ಮಂಗಳೂರು ಪಾಲಿಕೆಯಲ್ಲಿ ಕೈ ಒಳಜಗಳ ಬಹಿರಂಗ: ಧರಣಿಗೆ ಬಿಜೆಪಿ ಸಾಥ್
Team Udayavani, Mar 30, 2017, 1:44 PM IST
ಮಂಗಳೂರು: ಪಾಲಿಕೆಯ ನೂತನ ಮೆಯರ್ ಕವಿತಾ ಸನಿಲ್ ಅವರ ಮೊದಲ ಸಾಮಾನ್ಯ ಸಭೆಯಲ್ಲೆ ಆಡಳಿತ ಪಕ್ಷ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ಗುರುವಾರ ನಡೆದ ಸಭೆಯಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗವೇಣಿ ಅವರು ಧರಣಿ ನಡೆಸಿದ್ದಾರೆ. ಶಾಸಕ ಜಿ.ಆರ್.ಲೋಬೊ ಸಮ್ಮುಖದಲ್ಲೇ ಕಾಂಗ್ರೆಸ್ ಒಳಜಗಳ ಬಹಿರಂಗ ಗೊಂಡಿದ್ದು ವಾಗ್ವಾದವೂ ನಡೆದ ಬಗ್ಗೆ ವರದಿಯಾಗಿದೆ.
ನಾಗವೇಣಿ ಅವರಿಗೆ ವಿಪಕ್ಷ ಬಿಜೆಪಿ ಸದಸ್ಯರು ಬೆಂಬಲ ನೀಡಿರುವ ಬಗ್ಗೆ ವರದಿಯಾಗಿದೆ.