ದೇವರನಾಡಿನ ರೋಡಿಗೆ ಗಾಜಾ ಸ್ಟ್ರೀಟ್‌ ನಾಮಕರಣ!


Team Udayavani, Jun 20, 2017, 10:15 AM IST

gaza.jpg

ತಿರುವನಂತಪುರ: ಕಾಸರಗೋಡು ಪುರಸಭೆಯ ತುರುತಿ ವಾರ್ಡಿನಲ್ಲಿರುವ ರಸ್ತೆಯೊಂದು ಈಗ ದೇಶದ ಗಮನ ಸೆಳೆದಿದೆ. ಇದಕ್ಕೆ ಕಾರಣ, ಈ ರಸ್ತೆಗೆ ಇತ್ತೀಚೆಗೆ “ಗಾಜಾ’ ಎಂದು ಮರು ನಾಮಕರಣ ಮಾಡಿರುವುದು. ಗಾಜಾ ಇಸ್ರೇಲ್‌ ಮತ್ತು ಈಜಿಪ್ಟ್ ನಡುವಿರುವ ಪ್ಯಾಲೆಸ್ತೀನ್‌ ಆಡಳಿತಕ್ಕೊಳಪಟ್ಟ ನಗರವಾಗಿದ್ದು, ಮೂರು ದೇಶಗಳ ನಡುವಿನ ವಿವಾದದ ಕೇಂದ್ರವಾಗಿದೆ. ಹೀಗಾಗಿ ಈ ಹೆಸರು ಎನ್‌ಐಎ ಮತ್ತು ಗುಪ್ತಚರ ಪಡೆಯ ಗಮನ ಸೆಳೆದಿದೆ.

ಐಸಿಸ್‌ ಉಗ್ರ ಸಂಘಟನೆಗೆ ಸೇರಿದ 21 ಮಂದಿಯ ಊರಾಗಿರುವ ಪಡನ್ನದ ಪಕ್ಕದಲ್ಲೇ ಇದೆ ತುರುತಿ. ಹೀಗಾಗಿ ರಸ್ತೆಯ ಹೆಸರು ಬದಲಾವಣೆಯ ಹಿಂದೆ ಮತಾಂಧ ಶಕ್ತಿಗಳ ಪಿತೂರಿ ಇರುವ ಅನುಮಾನ ಹುಟ್ಟಿಕೊಂಡಿದೆ. ತುರುತಿ ಜುಮಾ ಮಸೀದಿಗೆ ಹೋಗುವ ರಸ್ತೆಗೆ ಕಳೆದ ತಿಂಗಳು ಗಾಜಾ ಎಂದು ಹೆಸರಿಡಲಾಗಿದೆ ಹಾಗೂ ಜಿಲ್ಲಾ ಪಂಚಾಯತ್‌ ಅಧ್ಯಕ್ಷ
ಎಜಿಸಿ ಬಶೀರ್‌ ಅವರೇ ನಾಮಫ‌ಲಕವನ್ನು ಅನಾವರಣಗೊಳಿಸಿದ್ದಾರೆ ಎನ್ನುತ್ತಿವೆ ವರದಿಗಳು. ರಸ್ತೆ ನಾಮಫ‌ಲಕವನ್ನು ತಾವೇ ಅನಾವರಣ ಗೊಳಿಸಿರುವುದನ್ನು ಸ್ವತಃ ಬಶೀರ್‌ ಒಪ್ಪಿಕೊಂಡಿದ್ದಾರೆ.

ನಿಜವಾಗಿಯೂ, ನಾನು ಅನಾವರಣಗೊಳಿಸುವ ಅತಿಥಿಯಾಗಿರಲಿಲ್ಲ. ಆದರೆ ಕೊನೇ ಕ್ಷಣದಲ್ಲಿ ನನಗೆ ಆಹ್ವಾನ ಬಂದ ಕಾರಣ ಹೋಗಿದ್ದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಆಕ್ಷೇಪ: ರಸ್ತೆಗೆ ಗಾಜಾ ಎಂದು ಹೆಸರಿಟ್ಟಿರುವುದನ್ನು ಬಲವಾಗಿ ಆಕ್ಷೇಪಿಸಿರುವ ಬಿಜೆಪಿ, ಕಾಸರಗೋಡಿನ ವಿವಿಧ ಪ್ರದೇಶಗಳ ಹೆಸರನ್ನು ಬದಲಾಯಿಸುವ ಉದ್ದೇಶ ಪೂರ್ವಕ ಪ್ರಯತ್ನಗಳಾಗುತ್ತಿವೆ ಎಂದು ಆರೋಪಿಸಿದೆ.
ಪುರಸಭೆಯಲ್ಲಿ ಚರ್ಚೆಯಾಗಿ ಅಂಗೀಕಾರಗೊಳ್ಳದೆ ರಸ್ತೆ ಅಥವಾ ಬಡಾವಣೆಯ ಹೆಸರು ಬದಲಾಯಿಸುವಂತಿಲ್ಲ.
ಆದರೆ ಗಾಜಾ ಹೆಸರಿನ ಕುರಿತು ಯಾವುದೇ ಚರ್ಚೆಯಾಗಿಲ್ಲ. ಕೆಲವೊಮ್ಮೆ ಪುರಸಭೆಯಲ್ಲಿ ತಿರಸ್ಕೃತವಾಗುವ ಭೀತಿಯಲ್ಲಿ ವಿವಾದಾತ್ಮಕ ಹೆಸರುಗಳ ಪ್ರಸ್ತಾವ ಮಂಡಿಸದೆ ಹಾಗೆಯೇ ಇಟ್ಟು ಬಿಡುತ್ತಾರೆ ಎಂದು ಪುರಸಭೆಯ ವಿಪಕ್ಷ ನಾಯಕ ಪಿ. ರಮೇಶ್‌ ಹೇಳಿದ್ದಾರೆ. ಆದರೆ, ಮುಸ್ಲಿಂ ಲೀಗ್‌ ನಾಯಕರು, “ಇದು ಸ್ಥಳೀಯ ಯುವಕರು ಇಟ್ಟಿರುವ ಹೆಸರು. ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ’ ಎನ್ನುವ ಮೂಲಕ ವಿವಾದದಿಂದ ಕೈತೊಳೆಯುವ ಪ್ರಯತ್ನ
ಮಾಡಿದ್ದಾರೆ.

ಐಸಿಸ್‌ ಉಗ್ರ ಸಂಘಟನೆಯು ಕಾಸರಗೋಡಿನಲ್ಲಿ ತಳವೂರುವ ಪ್ರಯತ್ನದಲ್ಲಿದ್ದು, ಮತೀಯ ಸೌಹಾರ್ದ ಕದಡುತ್ತಿದೆ. ಮತೀಯವಾದಿಗಳು ಸಮಾಜದಲ್ಲಿ ಒಡಕುಂಟು ಮಾಡುವ ಪ್ರಯತ್ನದಲ್ಲಿದ್ದಾರೆ. ಇದೇ ವೇಳೆ, ಕಾಸರಗೋಡಿನ ಪೊಲೀಸ್‌ ಅಧಿಕಾರಿಯೊಬ್ಬರು ಗಾಜಾ ಹೆಸರು ನಮ್ಮ ಗಮನಕ್ಕೆ ಬರದಿದ್ದರೂ ಕೇಂದ್ರೀಯ ಪಡೆಗಳು ಪತ್ತೆ ಹಚ್ಚಿವೆ ಎಂದಿದ್ದಾರೆ.

ಎಲ್ಲಿದೆ ತುರುತಿ?
ಕಾಸರಗೋಡು ನಗರ ಕೇಂದ್ರದಿಂದ ಸುಮಾರು 2.5 ಕಿ. ಮೀ. ದೂರದಲ್ಲಿದೆ ತುರುತಿ ವಾರ್ಡ್‌. ಅಣಂಗೂರಿನಿಂದ
ಬಲಕ್ಕೆ ತಿರುಗಿ ಹೋಗಬೇಕು.

ಟಾಪ್ ನ್ಯೂಸ್

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

“ಡಿಕೆಶಿಗೆ ಸಹೋದರನ ಸೋಲಿನ ಕನಸು ಬಿದ್ದಿದೆ’: ಆರ್‌. ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.