ಬ್ರಿಟಿಷ್ ಪತ್ರಕರ್ತರ ಮೇಲೆ ಭಾರತೀಯ ಹ್ಯಾಕರ್ಸ್ ಕಣ್ಣು
Team Udayavani, Mar 23, 2017, 3:45 AM IST
ಲಂಡನ್: ಬ್ರಿಟಿಷ್ ಪತ್ರಕರ್ತರು, ಪರಿಸರವಾದಿಗಳು ಹಾಗೂ ಹೋರಾಗಾರರ ಇಮೇಲ್ ಖಾತೆಗಳ ಮೇಲೆ ನಿಗಾ ಇರಿಸಲು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಭಾರತೀಯ ಹ್ಯಾಕರ್ಗಳ ನೆರವು ಪಡೆದಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಯುಕೆ ಪೊಲೀಸ್ ಇಲಾಖೆಗೆ ಅನಾಮಧೇಯ ಪತ್ರವೊಂದು ಬಂದಿದ್ದು, ಪರಿಸರ ಹೋರಾಟಗಾರರು ಹಾಗೂ ಪ್ರಮುಖ ಪತ್ರಿಕೆಗಳ ಪತ್ರಕರ್ತರ ಇಮೇಲ್ ವಿಳಾಸ ಹಾಗೂ ಪಾಸ್ವರ್ಡ್ಗಳು ಪತ್ರದಲ್ಲಿವೆ.
ಈ ಹಿನ್ನೆಲೆಯಲ್ಲಿ ಇಂಡಿಪೆಂಡೆಂಟ್ ಪೊಲೀಸ್ ಕಂಪ್ಲೇಂಟ್ಸ್ ಕಮಿಷನ್ (ಐಪಿಸಿಸಿ) ತನಿಖೆಗೆ ಆದೇಶಿಸಿದ್ದು, ಗ್ರೀನ್ ಪಾರ್ಟಿಯ ಮಾಜಿ ನಾಯಕ ಬ್ರೌನೆಸ್ ಜೆನ್ನಿ ಜೋನ್ಸ್ ಅವರಿಗೆ ಅನಾಮಧೇಯ ಪತ್ರವನ್ನು ಕಳುಹಿಸಲಾಗಿದೆ. “”ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಹಲವು ವರ್ಷಗಳಿಂದ ಚಳವಳಿಗಾರರ ಇಮೇಲ್ ಖಾತೆಗಳನ್ನು ಕಾನೂನು ಬಾಹಿರ ವಾಗಿ ಗಮನಿಸುತ್ತಿದ್ದಾರೆ. ಭಾರತದ ಹ್ಯಾಕರ್ಗಳೊಂದಿಗೆ ಸಂಪರ್ಕ ಸಾಧಿಸಿರುವ ಇಲ್ಲಿನ ಅಧಿಕಾರಿಯೊಬ್ಬರು, ಅವರಿಂದ ಈ ಎಲ್ಲ ಇಮೇಲ್ ವಿಳಾಶ ಹಾಗೂ ಪಾಸ್ವರ್ಡ್ಗಳನ್ನು ಪಡೆದಿದ್ದಾರೆ,” ಎಂದು “ದಿ ಗಾರ್ಡಿಯನ್’ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ