ವಿಶ್ವವಿದ್ಯಾನಿಲಯದಲ್ಲಿ ಯಕ್ಷಗಾನ ಶಿಕ್ಷಣ
Team Udayavani, Jun 1, 2017, 12:58 PM IST
ಉಡುಪಿ: ಈ ಶೈಕ್ಷಣಿಕ ವರ್ಷದಿಂದ ಹಾವೇರಿಯ ಜನಪದ ವಿಶ್ವವಿದ್ಯಾನಿಲಯದಲ್ಲಿ ಯಕ್ಷಗಾನ ಬಯಲಾಟ ಶಿಕ್ಷಣ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬುಧವಾರ ನಡೆದ ಯಕ್ಷಗಾನ ಕಲಾವಿದರ ಸಮಾವೇಶದಲ್ಲಿ ಅವರು ಮಾತನಾಡಿದರು.
ವಿ.ವಿ.ಯಲ್ಲಿ 3 ವರ್ಷದ ಯಕ್ಷಗಾನ ಡಿಪ್ಲೊಮಾ ತರಗತಿ ನಡೆಯಲಿದೆ. ಹಿಂದೆ ಆಸಕ್ತರು ಯಕ್ಷಗಾನ ಮೇಳದವರೊಂದಿಗೆ ಸೇರಿಕೊಂಡು ಕಲಿತು ಕಲಾವಿದರಾಗಿ ರೂಪುಗೊಳ್ಳುತ್ತಿದ್ದರು. ಆದರೆ ಇಂದಿನ ಯಕ್ಷ ಶಿಕ್ಷಣದ ಅಗತ್ಯತೆ ಮನಗಂಡು ಯಕ್ಷಗಾನ ಶಿಕ್ಷಣಕ್ಕೆ ಒತ್ತು ಕೊಡಲಾಗಿದೆ. ಈ ಮೂಲಕ ಯಕ್ಷಗಾನ ಕಲೆಗೆ ಮತ್ತಷ್ಟು ಚೈತನ್ಯ ತುಂಬುವ ಕೆಲಸ ಸರಕಾರದಿಂದ ಆಗುತ್ತಿದೆ ಎಂದರು.
ಯಕ್ಷಗಾನದ ಉಗಮ ಸ್ಥಾನ ಉಡುಪಿ ಎನ್ನುವ ವಾದವಿದೆ. ಯಕ್ಷಗಾನ ಕಲಾರಂಗ ಯಕ್ಷ ಕಲಾವಿದರಿಗಾಗಿ ಮಾಡುತ್ತಿರುವ ಕಾರ್ಯಗಳು ಅದಕ್ಕೆ ಪೂರಕವಾಗಿ ಕಂಡುಬರುತ್ತದೆ. ಕಲಾದೇವಿಯ ಅನುಗ್ರಹ ಕಲಾರಂಗಕ್ಕಿದೆ ಎಂದು ಕಲಾರಂಗದ ಕಾರ್ಯವನ್ನು ಸಚಿವರು ಶ್ಲಾ ಸಿದರು.
ಕಲಾಯೋಗಿಗಳು: ಪೇಜಾವರ ಶ್ರೀ
ಯಕ್ಷಗಾನ ಕಲಾವಿದರು ಕಷ್ಟಪಟ್ಟು ಯಕ್ಷಗಾನದ ಮೂಲಕ ಜನರಲ್ಲಿ ಆನಂದ ಉಂಟು ಮಾಡುತ್ತಾರೆ. ಯಕ್ಷ ಕಲಾವಿದರು ಕಲಾಯೋಗಿಗಳು. ಯಕ್ಷಗಾನಕ್ಕೆ ಉತ್ತಮ ಭವಿಷ್ಯವಿದೆ ಎಂದು ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಪಡುಬಿದ್ರಿ ಯುಪಿಸಿಎಲ್ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಬಿ. ಕಿಶೋರ್ ಆಳ್ವ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಕೋಟ ಗೀತಾನಂದ ಫೌಂಡೇಶನ್ನ ಆನಂದ ಸಿ. ಕುಂದರ್, ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಪಿ. ಕಿಶನ್ ಹೆಗ್ಡೆ, ಮಂಟಪ ಪ್ರಭಾಕರ ಉಪಾಧ್ಯ ಬೆಂಗಳೂರು, ಡಾ| ಎಂ. ಪ್ರಭಾಕರ ಜೋಶಿ, ಧಾರವಾಡ ಆಕಾಶವಾಣಿಯ ದಿವಾಕರ ಹೆಗಡೆ, ಸಸಿಹಿತ್ಲು ಮೇಳದ ಸಂಚಾಲಕ ಬಿ. ದಯಾನಂದ, ಹಿರಿಯ ಕಲಾವಿದ ಗೋವಿಂದ ಭಟ್, ಕಲಾರಂಗದ ಎಂ. ಗಂಗಾಧರ ರಾವ್, ಎಸ್.ವಿ. ಭಟ್ ಮೊದಲಾದವರು ಉಪಸ್ಥಿತರಿದ್ದರು.
ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ದಿವಾಕರ ಹೆಗಡೆ ಅವರು ಬರೆದ “ಮೋಹಮೇನಕೆ’ ಪ್ರಸಂಗಕೃತಿಯನ್ನು ಪೇಜಾವರ ಶ್ರೀಪಾದರು ಅನಾವರಣಗೊಳಿಸಿದರು. ಯಕ್ಷನಿಧಿ ಸದಸ್ಯರಿಗೆ ವಿಮಾ ಯೋಜನೆ, ಗೃಹನಿರ್ಮಾಣ ಹೀಗೆ ವಿವಿಧ ಪ್ರೋತ್ಸಾಹ ಧನ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ