೆ ಎದುರಿಸಬೇಕಾದೀತು ಎಂಬ ಭೀತಿಯನ್ನು ಜೈದಿ ಅವರು ಪತ್ರದಲ್ಲಿ ತೋಡಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು