ಬೆಳಗಾವಿಗೆ ಅಂಟಿದ ‘ಕಳಪೆ ಸ್ಮಾರ್ಟ್‌ ಸಿಟಿ’ ಅಪಖ್ಯಾತಿ


Team Udayavani, May 25, 2017, 2:39 AM IST

Belguam-25-5.jpg

ಹೊಸದಿಲ್ಲಿ: ದೇಶದ ಪ್ರಮುಖ ನಗರಗಳಲ್ಲಿ ಜೀವನ ಮಟ್ಟ ಸುಧಾರಿಸುವ ಗುರಿಯೊಂದಿಗೆ ಕೇಂದ್ರ ಸರಕಾರ ಆರಂಭಿಸಿರುವ ‘ಸ್ಮಾರ್ಟ್‌ ಸಿಟಿ’ ಯೋಜನೆಯಡಿ ಆಯ್ಕೆಯಾಗಿರುವ ನಗರಗಳು ನಿಜಕ್ಕೂ ಸ್ಮಾರ್ಟಾಗಿವೆಯಾ? ಇಲ್ಲ ಎನ್ನುತ್ತಿದೆ ಸರಕಾರದ ವರದಿ! ಇದೇ ವರ್ಷ ಜನವರಿ ತಿಂಗಳು ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾದ ದೇಶದ 20 ನಗರಗಳು ಮೂಲ ಸೌಲಭ್ಯ ಅಭಿಧಿವೃದ್ಧಿಯ ಕನಿಷ್ಠ ಗುರಿಯನ್ನೂ ತಲುಪಿಲ್ಲ. ಈ 20 ಹಿಂದುಳಿದ ಸ್ಮಾರ್ಟ್‌ ಸಿಟಿಗಳ ಪಟ್ಟಿಯಲ್ಲಿ ರಾಜ್ಯದ ದಾವಣಗೆರೆ ಹಾಗೂ ಬೆಳಗಾವಿ ನಗರಗಳೂ ಇವೆ. ಅದರಲ್ಲೂ ಬೆಳಗಾವಿ ನಗರ ಪಟ್ಟಿಯಲ್ಲಿ 20ನೇ ರ್‍ಯಾಂಕ್‌ ಪಡೆಯುವ ಮೂಲಕ ಅತ್ಯಂತ ‘ಕಳಪೆ ಸ್ಮಾರ್ಟ್‌ ಸಿಟಿ’ ಎಂಬ ಅಪಖ್ಯಾತಿಗೆ ಗುರಿಯಾಗಿದೆ.

ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಬರುವ ನಗರ ವ್ಯವಹಾರಗಳ ರಾಷ್ಟ್ರೀಯ ಸಂಸ್ಥೆ (ಎನ್‌ಐಯುಎ) ನೀಡಿರುವ ಅಧ್ಯಯನ ವರದಿಯಿಂದ ಈ ಅಂಶ ತಿಳಿದಿದೆ. ಯೋಜನೆಯಡಿ ಆಯ್ಕೆಯಾದ ನಗರಗಳಲ್ಲಿನ ನೈರ್ಮಲ್ಯ, ಮೂಲ ಸೌಲಭ್ಯಗಳು, ಆಡಳಿತ ಸುಧಾರಣೆ ಮತ್ತು ಸಮಾಜ – ಆರ್ಥಿಕ ಸೂಚಕಗಳ ಆಧಾರದಲ್ಲಿ ಅಧ್ಯಯನ ನಡೆಸಲಾಗಿದೆ. ಈ ಪೈಕಿ ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿ ಎಲ್ಲ ವಿಭಾಗಗಳಲ್ಲೂ ಕಳಪೆ ಸಾಧನೆ ತೋರುವ ಮೂಲಕ ಕಡೇ ಸ್ಥಾನದಲ್ಲಿದೆ.

ಸ್ಲಂಗಳೇ ಹೆಚ್ಚು: ದೇಶದ ಎಲ್ಲ ನಗರಗಳಲ್ಲಿ ಸರಾಸರಿ ಶೇ.17.14ರಷ್ಟು ಸ್ಲಂ ನಿವಾಸಿಗಳಿದ್ದರೆ, ಈ 20 ನಗರಗಳ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.18.75 ಜನ ಕೊಳೆಗೇರಿಗಳಲ್ಲಿ ವಾಸವಿದ್ದಾರೆ. ಈ 20 ನಗರಗಳು ಕಳಪೆ ಸ್ಮಾರ್ಟ್‌ ಸಿಟಿಗಳೆನಿಸಿಕೊಳ್ಳಲು ಇದು ಪ್ರಮುಖ ಕಾರಣವಾಗಿದೆ. ಚೆನ್ನೈ, ಇಂದೋರ್‌, ಕಾಕಿನಾಡ ಮತ್ತು ಜಬಲ್ಪುರ ನಗರಗಳಲ್ಲಿ ಅತಿ ಹೆಚ್ಚು ಸ್ಲಂ ನಿವಾಸಿಗಳಿದ್ದಾರೆ. 

ಬಹುತೇಕ ನಗರಗಳಲ್ಲಿ ಮೂಲ ನಾಗರಿಕ ಸೌಲಭ್ಯ ಹೊಂದಿರುವ ಮನೆಗಳ ಸಂಖ್ಯೆ ತೀರಾ ಕಡಿಮೆ ಇರುವುದು ಮತ್ತೂಂದು ಗಮನಾರ್ಹ ಅಂಶ. ಗುವಾಹಟಿಯಲ್ಲಿ ಶೇ.34.6 ರಷ್ಟು ನಗರಗಳು ಮಾತ್ರ ಕೊಳಾಯಿ ಸೌಲಭ್ಯ ಹೊಂದಿದ್ದು, ಸೊಲ್ಹಾಪುರ, ಭುವನೇಶ್ವರ, ಪುಣೆ, ಜಬಲ್ಪುರ ಮತ್ತು ಭೋಪಾಲ್‌ ನಗರಗಳಲ್ಲಿ ಸಮರ್ಪಕ ಶೌಚಾಲಯ ವ್ಯವಸ್ಥೆ ಇಲ್ಲ. ಇನ್ನು ಬೆಳಗಾವಿ, ಭುವನೇಶ್ವರ, ಗುವಾಹಟಿ, ಕಾಕಿನಾಡ, ಕೊಚ್ಚಿ ನಗರಗಳಲ್ಲಿ ಕನಿಷ್ಠ ಒಳಚರಂಡಿ ಸೌಲಭ್ಯವೂ ಇಲ್ಲ. 

‘ಪ್ರಸ್ತುತ ಗುರುತಿಸಿರುವ 20 ನಗರಗಳು ಮೂಲ ಸೌಲಭ್ಯಗಳ ದೃಷ್ಟಿಯಿಂದ ತೀರಾ ಹಿಂದುಳಿದಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಿಂದುಳಿದ ನಗರಗಳ ಬಗ್ಗೆ ಹೆಚ್ಚು ಗಮನಹರಿಸಿ, ಆದ್ಯತೆಯ ಮೇರೆಗೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಿ ಎಂಬ ಉದ್ದೇಶದಿಂದ ಈ ಅಧ್ಯಯನ ನಡೆಸಲಾಗಿದೆ,’ ಎಂದು ಎನ್‌ಐಯುಎ ವರದಿ ಹೇಳಿದೆ. 

ಸ್ಮಾರ್ಟ್‌ ಅಲ್ಲದ 20 ಸಿಟಿಗಳು!
ದಾವಣಗೆರೆ, ಬೆಳಗಾವಿ, ವಿಶಾಖಪಟ್ಟಣ, ಕಾಕಿನಾಡ, ಗುವಾಹಟಿ, ಎನ್‌ಡಿಎಂಸಿ, ಅಹಮದಾಬಾದ್‌, ಸೂರತ್‌, ಕೊಚ್ಚಿ, ಭೂಪಾಲ್‌, ಇಂದೋರ್‌, ಜಬಲ್ಪುರ್‌, ಪುಣೆ, ಸೊಲಾಪುರ್‌, ಭುವನೇಶ್ವರ್‌, ಲೂಧಿಯಾನ, ಜೈಪುರ, ಉದಯ್‌ಪುರ, ಚೆನ್ನೈ ಮತ್ತು ಕೊಯಮತ್ತೂರು (ಯೋಜನೆಯಡಿ ಆಯ್ಕೆಯಾಗಿರುವ ಇತರ 98 ಸಂಭಾವ್ಯ ಸ್ಮಾರ್ಟ್‌ ಸಿಟಿಗಳಿಗೆ ಹೋಲಿಸಿದರೆ ಈ 20 ನಗರಗಳು, ಆಡಳಿತ, ಅಭಿವೃದ್ಧಿ ವಿಷಯದಲ್ಲಿ ತೀರಾ ಹಿಂದುಳಿದಿವೆ).

ಟಾಪ್ ನ್ಯೂಸ್

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.