ಭೂ ಖರೀದಿಯಲ್ಲಿ ಸರ್ಕಾರದಿಂದಲೇ ವಂಚನೆ?
Team Udayavani, May 6, 2017, 12:10 PM IST
ಚಿತ್ರದುರ್ಗ: ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್, ಆಶ್ರಯ ಮನೆಗಳ ನಿರ್ಮಾಣಕ್ಕೆ ಬೇಕಾದ ಜಮೀನು ಖರೀದಿ
ವಿಚಾರದಲ್ಲಿ ಸರ್ಕಾರವೇ ರೈತರಿಗೆ ವಂಚನೆ ಮಾಡಿರುವುದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಚಳ್ಳಕೆರೆ ತಾಲೂಕಿನ ನೆಲಗೇತನ ಹಟ್ಟಿಯಲ್ಲಿ ಈ ಪ್ರಕರಣ ನಡೆದಿದೆ.
ಗ್ರಾಮದ ರೈತರಾದ ಸಣ್ಣಬೋರಯ್ಯ ಅವರು 12-6-1998ರಂದು ಹಾಗೂ ದೊಡ್ಡಬೋರಯ್ಯ ಎಂಬುವರು 24-1-
2002ರಂದು ಮೃತಪಟ್ಟಿದ್ದಾರೆ. ಹಿಂದೂ ಅವಿಭಾಜ್ಯ ಕುಟುಂಬ ಕಾಯ್ದೆಯ ಪ್ರಕಾರ ಆಸ್ತಿ ಹಕ್ಕಿನ ಬದಲಾವಣೆ ಆಗಬೇಕು.
ಮೊದಲು ಪತ್ನಿ ಹೆಸರಿಗೆ, ಪತ್ನಿ ಇಲ್ಲದಿದ್ದರೆ ಕುಟುಂಬದ ಹಿರಿಯ ಮಗನಿಗೆ ಪೌತಿ ಖಾತೆ ಮಾಡಿಕೊಡಬೇಕು.
ಒಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಅವರ ಒಪ್ಪಿಗೆ ಮೇರೆಗೆ ಏಕವ್ಯಕ್ತಿಗೆ ಖಾತೆ ಮಾಡಿಕೊಡಬಹುದಾಗಿದೆ. ಇಲ್ಲವಾದರೆ ಜಂಟಿ ಖಾತೆಯಲ್ಲಿ ಎಲ್ಲರ ಹೆಸರಿಗೆ ಮಾಡಬೇಕಾಗುತ್ತದೆ. ಆದರೆ, ನೆಲಗೇತನಹಟ್ಟಿಯ ಪ್ರಕರಣದಲ್ಲಿ ಈ ಕಾಯ್ದೆಯ ಉಲ್ಲಂಘನೆಯಾಗಿದೆ ಎನ್ನಲಾಗಿದೆ.
ವಂಚನೆ ನಡೆದಿದ್ದು ಹೀಗೆ: ಸಣ್ಣಬೋರಯ್ಯ ಹಾಗೂ ದೊಡ್ಡಬೋರಯ್ಯ ಮೃತಪಟ್ಟಿದ್ದರೂ ಅಧಿಕಾರಿಗಳು ಅವರ ಮಕ್ಕಳಿಗೆ ಪೌತಿ ಖಾತೆಯನ್ನೇ ಮಾಡಿಕೊಟ್ಟಿಲ್ಲ. ತಂದೆಯ ಹೆಸರಿನಲ್ಲೇ ಚಳ್ಳಕೆರೆ ನೋಂದಣಾಧಿಕಾರಿಗಳ ಕಚೇರಿಯಲ್ಲಿ 24-4-2004ರಂದು ಕರ್ನಾಟಕ ಸರ್ಕಾರದ ರಾಜ್ಯಪಾಲರ ಹೆಸರಿನಲ್ಲಿ ಚಳ್ಳಕೆರೆ ತಾಲೂಕು ಸಮಾಜ ಕಲ್ಯಾಣ ಇಲಾಖೆ,
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಎಚ್.ಆರ್. ಬಾಲಕೃಷ್ಣ ಹೆಸರಿಗೆ 20 ಗುಂಟೆ ಜಮೀನನ್ನು ದಾನಪತ್ರ ಮಾಡಿಸಲಾಯಿತು. ಅಲ್ಲದೆ 11-1-2008ರಂದು 7.33 ಎಕರೆ ಜಾಗವನ್ನು ಚಳ್ಳಕೆರೆ ತಹಶೀಲ್ದಾರ್ ಹೆಸರಿನಲ್ಲಿ ಖಾತೆ ಬದಲಾವಣೆ ಮಾಡಲಾಗಿದೆ. ಪ್ರತಿ ಎಕರೆಗೆ ಅಂದಿನ ಮಾರುಕಟ್ಟೆ ದರವಾದ 19,200 ರೂ. ನೀಡಲಾಗಿದೆ. ಮೊದಲು ಖರೀದಿಸಿದ 20 ಗುಂಟೆ ಜಾಗದಲ್ಲಿ ಸಮಾಜಕಲ್ಯಾಣ ಇಲಾಖೆಯ ಹಾಸ್ಟೆಲ್, ತಹಶೀಲ್ದಾರ್ ಹೆಸರಿಗೆ ವರ್ಗಾವಣೆಗೊಂಡಿದ್ದ 7.33 ಎಕರೆ ಜಾಗದಲ್ಲಿ ಆಶ್ರಯ ಮನೆಗಳ ನಿರ್ಮಾಣಕ್ಕೆ ಸರ್ಕಾರ ನಿವೇಶನ ಹಂಚಿಕೆ ಮಾಡಿದೆ.
ದುಪ್ಪಟ್ಟು ಪರಿಹಾರ ತಪ್ಪಿಸುವ ತಂತ್ರವೇ?:
ಆಶ್ರಯ ಮನೆಗಳ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳಲಾಗಿರುವ 7.33 ಎಕರೆ ಜಮೀನು ಖರೀದಿಸುವಾಗಲೂ ಸರ್ಕಾರ ಈ ಮೇಲಿನ ತಂತ್ರವನ್ನೇ ಅನುಸರಿಸಿದ್ದು ಕಂಡು ಬಂದಿದೆ. ಈ ಜಮೀನು ಕೂಡ ದೊಡ್ಡಬೋರಯ್ಯ ಹಾಗೂ ಸಣ್ಣ ಬೋರಯ್ಯ ಅವರಿಗೆ ಸೇರಿದ್ದಾಗಿದೆ. ದೊಡ್ಡ ಬೋರಯ್ಯ ಅವರಿಗೆ ಎಂ.ಬಿ.ಬೋರಯ್ಯ ಮತ್ತು ಓಬಯ್ಯ ಎಂಬ ಮಕ್ಕಳಿದ್ದಾರೆ.
ಮೀಸೆಬೋರಯ್ಯ, ಎಂ.ಬಿ. ಓಬಯ್ಯ, ಎಂ.ಬಿ. ಸಣ್ಣಬೋರಯ್ಯ ಅವರು ಸಣ್ಣ ಬೋರಯ್ಯ ಅವರ ಪುತ್ರರಾಗಿದ್ದಾರೆ.
ಸರ್ಕಾರ ನಯವಾಗಿ ಮಾಡಿದ ವಂಚನೆ ಇವರಿಗೆ ಗೊತ್ತಾಗುವಷ್ಟರಲ್ಲಿ ಪರಿಸ್ಥಿತಿ ಕೈಮೀರಿ ಹೋಗಿತ್ತು. ತಮಗೆ ಮೋಸವಾಗಿದ್ದನ್ನು ಅರಿತ ಅವರೆಲ್ಲರೂ ನ್ಯಾಯಪಡೆಯಲು ಸಾಕಷ್ಟು ಹೋರಾಟ ಮಾಡಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಅಂತಿಮವಾಗಿ ಮಾಧ್ಯಮದವರೆದುರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ರೈತರಿಂದ ಭೂಸ್ವಾಧೀನ ಮಾಡಿ ಕೊಂಡಲ್ಲಿ ಮಾರುಕಟ್ಟೆ ದರಕ್ಕಿಂತ ನಾಲ್ಕು ಪಟ್ಟು ಪರಿಹಾರ ನೀಡಬೇಕಾಗುತ್ತದೆ.
ಆದರೆ ಸರ್ಕಾರ ಇಲ್ಲಿಯೂ ಬುದ್ಧಿವಂತಿಕೆ ಮಾಡಿ ರಿಯಲ್ ಎಸ್ಟೇಟ್ ಉದ್ದಿಮೆ ಮಾದರಿಯಲ್ಲಿ ಕೇವಲ 19,200 ರೂ.
ಗಳ ಮಾರುಕಟ್ಟೆ ದರದಲ್ಲಿ ಜಮೀನು ಖರೀದಿ ಮಾಡಿದೆ. ಇಡೀ ಪ್ರಕರಣದಲ್ಲಿ ಅವ್ಯವಹಾರ, ವಂಚನೆ ನಡೆದಿದೆ ಎಂದು
ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನವಜಾತ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಚರಂಡಿಗೆ ಎಸೆದ ಪಾಪಿಗಳು; ಪೊಲೀಸರಿಂದ ಶೋಧ
49 ಅಭ್ಯರ್ಥಿಗಳಿಂದ ಉಮೇದುವಾರಿಕೆ: ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನ
JDS MP ಪ್ರಜ್ವಲ್ ಎಲ್ಲಿ? ಕುಟುಂಬದವರು ಸಹಿತ ಯಾರಿಗೂ ಗೊತ್ತಿಲ್ಲ: ಜಿ.ಟಿ.ದೇವೇಗೌಡ
ಪರಿಷತ್ ಚುನಾವಣೆ: 3 ಪಕ್ಷಕ್ಕೂ ಬಂಡಾಯ ಬಿಸಿ; ಪಕ್ಷದ ವಿರುದ್ಧವೇ ಸಡ್ಡು ಹೊಡೆದು ಸ್ಪರ್ಧೆ
Attendance ಕೊರತೆ ಇದ್ದರೂ ಎಸೆಸೆಲ್ಸಿ ಪರೀಕ್ಷೆ-2ಕ್ಕೆ ಅವಕಾಶ
MUST WATCH
ಹೊಸ ಸೇರ್ಪಡೆ
ತಮಿಳುನಾಡಿನಲ್ಲಿ ಖಾಸಗಿ ಬಸ್ ಅಪಘಾತ: ನಾಲ್ವರು ಮೃತ್ಯು, 20 ಕ್ಕೂ ಹೆಚ್ಚು ಮಂದಿ ಗಾಯ
27 ವರ್ಷಗಳ ಹಿಂದೆ ನಾಪತ್ತೆಯಾದವ ನೆರೆಮನೆಯ ನೆಲಮಾಳಿಗೆಯಲ್ಲಿ ಪತ್ತೆ!!: ವಿಡಿಯೋ ವೈರಲ್
Manipal: ಕೆಎಂಸಿಯಲ್ಲಿ ನ್ಯೂಟ್ರಿಷನ್ ಸ್ಟೀವರ್ಡ್ಶಿಪ್ ಕಾರ್ಯಕ್ರಮ
Sandalwood: ‘ಇದು ನಮ್ ಶಾಲೆ’ಯ ಹಾಡುಗಳು ಬಂತು
Gadag; ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರದ ವ್ಯವಸ್ಥೆಯೇ ಕಾರಣ: ಬಸವರಾಜ ಬೊಮ್ಮಾಯಿ