ಸಿಡಿ ಉತ್ಸವ: ಭಕ್ತರಿಂದ ಭಕ್ತಿ ಸಮರ್ಪಣೆ
Team Udayavani, Apr 15, 2017, 1:19 PM IST
ಮಾಯಕೊಂಡ: ಸಮೀಪದ ಹುಚ್ಚವನಹಳ್ಳಿ ಗ್ರಾಮದ ಶುಕ್ರವಾರ ನಡೆದ ಇಟ್ಟಿಗಿ ಕರಿಯಮ್ಮ ಜಾತ್ರೆಯ ಸಿಡಿ ಉತ್ಸವದಲ್ಲಿ ಭಕ್ತರು ಮಕ್ಕಳನ್ನು ಸಿಡಿ ಕಂಬಕ್ಕೆ ಸ್ಪರ್ಶಿಸಿ ಭಕ್ತಿ ಸಮರ್ಪಿಸಿದರು. ಸಿಡಿ ಉತ್ಸವ ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಕ್ತರು ಆಗಮಿಸಿದ್ದರು.
ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಸಿಡಿ ಕಂಬವನ್ನು ಉರುಮೆ, ವಾದ್ಯ ಮೇಳದೊಂದಿಗೆ ಗ್ರಾಮದಿಂದ ಊರ ಹೊರಗಿನ ಕರಿಯಮ್ಮ ದೇವಾಲಯಕ್ಕೆ ತರಲಾಯಿತು. ಸಿಡಿ ಕಂಬವನ್ನು ತರುತ್ತಿದ್ದಂತೆ ಜನರು ಸಿಡಿ ಆಡುವ ಬಯಲಿಗೆ ಕೂತೂಹಲದಿಂದ ಆಗಮಿಸಿದ್ದರು.
ತೆಂಗಿನಕಾಯಿ ಕಟ್ಟಿದ ಸಿಡಿ ಕಂಬವನ್ನು ಹತ್ತಾರು ಸುತ್ತು ತಿರುಗಿಸಿದರು. ಪೊಲೀಸ್ ಇಲಾಖೆ ಮುಂಚೆಯೇ ಸಿಡಿ ಆಡದಂತೆ ತಿಳಿಸಿದ ಕಾರಣದಿಂದ ಭಕ್ತರು ತಮ್ಮ ಮಕ್ಕಳನ್ನು ಸಿಡಿ ಕಂಭಕ್ಕೆ ಮುಟ್ಟಿಸಿ, ಭಕ್ತಿ ಸಮರ್ಪಿಸಿದರು. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ದೇವಿಗೆ ಪೂಜೆ ಸಲ್ಲಿಸಿದರು.
ಗ್ರಾಮದ ಮುಖಂಡರು ಗಂಡು ಮಕ್ಕಳಿಗಾದರೂ ಸಿಡಿ ಆಡಲು ಅನುಮತಿ ಕೊಡಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಧಿ ಇಲಾಖೆಯ ಅಧಿಧಿಕಾರಿ ಚಂದ್ರಪ್ಪ ಅವರನ್ನು ಕೇಳಿದರಾದರೂ ಅನುಮತಿ ಸಿಗಲಿಲ್ಲ. ಸಿಡಿಯ ಕಂಬದ ಮೇಲೆ ಮಕ್ಕಳನ್ನು ಮಾತ್ರ ಮುಟ್ಟಿಸಲು ಅನುಮತಿ ನೀಡಿದರು.
ಹುಚ್ಚವನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳ ಭಕ್ತರ ಆರಾಧ್ಯ ದೈವ ಪ್ರತಿ ವರ್ಷವು ಜಾತ್ರೆಯನ್ನು ವಾರವಿಡಿ ವಿಜೃಭಣೆಯಿಂದ ಆಚರಣೆ ಮಾಡುತ್ತಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಚಂದ್ರಪ್ಪ, ದೇವದಾಸಿ ಪುನರ್ವಸತಿ ಯೋಜನೇಯ ಅನುಷ್ಠಾನ ಅಧಿಕಾರಿಗಳದ ಪ್ರಜಾ° ,ಮೊಕ್ಷಪತಿ ಪಿಎಸ್ಐ ಶ್ರೀಧರ್, ಕಂದಾಯ ನಿರೀಕ್ಷಕ ಚಂದ್ರಪ್ಪ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Politics: ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಲಿ: ಅಶ್ವತ್ಥನಾರಾಯಣ
Transfer: ಕೆಇಎ ನಿರ್ದೇಶಕಿ ರಮ್ಯಾ ಎತ್ತಂಗಡಿ; ಸಿಇಟಿ ಪತ್ರಿಕೆ ಗೊಂದಲಕ್ಕೆ ತಲೆದಂಡ
India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್ ಸ್ವೀಪ್; ಡಿಕೆಶಿ
Supreme Court: ಕೇಜ್ರಿ ಜಾಮೀನು ರದ್ದು ಕೋರಿದ್ದ ಇ.ಡಿ. ಅರ್ಜಿ ವಜಾ
Chikkaballapur: ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ, ರಕ್ಷಣೆಗೆ ಹೋದವ ಸಾವು