ಕದನ ವಿರಾಮ ಉಲ್ಲಂಘನೆ; ಭಾರತೀಯ ಸೇನಾಪಡೆ ದಾಳಿಗೆ 5 ಪಾಕ್ ಸೈನಿಕರು ಬಲಿ
Team Udayavani, Jun 1, 2017, 7:10 PM IST
ಶ್ರೀನಗರ್:ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ಹಾಗೂ ಪೂಂಚ್ ನ ಕೃಷ್ಣ ಘಾಟಿ ಸೆಕ್ಟರ್ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ್ದ ಪಾಕಿಸ್ತಾನಿ ಪಡೆಯ ವಿರುದ್ಧ ಗುರುವಾರ ಭಾರತೀಯ ಸೇನಾ ಪಡೆ ನಡೆಸಿದ್ದ ಪ್ರತಿ ದಾಳಿಗೆ 5 ಪಾಕ್ ಸೈನಿಕರು ಬಲಿಯಾಗಿದ್ದಾರೆ.
ಭಾರತದ ಗಡಿಯತ್ತ ಭಾರೀ ಪ್ರಮಾಣದ ಗುಂಡಿನ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಭಾರತೀಯ ಸೇನಾ ಪಡೆ 5 ಪಾಕಿಸ್ತಾನಿ ಸೈನಿಕರನ್ನು ಹೊಡೆದುರುಳಿಸಿದ್ದು, ಆರು ಮಂದಿ ಸೈನಿಕರು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.
ಗಡಿಭಾಗದಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನಿ ಪಡೆ ಮೋರ್ಟಾರ್ಸ್ ದಾಳಿ ನಡೆಸಿತ್ತು. ಮೇ 26ರಂದು ಕಾಶ್ಮೀರದ ಉರಿ ಸೆಕ್ಟರ್ ನ ಗಡಿಭಾಗದಲ್ಲಿ ಪಾಕ್ ಭದ್ರತಾ ಪಡೆಯ ನೆರವಿನಿಂದ ನುಸುಳಲು ಯತ್ನಿಸಿದ್ದ ಇಬ್ಬರನ್ನು ಭಾರತೀಯ ಸೇನಾ ಪಡೆ ಹತ್ಯೆಗೈದಿತ್ತು.