ಬಾಹುಬಲಿ ಚಿತ್ರದ ಅನುಷ್ಕಾ ಶೆಟ್ಟಿ ಕೊಲ್ಲೂರು ಭೇಟಿ
Team Udayavani, May 20, 2017, 3:26 PM IST
ಕೊಲ್ಲೂರು: ಬಾಹುಬಲಿ ಚಿತ್ರದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಹಾಗೂ ಜಯ ಕರ್ನಾಟಕದ ಸ್ಥಾಪಕಾಧ್ಯಕ್ಷ ಮುತ್ತಪ್ಪ ರೈ ಅವರು ಶುಕ್ರವಾರ ಸಂಜೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಕುಟುಂಬ ಸಮೇತರಾಗಿ ಆಗಮಿಸಿದ ಅನುಷ್ಕಾ ಶೆಟ್ಟಿ ಹಾಗೂ ಮುತ್ತಪ್ಪ ರೈ ಅವರನ್ನು ಕೊಲ್ಲೂರು ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ ಶೆಟ್ಟಿ, ಸಮಿತಿಯ ಸದಸ್ಯೆ ಜಯಂತಿ ವಿಜಯಕೃಷ್ಣ, ಅರ್ಚಕ ಡಾ| ಕೆ.ಎನ್. ನರಸಿಂಹ ಅಡಿಗ, ಸುಬ್ರಹ್ಮಣ್ಯ ಅಡಿಗ ಮುಂತಾದವರು ಸ್ವಾಗತಿಸಿದರು.