12ರಂದು ರಾಷ್ಟ್ರವ್ಯಾಪಿ ಪೆಟ್ರೋಲ್ ಬಂಕ್ ಮುಷ್ಕರ
Team Udayavani, Jul 4, 2017, 3:45 AM IST
ನವದೆಹಲಿ: ಪೆಟ್ರೋಲ್ ಬಂಕ್ಗಳಲ್ಲಿ ಶೇ.100ರಷ್ಟು ಸ್ವಯಂಚಾಲಿತ ವ್ಯವಸ್ಥೆ ಅಳವಡಿಸುವಲ್ಲಿ ತೈಲ ಕಂಪನಿಗಳ ವೈಫಲ್ಯ ಮತ್ತು ದೈನಂದಿನ ತೈಲ ದರ ನಿಗದಿಯಲ್ಲಿ ಪಾರದರ್ಶಕತೆಯ ಕೊರತೆಯನ್ನು ವಿರೋಧಿಸಿ ಇದೇ 12ರಂದು ರಾಷ್ಟ್ರವ್ಯಾಪಿ ಮುಷ್ಕರ ಕೈಗೊಳ್ಳಲು ಅಖೀಲ ಭಾರತ ಪೆಟ್ರೋಲ್ ವ್ಯಾಪಾರಿಗಳ ಒಕ್ಕೂಟ(ಎಐಪಿಡಿಎ) ನಿರ್ಧರಿಸಿದೆ.
ಅದರಂತೆ, 5ರಂದು ದೇಶಾದ್ಯಂತ ಪೆಟ್ರೋಲ್ ಬಂಕ್ಗಳು “ಖರೀದಿ ಮಾಡುವುದಿಲ್ಲ'(ನೋ ಪರ್ಚೇಸ್) ಎಂಬ ಪ್ರತಿಭಟನೆಯನ್ನು ನಡೆಸಲಿದ್ದು, 12ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದೇವೆ ಎಂದು ಒಕ್ಕೂಟದ ವಕ್ತಾರ ಅಲಿ ದಾರುವಲ್ಲಾ ತಿಳಿಸಿದ್ದಾರೆ.
ನಾವು ಜೂ.29ರಂದು ಸತತ 3 ಗಂಟೆಗಳ ಕಾಲ ತೈಲ ಕಂಪನಿಗಳೊಂದಿಗೆ ಈ ಬಗ್ಗೆ ಚರ್ಚಿಸಿದ್ದೇವೆ. ಆಗ ದರ ಸುರಕ್ಷತೆ ಕುರಿತು ನಮಗೆ ಕಂಪನಿಗಳು ಭರವಸೆ ನೀಡಿದ್ದವು. ಆದರೆ, ಇನ್ನೂ ಅದನ್ನು ಅನುಷ್ಠಾನಗೊಳಿಸಿಲ್ಲ. ಅದಕ್ಕಾಗಿ 5ರಂದು ತೈಲವನ್ನು ಖರೀದಿಸದೇ ಇರಲು, 12ರಂದು ಖರೀದಿ ಮತ್ತು ಮಾರಾಟ ಎರಡನ್ನೂ ಮಾಡದಿರಲು ನಿರ್ಧರಿಸಿದ್ದೇವೆ ಎಂದೂ ಹೇಳಿದ್ದಾರೆ ದಾರುವಲ್ಲಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ