ಬಟ್ಟೆ ವ್ಯಾಪಾರದಿಂದಲೇ ಮಗಳನ್ನು ಕುಸ್ತಿಪಟು ಮಾಡಿದ !


Team Udayavani, Mar 27, 2017, 3:41 PM IST

Divya-27-3.jpg

ಅಂಬಾಲ (ಹರಿಯಾಣ): ಬಟ್ಟೆ ಮಾರಿಯೇ ಮಗಳನ್ನು ಕುಸ್ತಿಪಟು ಮಾಡಿದ ಅಪ್ಪನೊಬ್ಬನ ಸಾಹಸಮಯ ಕತೆ ಇದು. ಹರ್ಯಾಣದ ಅಂಬಾಲದಿಂದ ಇಂಥದೊಂದು ಸುದ್ದಿ ಬೆಳಕಿಗೆ ಬಂದಿದೆ. ಮಗಳ ಹೆಸರು ದಿವ್ಯಾ. ಪ್ರಸ್ತುತ ಭಾರತ್‌ ಕೇಸರಿ ದಂಗಲ್‌ ರಾಷ್ಟ್ರೀಯ ಕುಸ್ತಿ ಚಿನ್ನದ ಪದಕ ವಿಜೇತೆ. ಈ ಪ್ರಶಸ್ತಿಯೊಂದಿಗೆ ದಿವ್ಯಾ 10 ಲಕ್ಷ ರೂ. ಗೆದ್ದಿದ್ದಾರೆ.

ಬಟ್ಟೆ ಮಾರಿ ನೆರವು
ದಿವ್ಯಾಳ ತಂದೆ ಹೆಸರು ಸೂರಜ್‌ ಕಾಕರನ್‌. ಮಗಳ ದೊಡ್ಡ ಮಟ್ಟದ ಸಾಧನೆ ಹಿಂದೆ ತಂದೆಯ ಭಾರೀ ಶ್ರಮವಿದೆ ಎನ್ನುವುದು ಇಲ್ಲಿ ಗಮನಿಸ ಬೇಕಾದ ಅಂಶ. ಸೂರಜ್‌ ಕೂಡ ಒಂದು ಕಾಲದಲ್ಲಿ ಕುಸ್ತಿಪಟುವಾಗುವ ಕನಸು ಕಂಡಿದ್ದರಂತೆ. ಆದರೆ ಅದು ನನಸಾಗಿರಲಿಲ್ಲ. ಹೀಗಂತೆ ಸೂರಜ್‌ ಕೊರಗುತ್ತ ಕೂರಲಿಲ್ಲ. ಮತ್ತೆ ತಮ್ಮ ಹಳ್ಳಿಗೆ ಬಂದರು. ಹಾಲಿನ ವ್ಯಾಪಾರ ಶುರು ಮಾಡಿದರು. ಬಹಳ ಸಮಯ ಇದು ಕೂಡ ಕ್ಲಿಕ್‌ ಆಗಲಿಲ್ಲ. ಅನಂತರ ಹೊಸದಿಲ್ಲಿಗೆ ತೆರಳಿದ ಸೂರಜ್‌ ಕುಟುಂಬ ಕೆಲಸಕ್ಕಾಗಿ ಹುಡುಕಾಟ ನಡೆಸಿತು. 

ಈ ವೇಳೆ ಹೆಣ್ಣು ಮಗು ಜನಿಸಿತು. ಅದಕ್ಕೆ ದಿವ್ಯಾ ಎಂದು ಹೆಸರಿಟ್ಟರು. ಕುಟುಂಬ ನಿರ್ವಹಣೆಗಾಗಿ ತಂದೆ ಬಟ್ಟೆ ಮಾರುವ ಕೆಲಸಕ್ಕೆ ಕೈ ಹಾಕಿದರು. ಎಲ್ಲಿ ಕುಸ್ತಿ ನಡೆಯುತ್ತದೋ ಅಲ್ಲಲ್ಲಿ ತಂದೆ ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಒಂದು ದಿನ ಸೂರಜ್‌ ಗೀತಾ ಪೋಗಟ್‌ ಜೀವನನ ಚರಿತ್ರೆಯ ಬಗ್ಗೆ ಪತ್ರಿಕೆಯಲ್ಲಿ ಓದಿದರು. ತನ್ನ ಮಗಳೇಕೆ ಅಂತಹ ಸಾಧನೆ ಮಾಡಬಾರದು ಎಂದು ನಿರ್ಧರಿಸಿ ಮಗಳಿಗೆ ಸೂಕ್ತ ಪ್ರೋತ್ಸಾಹ ನೀಡಿ ಬೆಳೆಸಿದರು.

ಹುಡುಗರ ಜತೆ ಹೋರಾಡಿ ಗೆದ್ದಳು!
ಗೀತಾ ಪೋಗಟ್‌ ಕುಸ್ತಿ ಕಲಿಕೆಯ ಆರಂಭದ ದಿನಗಳಲ್ಲಿ ಹುಡುಗರೊಂದಿಗೆ ಸ್ಪರ್ಧಿಸಿ ಅಭ್ಯಾಸ ನಡೆಸಿ ಗೆದ್ದಿದ್ದರು. ಮೇರಿ ಕೋಮ್‌ ಕೂಡ ಇಂಥದೇ ಸಾಧನೆ ಮಾಡಿದ್ದರು. ಅಂತೆಯೇ ದಿವ್ಯಾ ಕೂಡ ಹುಡುಗರೊಂದಿಗೆ ಸೆಣಸಾಟ ನಡೆಸಿ ಅನೇಕ ಪಂದ್ಯಗಳಲ್ಲಿ ಗೆದ್ದಿದ್ದಾರೆ. ಹುಡುಗರ ಜತೆಗೆ ಆಡಿದ ಬಹುತೇಕ ಎಲ್ಲ ಪಂದ್ಯಗಳಲ್ಲಿ ವಿಜೇತರಾಗಿದ್ದಾರೆ. 30 ಲಕ್ಷ ರೂ. ಪಡೆದಿದ್ದಾರೆ. ಇದು ಅವರ ಜೀವನದ ದಿಕ್ಕನ್ನೇ ಬದಲಿಸಿತು.

‘ಭವಿಷ್ಯದಲ್ಲಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ ಪದಕ ಗೆಲ್ಲಬೇಕು ಎನ್ನುವ ಬಹು ದೊಡ್ಡ ಕನಸಿದೆ. ಸಾಕ್ಷಿ ಮಲಿಕ್‌ ಸಾಧನೆಯನ್ನು ಮೀರಿಸಿದ ಸಾಧನೆ ಮಾಡಲು ಪ್ರಯತ್ನಿಸುವೆ’
– ದಿವ್ಯಾ, ಭಾರತ್‌ ಕೇಸರಿ ವಿಜೇತ ಕುಸ್ತಿಪಟು.

ಟಾಪ್ ನ್ಯೂಸ್

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

voter

EC; ಮೊದಲ 4 ಹಂತದ ಚುನಾವಣೆಯಲ್ಲಿ ಶೇ.67 ಮತದಾನ

kejriwal 2

ಜೂ.4ರ ಬಳಿಕ ಐಎನ್‌ಡಿಐಎ ಸರಕಾರ: ಅರವಿಂದ ಕೇಜ್ರಿವಾಲ್‌

Amit Shah

ತುಸು ಬಿಸಿ ಹೆಚ್ಚಾದರೆ ರಾಹುಲ್‌ ಬ್ಯಾಂಕಾಕ್‌ಗೆ ಓಟ: ಅಮಿತ್‌ ಶಾ

congress

Congress ತಮಿಳುನಾಡಿನಲ್ಲಿ ಸ್ವಂತ ಬಲದಿಂದ ಸರಕಾರ ರಚನೆ ಯಾವಾಗ?: ಕೆ.ಸೆಲ್ವ ಪೆರುಂತಗೈ

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thailand Open Super 500: ಸಾತ್ವಿಕ್‌ – ಚಿರಾಗ್‌ ಕ್ವಾರ್ಟರ್‌ಫೈನಲಿಗೆ

Thailand Open Super 500: ಸಾತ್ವಿಕ್‌ – ಚಿರಾಗ್‌ ಕ್ವಾರ್ಟರ್‌ಫೈನಲಿಗೆ

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ

Sandeep Lamichhane: ಅತ್ಯಾಚಾರ ಆರೋಪ; ಲಮಿಚಾನೆ ಮುಕ್ತ

Sandeep Lamichhane: ಅತ್ಯಾಚಾರ ಆರೋಪ; ಲಮಿಚಾನೆ ಮುಕ್ತ

31

Italian Open 2024: ಬೋಪಣ್ಣ ಜೋಡಿಗೆ ಸೋಲು

Virat kohli spoke about his post-retirement life

Virat Kohli; ನಿವೃತ್ತಿಯ ಬಗ್ಗೆ ಮಾತನಾಡಿದ ವಿರಾಟ್..; ಫ್ಯಾನ್ಸ್ ಗೆ ಆತಂಕತಂದ ಕೊಹ್ಲಿ ಮಾತು

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-wqeqewqe

Traffic ದಂಡವನ್ನು ತಪ್ಪಿಸಲು ಹೆಲ್ಮೆಟ್‌ ಧರಿಸಿ ಕಾರು ಚಾಲನೆ!

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

rain

Kerala; ಮೂರ್ನಾಲ್ಕು ದಿನ ಭಾರಿ ಮಳೆ: ಹವಾಮಾನ ಇಲಾಖೆ

marriage 2

Wedding gifts ಪಟ್ಟಿ ಇರಿಸಿಕೊಳ್ಳುವುದು ಕಡ್ಡಾಯ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.