40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ, ನನ್ನ ಮಕ್ಳು MLA ಆಗಿದ್ದಾರಾ?
Team Udayavani, Jun 24, 2017, 3:10 PM IST
ಮೈಸೂರು: ನಾನು 40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ, ನನ್ನ ಮಕ್ಕಳು ಎಂಎಲ್ಎ ಆಗಿದ್ದಾರಾ ? ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಕೇಳಿದ ಪ್ರಶ್ನೆ .
ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಸಿದ್ದರಾಮಯ್ಯ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ ಅವರು ಉತ್ತರ ನೀಡಿದರು.
ಶೀಘ್ರದಲ್ಲೇ ಸಂಪುಟ ವಿಸ್ತರಣೆ ಮಾಡುವುದಾಗಿ ತಿಳಿಸಿದ ಸಿಎಂ ಎಲ್ಲವನ್ನೂ ನಿಮ್ಮ ಬಳಿ ಹೇಳುವುದಕ್ಕೆ ಆಗುವುದಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಡಾ.ಜಿ. ಪರಮೇಶ್ವರ್ ಅವರು ಗೃಹ ಸಚಿವ ಖಾತೆಗೆ ನೀಡಿದ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಬಳಿ ಕಳುಹಿಸಿದ್ದು ಶೀಘ್ರದಲ್ಲೇ ಅಂಗೀಕಾರವಾಗಲಿದೆ ಎಂದರು.
ಸಾಲ ಮನ್ನಾ ಅಧಿಕೃತ ಆದೇಶ
ಸಹಕಾರಿ ಬ್ಯಾಂಕ್ಗಳಲ್ಲಿನ ರೈತರ ಸಾಲ ಮನ್ನಾ ಅಧಿಕೃತ ಆದೇಶವನ್ನು ಸಿಎಂ ಸಿದ್ಧರಾಮಯ್ಯ 3 ದಿನಗಳ ಬಳಿಕ ಶನಿವಾರ ಹೊರಡಿಸಿದ್ದಾರೆ. ಜೂನ್ 21 ರಂದು ವಿಧಾನಸಭೆಯಲ್ಲಿ ರೈತರ 50 ಸಾವಿರದ ವರೆಗಿನ ಸಾಲ ಮನ್ನಾ ಘೋಷಿಸಿದ್ದರು. ಜೂನ್ 22 ರಂದು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿದ್ದರು.