ಕಲ್ಲುಕೋರೆ, ಆವೆಮಣ್ಣಿನ ಹೊಂಡಗಳಿಂದ ಜೀವ ಬಲಿ: ಇರಲಿ ಎಚ್ಚರ !


Team Udayavani, Jun 1, 2017, 2:03 PM IST

1705kota1e.jpg

ಕೋಟ: ಗಣಿಗಾರಿಕೆಗಾಗಿ ನಿರ್ಮಿಸಿದ ಕಲ್ಲುಕೋರೆ, ಆವೆಮಣ್ಣಿನ ಹೊಂಡಗಳು  ಮಳೆಗಾಲದಲ್ಲಿ  ಮೃತ್ಯುಕೂಪಗಳಂತೆ ಅನೇಕ ಜೀವಗಳನ್ನು ಬಲಿ ಪಡೆದ ಪ್ರಕರಣಗಳು ಜಿಲ್ಲೆಯಲ್ಲಿ ಪ್ರತಿವರ್ಷ ನಡೆಯುತ್ತಿವೆೆ.  ಈ ನಿಟ್ಟಿನಲ್ಲಿ ತಡೆಬೇಲಿ ನಿರ್ಮಾಣ, ಎಚ್ಚರಿಕೆ ಫಲಕ ಅಳವಡಿಕೆ  ಮುಂತಾದ ಕ್ರಮಗಳನ್ನು ಕೈಗೊಂಡರು  ಪ್ರಕರಣಗಳು  ಮತ್ತೆ-ಮತ್ತೆ  ಮರುಕಳಿಸುತ್ತಿವೆ.

ಅತೀ ಹೆಚ್ಚು ಪ್ರಕರಣ
ಕೋಟ ಹೋಬಳಿ  ಸುತ್ತಮುತ್ತಲಿನ  ಸಾೖಬ್ರಕಟ್ಟೆ, ಅಲ್ತಾರು, ಶಿರೂರು ಮೂರುಕೈ,  ನಂಚಾರು, ಬೇಳೂರು, ಮೊಗೆಬೆಟ್ಟು, ಕೆದೂರು ಮುಂತಾದ ಪ್ರದೇಶಗಳು ಗಣಿಗಾರಿಕೆಯ ಸ್ವರ್ಗ  ಎಂದು ಬಿಂಬಿತವಾಗಿವೆ ಹಾಗೂ ಈ ಪ್ರದೇಶದಲ್ಲಿ  ಪರವಾನಿಗೆ ರಹಿತವಾಗಿ ರಾಯಧನ ಪಾವತಿಸದೆ ಹಲವಾರು ಗಣಿಗಾರಿಕೆಗಳು ನಡೆಯುತ್ತವೆ.  ಇಲ್ಲಿ ಕಳೆದ  ಮೂರು-ನಾಲ್ಕು ವರ್ಷಗಳಿಂದ ಹತ್ತಕ್ಕೂ ಹೆಚ್ಚು ಅವಘಡಗಳು  ಸಂಭವಿಸಿದ್ದು,  25ಕ್ಕೂ  ಹೆಚ್ಚು   ಮುಗ್ಧ ಜೀವಗಳು ಬಲಿಯಾಗಿವೆ. ಅಕ್ರಮ  ಗಣಿಗಾರಿಕೆಯ ಕುರಿತು ಮಾಹಿತಿ ಇದ್ದರು  ಸಂಬಂಧಪಟ್ಟ ಅಧಿಕಾರಿಗಳು  ಆರಂಭದಲ್ಲೇ ನಿಯಂತ್ರಿಸದಿರುವುದರ  ಫಲವಾಗಿ ಇಂತಹ ಪ್ರಕರಣಗಳು  ಹೆಚ್ಚು-ಹೆಚ್ಚು ನಡೆಯುತ್ತಿವೆ.

ಕೆಲವು ಕಡೆಗಳಲ್ಲಿ  ಆವೆ ಮಣ್ಣಿನ ಹೊಂಡ ಗಳು ದೊಡ್ಡ ಸಂಖ್ಯೆಯಲ್ಲಿದ್ದು  ಇವುಗಳ ಜಮೀನಿನ ಮಧ್ಯದಲ್ಲಿರುವುದರಿಂದ  ಹೆಚ್ಚು ಅಪಾಯಕಾರಿಯಾಗಿ ರುತ್ತವೆ.

ಸರಕಾರದಿಂದ ಕ್ರಮ
ಪರವಾನಿಗೆ ಇರುವ ಗಣಿಗಾರಿಕೆಗಳ ಕುರಿತು ಹೆಚ್ಚಿನ ಕಡೆಗಳಲ್ಲಿ  ಈಗಾಗಲೇ  ಎಚ್ಚರಿಕೆ  ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.  ಆದರೆ ಪರವಾನಿಗೆ ರಹಿತವಾಗಿ  ನಡೆಯುವ ಗಣಿಗಾರಿಕೆಗಳ ಸಂಖ್ಯೆ   ಅಧಿಕವಾಗಿರುವುದು ರಕ್ಷಣಾಕ್ರಮ ಸಮಸ್ಯೆಯಾಗಿದೆ. ಪ್ರಸ್ತುತ ಕೆ.ಆರ್‌.ಐ.ಡಿ.ಎಲ್‌.  ಮೂಲಕ ಇಂತಹ ಹೊಂಡಗಳ ಸುತ್ತ ಬೇಲಿ ನಿರ್ಮಿಸಲಾಗುತ್ತದೆ.

ಹೆತ್ತವರೇ ಎಚ್ಚರ
ಹೊಂಡಗಳಿಗೆ ಬಲಿಯಾಗುವುದರಲ್ಲಿ  ಚಿಕ್ಕಮಕ್ಕಳ  ಸಂಖ್ಯೆಯೇ  ಅಧಿಕ. ಹೀಗಾಗಿ ಇಂತಹ  ಮಕ್ಕಳಿಗೆ  ತಿಳಿಹೇಳುವ ಕರ್ತವ್ಯ ಹೆತ್ತವರು  ಮಾಡಬೇಕು ಹಾಗೂ ರಜಾ  ದಿನಗಳಲ್ಲಿ  ಅವರ ಚಟುವಟಿಕೆಗಳನ್ನು ಗಮನಿಸಬೇಕು. ಬಟ್ಟೆ ಒಗೆಯಲು ತೆರಳಿದ ಸಂದರ್ಭದಲ್ಲಿ ಕೆಲವೊಂದು ದುರಂತಗಳು ನಡೆಯುತ್ತಿದ್ದು,  ಬಟ್ಟೆ ಒಗೆಯಲು  ತೆರಳುವಾಗ ಚಿಕ್ಕ ಮಕ್ಕಳನ್ನು ಜತೆಯಲ್ಲಿ ಕರೆದೊಯ್ಯದಿರುವುದೇ  ಒಳಿತು ಹಾಗೂ ಇಂತಹ ದುರಂತಗಳ ಬಗ್ಗೆ  ಮಕ್ಕಳಿಗೆ ತಿಳಿಹೇಳಬೇಕು. ಶಾಲೆಗಳಲ್ಲಿ ಶಿಕ್ಷಕರೂ ಕೂಡ ಈ ಕುರಿತು  ತಿಳಿಸಬೇಕು.  ಸಾರ್ವಜನಿಕರಲ್ಲಿ ಜಾಗೃತಿ  ಮೂಡದಿದ್ದರೆ  ಸೂಚನಾಫಲಕ, ರಕ್ಷಣಾ ಬೇಲಿ ಯಾವುದೂ ಪ್ರಯೋಜನವಿಲ್ಲ ಎನ್ನುವುದು ಸಾರ್ವಜನಿಕ ಅಭಿಪ್ರಾಯವಾಗಿದೆ.

ದೂರು ನೀಡಲು
ಜಿಲ್ಲೆಯಲ್ಲಿನ ಅಪಾಯಕಾರಿ ಬಾವಿಗಳು, ಅನಧಿಕೃತ ಕಲ್ಲುಕೋರೆ, ಗಣಿಹೊಂಡಗಳ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆಯಲು ಜಿಲ್ಲಾಡಳಿತದಿಂದ ಕಂಟ್ರೋಲ್‌ ರೂಮ್‌ ತೆರೆಯಲಾಗಿದ್ದು, ದೂರವಾಣಿ  ಸಂಖ್ಯೆ  0820-2574802, ಅಥವಾ 1077 ಹಾಗೂ   www.facebook.com/dcudupi, ಅಥವಾ ಟ್ವಿಟರ್‌ನಲ್ಲಿ  @dcudupi  ಸಂಪರ್ಕಿಸಿ ಸಾರ್ವಜನಿಕರು ದೂರು ನೀಡಬಹುದಾಗಿದೆ.

ಗಣಿಗಾರಿಕೆ ಹೊಂಡಗಳಲ್ಲಿ ಸಂಭವಿಸುವ ದುರಂತದ ಕುರಿತು  ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ.  ಪರವಾನಿಗೆ ಇರುವ ಹಾಗೂ ಪಟ್ಟಾ ಸ್ಥಳಗಳಲ್ಲಿ ನಡೆಯುವ ಗಣಿಗಾರಿಕೆಗಳ ಸುತ್ತ ಜಾಗದ ಮಾಲಕರು ಅಥವಾ  ಪರವಾನಿಗೆದಾರರು ಜಾಗೃತೆ ವಹಿಸುವಂತೆ ನೋಟೀಸು ನೀಡಲಾಗಿದೆ.  ಸರಕಾರಿ, ಕಮ್ಕಿ  ಇನ್ನಿತರರ ಜಾಗದಲ್ಲಿರುವ   ಗಣಿ ಹೊಂಡಗಳ ಕುರಿತು ಕೆ.ಆರ್‌.ಐ.ಡಿ.ಎಲ್‌. ಕ್ರಮಕೈಗೊಳ್ಳಲಿದೆ.  ಇಲಾಖೆ  ವತಿಯಿಂದ ಈಗಾಗಲೇ  ಅಪಾಯಕಾರಿ  ಗಣಿಗಾರಿಕೆ ಹೊಂಡಗಳ ಕುರಿತು ಕೆ.ಆರ್‌.ಐ.ಡಿ.ಎಲ್‌. ಮಾಹಿತಿ ನೀಡಿದ್ದೇವೆ.   ಇನ್ನೂ ಕೂಡ  ಇಂತಹ ಅಪಾಯಕಾರಿ ಹೊಂಡಗಳಿದ್ದಲ್ಲಿ  ಮಾಹಿತಿ ನೀಡಿದಲ್ಲಿ  ಸೂಕ್ತ ಕ್ರಮಕೈಗೊಳ್ಳಲಾಗುವುದು.
– ಮಹೇಶ,   ಗಣಿ ಮತ್ತು ಭೂ ವಿಜ್ಞಾನಿಗಳು ಉಡುಪಿ

– ರಾಜೇಶ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ

Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ

Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು

Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು

MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

ಬಿಗ್‌ಬಾಸ್‌ ವಿಜೇತ ಎಲ್ವಿಶ್‌ ಯಾದವ್‌ ವಿರುದ್ಧ ಅಕ್ರಮ ವರ್ಗಾವಣೆ ಕೇಸ್‌ ದಾಖಲಿಸಿದ ಇ.ಡಿ

ಬಿಗ್‌ಬಾಸ್‌ ವಿಜೇತ ಎಲ್ವಿಶ್‌ ಯಾದವ್‌ ವಿರುದ್ಧ ಅಕ್ರಮ ವರ್ಗಾವಣೆ ಕೇಸ್‌ ದಾಖಲಿಸಿದ ಇ.ಡಿ

nosthush-kenjige

T20 World Cup; ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್‌ ಕೆಂಜಿಗೆಗೆ ಸ್ಥಾನ

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

Prajwal Revanna Case; ರೆಕಾರ್ಡ್ ಸ್ಪೀಡ್‌ನಲ್ಲಿ ತನಿಖೆ ನಡೆಸಲಿ: ಅಣ್ಣಾಮಲೈ

Prajwal Revanna Case; ರೆಕಾರ್ಡ್ ಸ್ಪೀಡ್‌ನಲ್ಲಿ ತನಿಖೆ ನಡೆಸಲಿ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಂಗಳೂರು: 4 ತಿಂಗಳಲ್ಲಿ ಮೂರ್ತಿ ಸ್ಥಾಪನೆ ಪೂರ್ಣಗೊಳಿಸಲು ಆದೇಶ

ಬೆಂಗಳೂರು: 4 ತಿಂಗಳಲ್ಲಿ ಮೂರ್ತಿ ಸ್ಥಾಪನೆ ಪೂರ್ಣಗೊಳಿಸಲು ಆದೇಶ

Udupi ಇನ್ನೂ ನಡೆಯದ ಟೆಂಡರ್‌ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ

Udupi ಇನ್ನೂ ನಡೆಯದ ಟೆಂಡರ್‌ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ

Road Mishap ಮಣಿಪಾಲ: ಕಾರು ಢಿಕ್ಕಿಯಾಗಿ ಪಾದಚಾರಿ ಸಾವು

Road Mishap ಮಣಿಪಾಲ: ಕಾರು ಢಿಕ್ಕಿಯಾಗಿ ಪಾದಚಾರಿ ಸಾವು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Theme Park Karkala ಅವಶೇಷ‌ ತೆರವಿಗೆ ಕೋರ್ಟ್‌ ಆದೇಶ; ಜಿಲ್ಲಾಧಿಕಾರಿ ತಡೆ!

Theme Park Karkala ಅವಶೇಷ‌ ತೆರವಿಗೆ ಕೋರ್ಟ್‌ ಆದೇಶ; ಜಿಲ್ಲಾಧಿಕಾರಿ ತಡೆ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ

Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ

Desi Swara: ವಸಂತನಾಗಮನ- ಇಂಗ್ಲೆಂಡಿನಲ್ಲಿ ಹರುಷದಿ ಸಂಭ್ರಮಿಸಿದ ಕನ್ನಡ ಜನ

Desi Swara: ವಸಂತನಾಗಮನ- ಇಂಗ್ಲೆಂಡಿನಲ್ಲಿ ಹರುಷದಿ ಸಂಭ್ರಮಿಸಿದ ಕನ್ನಡ ಜನ

Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು

Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು

MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

ಅರವಿಂದ್‌ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು? ಸುಪ್ರೀಂ ಸುಳಿವು

ಅರವಿಂದ್‌ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು? ಸುಪ್ರೀಂ ಸುಳಿವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.