ಮ್ಯಾನ್ಮಾರ್ನಲ್ಲಿ ವಾಟರ್ ಫೆಸ್ಟಿವಲ್ ದುರಂತ:285 ಕ್ಕೂ ಹೆಚ್ಚು ಬಲಿ
Team Udayavani, Apr 18, 2017, 11:10 AM IST
ನ್ಯೆಪಿಡೊ : ಮ್ಯಾನ್ಮಾರ್ನ ವಿವಿಧೆಡೆ ವಾಟರ್ ಫೆಸ್ಟಿವಲ್ ಸಂಭ್ರಮಾಚರಣೆ ವೇಳೆ ದುರಂತಗಳ ಸರಮಾಲೆಯೆ ಸಂಭವಿಸಿದ್ದು , ಅವಘಡಗಳಲ್ಲಿ 285 ಜನ ಪ್ರಾಣ ಕಳೆದುಕೊಂಡಿದ್ದು,1,073 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಳೆದ ವರ್ಷವೂ ದುರಂತಗಳು ನಡೆದಿದ್ದು, ಈ ವರ್ಷ ಮೃತರ ಸಂಖ್ಯೆ ಈಗಾಗಲೇ 13 ಹೆಚ್ಚಾಗಿದೆ. ವಿವಿಧೆಡೆ 1,200 ಕ್ರಿಮಿನಲ್ ಕೇಸುಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಗಾಯಾಳುಗಳ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಎಲ್ಲಾ ಲಕ್ಷಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಧಾನಿ ನ್ಯಾಪಿಡೋದಲ್ಲಿ 10 ಮಂದಿ, ಯಾಂಗೋನ್ನಲ್ಲಿ 44,ಮಂಡಾಲೇಯಲ್ಲಿ 36, ಸಾಗೇಂಗ್ನಲ್ಲಿ 26 ತನಿಂತಾರ್ಯಿನಲ್ಲಿ 11 , ಬಗೋನಲ್ಲಿ 37,ಮಾಗ್ವೇನಲ್ಲಿ 20,ಮೋನ್ ರಾಜ್ಯದಲ್ಲಿ 17, ರಖೀನೆಯಲ್ಲಿ 29 ಮತ್ತು ಶಾನ್ ಪ್ರಾಂತ್ಯದಲ್ಲಿ 28 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಮ್ಯಾನ್ಮಾರ್ ಸೇರಿದಂತೆ ಎಷ್ಯಾದ ಕೆಲ ರಾಷ್ಟ್ರಗಳಲ್ಲಿ ಹೊಸವರ್ಷಾಚರಣೆ ಸಂಭ್ರಮದ ವೇಳೆ ವಾಟರ್ ಫೆಸ್ಟಿವಲ್ ನಡೆಸುವುದು ವಾಡಿಕೆ . ಅದರಂತೆ ಜನರು ನೀರಿಗಿಳಿದು ಆಟವಾಡುತ್ತಾ ಪರಸ್ಪರ ನೀರು ಚೆಲ್ಲುವ ಮೂಲಕ, ನೀರಿನಲ್ಲಿ ಮುಳುಗಿಸುವ ಮೂಲಕ ಸಂಭ್ರಮಿಸುತ್ತಾರೆ. ಈ ವೇಳೆ ಹಿಂಸಾಚಾರ , ಅಪಘಾತ, ಕಳ್ಳತನ, ದೊಂಬಿಗಳು, ಹತ್ಯೆಗಳು ಮತ್ತು ಕಾಲ್ತುಳಿತ ಪ್ರಕರಣಗಳು ಪ್ರತೀ ವರ್ಷವೂ ಸಂಭವಿಸುವುದು ಸಹಜ.
ತಿಂಗ್ಯಾನ್ ಪ್ರಾತ್ಯದಲ್ಲಿ 4 ದಿನಗಳ ಕಾಲ ವಾಟರ್ ಫೆಸ್ಟಿವಲ್ ಸಂಭ್ರಮಾಚರಣೆ ನಡೆಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲೇಸರ್ ಸಂವಹನ: ಭೂಮಿಗೆ 14 ಕೋಟಿ ಮೈಲು ದೂರದಿಂದ ಸಂದೇಶ ರವಾನೆ
Boeing aircraft: ಬೋಯಿಂಗ್ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್ ಸಾವು
Joe Biden: ವಲಸಿಗರನ್ನು ಸ್ವೀಕರಿಸದ ಕಾರಣ ಭಾರತದ ಆರ್ಥಿಕ ಪ್ರಗತಿ ಕುಂಠಿತ: ಬೈಡೆನ್
China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು
Pleasure Squad: ತನ್ನ ಸುಖಕ್ಕಾಗಿ ಪ್ರತಿವರ್ಷ 25 ಹುಡುಗಿಯರನ್ನು ಆಯ್ಕೆಮಾಡುವ ಕಿಮ್ ಜಾಂಗ್!
MUST WATCH
ಹೊಸ ಸೇರ್ಪಡೆ
Parashurama Theme Park; ಕೊನೆಯ ಸಾಕ್ಷ್ಯವೂ ನಾಶಕ್ಕೆ ಯತ್ನ: ಉದಯ ಕುಮಾರ್ ಶೆಟ್ಟಿ ಆರೋಪ
Rahul Gandhi ಭೇಟಿ ಯಾವುದೇ ಪರಿಣಾಮ ಬೀರದು: ಬಿಎಸ್ವೈ
Varanasi; ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ ದಿನಾಂಕ ನಿಗದಿ
By-election ಮೂಲಕವೂ ಪ್ರಿಯಾಂಕಾ ಸಂಸತ್ ಪ್ರವೇಶ: ಜೈರಾಮ್ ರಮೇಶ್
ಪದವೀಧರರ, ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ: ಜಿಲ್ಲಾಧಿಕಾರಿ