ಮೂರನೇ ಏಕದಿನ: ಭಾರತಕ್ಕೆ 93 ರನ್ ಜಯ
Team Udayavani, Jul 2, 2017, 3:45 AM IST
ಆಂಟಿಗಾ: ಆಲ್ರೌಂಡ್ ಪ್ರದರ್ಶನ ನೀಡಿದ ಭಾರತವು ಶುಕ್ರವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆತಿಥೇಯ ವೆಸ್ಟ್ಇಂಡೀಸ್ ತಂಡವನ್ನು 93 ರನ್ನುಗಳಿಂದ ಸೋಲಿಸಿದೆ. ಈ ಗೆಲುವಿನಿಂದ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಸರಣಿಯ ಮೊದಲ ಪಂದ್ಯ ಭಾರೀ ಮಳೆಯಿಂದ ರದ್ದುಗೊಂಡಿತ್ತು.
ಇತ್ತೀಚೆಗಿನ ದಿನಗಳಲ್ಲಿ ಧೋನಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವುದು ಅಪರೂಪ. ಆದರೆ ಮೂರನೇ ಪಂದ್ಯದಲ್ಲಿ ಆಕರ್ಷಕವಾಗಿ ಆಡಿದ ಧೋನಿ ಅಜೇಯ 78 ರನ್ ಸಿಡಿಸಿದರಲ್ಲದೇ ಮುರಿಯದ 5ನೇ ವಿಕೆಟಿಗೆ ಕೇದಾರ್ ಜಾಧವ್ ಜತೆಗೆ 81 ರನ್ ಪೇರಿಸಿದರು. ಎಸೆತಕ್ಕೊಂದರಂತೆ ರನ್ ಗಳಿಸಿದ ಅವರು 4 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದರು. ಇದರಿಂದಾಗಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 5 ವಿಕೆಟಿಗೆ 251 ರನ್ನುಗಳ ಉತ್ತಮ ಮೊತ್ತ ಪೇರಿಸಿತು.
ಭಾರತೀಯ ಬೌಲರ್ಗಳು ಮತ್ತೆ ಬಿಗು ದಾಳಿ ಸಂಘಟಿಸಿದ್ದರಿಂದ ವೆಸ್ಟ್ಇಂಡೀಸ್ ಒತ್ತಡಕ್ಕೆ ಸಿಲುಕುವಂತಾಯಿತು. ಜಾಸನ್ ಮೊಹಮ್ಮದ್ ಮತ್ತು ರೋವ¾ನ್ ಪೊವೆಲ್ ಹೊರತುಪಡಿಸಿ ಉಳಿದ ಯಾವುದೇ ಆಟಗಾರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ವಿಫಲರಾದರು. ಹಾಗಾಗಿ ಆತಿಥೇಯ ತಂಡ 38.1 ಓವರ್ಗಳಲ್ಲಿ 158 ರನ್ನಿಗೆ ಆಲೌಟಾಯಿತು. ಮೊಹಮ್ಮದ್ 61 ಎಸೆತಗಳಿಂದ 40 ರನ್ ಹೊಡೆದರೆ ಪೊವೆಲ್ 43 ಎಸೆತಗಳಿಂದ 30 ರನ್ ಗಳಿಸಿದರು.
ದ್ವಿತೀಯ ಏಕದಿನ ಪಂದ್ಯದಲ್ಲಿ ಮೂರು ವಿಕೆಟ್ ಕಿತ್ತಿದ್ದ ಕುಲದೀಪ್ ಯಾದವ್ ಮತ್ತೆ ಮಿಂಚಿನಾಟ ಪ್ರದರ್ಶಿಸಿ 41 ರನ್ನಿಗೆ 3 ವಿಕೆಟ್ ಪಡೆದರು. ಅಶ್ವಿನ್ 28 ರನ್ನಿಗೆ 3 ಮತ್ತು ಹಾರ್ದಿಕ್ ಪಾಂಡ್ಯ 32 ರನ್ನಿಗೆ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರು: ಭಾರತ 50 ಓವರ್ಗಳಲ್ಲಿ 5 ವಿಕೆಟಿಗೆ 251 (ಅಜಿಂಕ್ಯ ರಹಾನೆ 72, ಯುವರಾಜ್ 39, ಧೋನಿ 78 ಔಟಾಗದೆ, ಕೇದಾರ್ ಜಾಧವ್ 40 ಔಟಾಗದೆ, ಕಮಿನ್ಸ್ 56ಕ್ಕೆ 2); ವೆಸ್ಟ್ಇಂಡೀಸ್ 38.1 ಓವರ್ಗಳಲ್ಲಿ ಆಲೌಟ್ 158 (ಶೈ ಹೋಪ್ 24, ಜಾಸನ್ ಮೊಹಮ್ಮದ್ 40, ರೋವ¾ನ್ ಪೊವೆಲ್ 30, ಹಾರ್ದಿಕ್ ಪಾಂಡ್ಯ 32ಕ್ಕೆ 2, ಕುಲದೀಪ್ ಯಾದವ್ 41ಕ್ಕೆ 3, ಆರ್. ಅಶ್ವಿನ್ 28ಕ್ಕೆ 3). ಪಂದ್ಯಶ್ರೇಷ್ಠ: ಎಂಎಸ್ ಧೋನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಗುಜರಾತ್ ವಿರುದ್ಧ ಭರ್ಜರಿ ಜಯ: ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತ
MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?
T20 World Cup; ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್ ಕೆಂಜಿಗೆಗೆ ಸ್ಥಾನ
IPL;ಇಂದು ಆರ್ಸಿಬಿ ಎದುರಾಳಿ ಗುಜರಾತ್ ಟೈಟಾನ್ಸ್:ಪ್ಲೇಆಫ್ ಸಾಧ್ಯತೆಗೆ ಗೆಲುವು ಅನಿವಾರ್ಯ
England; 20 ವರ್ಷದ ಕ್ರಿಕೆಟಿಗ ನಿಗೂಢ ಸಾವು!
MUST WATCH
ಹೊಸ ಸೇರ್ಪಡೆ
IPL; ಗುಜರಾತ್ ವಿರುದ್ಧ ಭರ್ಜರಿ ಜಯ: ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತ
Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು
H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ
BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್
Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ