Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ
25 ಕೆಜಿ ಚಿನ್ನ ಕಳ್ಳ ಸಾಗಾಟ ಮಾಡುತ್ತಿದ್ದಾಗ ತಡೆ...! ಆದರೂ ಬಂಧನವಿಲ್ಲ
Team Udayavani, May 4, 2024, 8:52 PM IST
ಮುಂಬೈ: ದುಬೈನಿಂದ ಭಾರತಕ್ಕೆ ಸುಮಾರು 18 ಕೋಟಿ ರೂ.ಮೌಲ್ಯದ 25 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಸಿಕ್ಕಿಬಿದ್ದ ಅಫ್ಘಾನಿಸ್ಥಾನದ ಕಾನ್ಸುಲ್ ಜನರಲ್ ಅವರು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಭಾರತದಲ್ಲಿನ ಅತ್ಯಂತ ಹಿರಿಯ ಅಫ್ಘಾನ್ ರಾಜತಾಂತ್ರಿಕರಾಗಿರುವ ಝಕಿಯಾ ವಾರ್ಡಕ್ ಅವರು ತಮ್ಮ ನಿರ್ಧಾರದ ಬಳಿಕ ಪ್ರತಿಕ್ರಿಯೆ ನೀಡಿದ್ದು ‘ಇದು ವೈಯಕ್ತಿಕ ದಾಳಿ ಮತ್ತು ಮಾನನಷ್ಟ. ಈ ವ್ಯವಸ್ಥೆಯೊಳಗಿನ ಏಕೈಕ ಮಹಿಳಾ ಪ್ರತಿನಿಧಿಯನ್ನು ಅನ್ಯಾಯವಾಗಿ ಗುರಿಯಾಗಿಸುವ ಸಾರ್ವಜನಿಕ ನಿರೂಪಣೆ” ಎಂದು ಆರೋಪಿಸಿದ್ದಾರೆ.
ಏಪ್ರಿಲ್ ಕೊನೆಯ ವಾರದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ನಿಂದ ಎಂಎಸ್ ವಾರ್ಡಕ್ ಅವರನ್ನು ಭಾರೀ ಚಿನ್ನ ಸಹಿತ ತಡೆಯಲಾಗಿತ್ತು. ಚಿನ್ನವನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಲಾಗಿದೆ ಆದರೆ ರಾಜತಾಂತ್ರಿಕ ವಿನಾಯಿತಿ ಹೊಂದಿರುವ ಕಾರಣ ಆಕೆಯನ್ನು ಬಂಧಿಸಲಾಗಿಲ್ಲ.
ವಾರ್ಡಕ್ (58) ತನ್ನ ಪುತ್ರನೊಂದಿಗೆ ದುಬೈನಿಂದ ಆಗಮಿಸಿದ್ದರು. ಜ್ಯಾಕೆಟ್, ಲೆಗ್ಗಿನ್ಸ್, ಕ್ಯಾಪ್ ಮತ್ತು ಸೊಂಟದ ಬೆಲ್ಟ್ ನಲ್ಲೂ ಚಿನ್ನ ಅಡಗಿಸಲಾಗಿತ್ತು.
ರಾಜತಾಂತ್ರಿಕರನ್ನು ಅಫ್ಘಾನಿಸ್ಥಾನದಲ್ಲಿ ಹಿಂದಿನ ಅಶ್ರಫ್ ಘನಿ ಸರ್ಕಾರವು ನೇಮಿಸಿತ್ತು, 2021 ರಲ್ಲಿ ತಾಲಿಬಾನ್ನಿಂದ ಬದಲಾಯಿಸಲಾಗಿತ್ತಾದರೂ ಭಾರತ ಹಳೆ ನೇಮಕಗೊಂಡವರೊಂದಿಗೆ ಕಾರ್ಯನಿರ್ವಹಿಸುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: 55ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪೋಸ್ಟರ್ ಅನಾವರಣ
Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್ ಮಹಲ್ ಪ್ರತಿಸ್ಪರ್ಧಿ
Bihar: ಕಸ್ಟಡಿಯಲ್ಲಿದ್ದ ಅಪ್ರಾಪ್ತ ವಯಸ್ಕ ಪತ್ನಿ,ಪತಿ ಸಾವು; ಗ್ರಾಮಸ್ಥರಿಂದ ಠಾಣೆ ಧ್ವಂಸ
ಪತ್ನಿ ಹತ್ಯೆಗೈದು ಶವದೊಂದಿಗೆ ಸೆಲ್ಫಿ: ಸಂಬಂಧಿಕರಿಗೆ ಫೋಟೋ ಕಳುಹಿಸಿ ತಾನೂ ನೇಣಿಗೆ ಶರಣಾದ
Nuh; ಹೊತ್ತಿ ಉರಿದ ಮಥುರಾ ಭಕ್ತರಿದ್ದ ಬಸ್; ಎಂಟು ಮಂದಿ ಸಾವು